ಜಮಖಂಡಿ,21 : ತಾಲುಕಿನ ವಿಜಯಪುರ ಮುಖ್ಯರಸ್ತೆಯ ಚಿಕ್ಕಲಕಿ ಕ್ರಾಸ್ ಬಳಿ ಇರುವ ಕಂದಾಯ ಇಲಾಖೆಯ 10 ಎಕರೆ ಜಮೀನನ್ನು ಶಾಸಕ ಜಗದೀಶ ಗುಡಗುಂಟಿ ಬುಧವಾರ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ತಾಲುಕಿನಲ್ಲಿ ತೋಟಗಾರಿಕೆ ಬೆಳೆಗಳಾದ ಕಬ್ಬು, ದ್ರಾಕ್ಷಿ, ದಾಳಿಂಬೆ, ಪಪ್ಪಾಯಿ, ಸಪೋಟಾ, ಮುಂತಾದವುಗಳನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಠಿಯಿಂದ ಹೊಸ ತಳಿಗಳ ಸಂಶೋಧನೆ, ಸಸಿಗಳ ತಯಾರಿಗೆ ಮುಂತಾದ ಅನುಕೂಲತೆಗಳನ್ನು ಕಲ್ಪಿಸುವ ಉದ್ದೇಶ ದಿಂದ ತೋಟಗಾರಿಕೆ ಇಲಾಖೆಗೆ ಸದರಿ ಜಮೀನು ಅವಶ್ಯವಾಗಿದೆ ಆದ್ದರಿಂದ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ನಿಯಮಾನುಸಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತೋಟಗಾರಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ರೈತರ ಹಿತ ದೃಷ್ಠಿಯಿಂದ ತೋಟಗಾರಿಕಾ ಬೆಳೆಗಳ ಉತ್ತೇಜನಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವದು ಎಂದು ತಿಳಿಸಿದರು. ಸಹಾಯಕ ನಿರ್ದೇಶಕ ಸಚಿನ ಮಾಚಕನೂರ, ಕಂದಾಯ ಇಲಾಖೆ ಅಧಿಕಾರಿಗಳು ರೈತ ಮುಖಂಡರು ಅಧಿಕಾರಿಗಳುಇದ್ದರು.
