Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತರಿಗೆ ೫ ಸಾವಿರ ರೂ. ಪತ್ತು ಹೆಚ್ಚಳ : ಆರ್ ಎಮ್ ಯತ್ತಿನಮನಿ

ನೇಸರಗಿ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರು ಮುಂದಿನ ಸಾಲ ವಿತರಣೆಯಲ್ಲಿ ಸೋಯಾಬಿನ್ ಬೆಳೆಗೆ ಪತ್ತು ಹೆಚ್ಚಳ ಆಗಿ ರೈತರು ಎಕರೆಗೆ ೫ ಸಾವಿರ ರೂಪಾಯಿಗಳನ್ನು ಹೆಚ್ಚಿಗೆ ಪಡೆಯುತ್ತಿರಿ ಎಂದು ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿ. ನೇಸರಗಿ ಇದರ ಅಧ್ಯಕ್ಷರಾದ ರಾಜಶೇಖರ ಯತ್ತಿನಮನಿ ಹೇಳಿದರು.
ಅವರು ಗುರುವಾರದಂದು ಇಲ್ಲಿನ ಸಹಕಾರಿ ಸಂಘದ ಮುಂದೆ ಇರುವ ಶ್ರೀ ದೇಮ್ಮವನ ಕಟ್ಟೆ ಆವರಣದಲ್ಲಿ ಆಯೋಜಿಸಲಾಗಿದ್ದ ಪಿ ಕೆ ಪಿ ಎಸ್ ನ ೧೧೮ ನೇ ಸರ್ವ ಸದಸ್ಯರ ಸಾಧಾರಣ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಹಕಾರಿ ಸಂಘಗಳ ನಿಯಮಗಳ ಹಾದಿಯಲ್ಲಿ ರೈತರಿಗೆ ಬೇಕಾದ ವ್ಯವಸ್ಥೆ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ೧೦೦ ವರ್ಷದ ಉನ್ನತ ಮಟ್ಟದ ಕಾರ್ಯಕ್ರಮವನ್ನು ಸದಸ್ಯರು, ಹಿರಿಯರೊಂದಿಗೆ ಚರ್ಚಿಸಿ ಆಚರಣೆಗೆ ಕ್ರಮ ಕೈಗೊಳ್ಳಲಾಗುವದು ಎಂದರು.
ಸಂಘದ ಕಾರ್ಯನಿರ್ವಾಹಕ ವಿಶ್ವನಾಥ ಕೂಲಿನವರ ವರದಿ ವಾಚನ ಮಾಡಿ ಸಂಘವು ೧೨೫೮ ಶೇರು ಸದಸ್ಯರನ್ನು ಹೊಂದಿದ್ದು ೪೫,೯೬,೨೪೫ ರೂ. ಗಳ ಶೇರು ಬಂಡವಾಳ ಹೊಂದಿ ಪ್ರಸಕ್ತ ವರ್ಷ ೨,೫೪,೨೬೭. ೨೮ ರೂ.ಗಳ ಲಾಭ ಗಳಿಸಿದೆ ಮತ್ತು ಬೀಜ ಮತ್ತು ಯೂರಿಯಾ ಗೊಬ್ಬರ ವ್ಯವಸ್ಥೆ ಸುಗಮವಾಗಿ ರೈತರಿಗೆ ಒದಗಿಸಲಾಗುತಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಸಹಕಾರಿಯ ಬೆಳವಣಿಗೆಗೆ ಹಾಗೂ ರೈತರ ಅನೇಕ ಸವಲತ್ತುಗಳಿಗೆ ಅನೇಕ ಸದಸ್ಯರು ಸಲಹೆ, ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ರತ್ನಾ ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ವೀರಪ್ಪಣ್ಣ ಚೋಭಾರಿ, ಮಲ್ಲೇಶಪ್ಪ ಮಾಳಣ್ಣವರ, ಎಸ್ ಎಮ್ ಪಾಟೀಲ, ಮಹಾಂತೇಶ ಸತ್ತಿಗೇರಿ, ಗಂಗಪ್ಪ ಕಾಡಣ್ಣವರ, ಶ್ರೀಮತಿ ಅನ್ನಪೂರ್ಣ ರೊಟ್ಟಿ, ಸಿದ್ದಪ್ಪ ತುಳಜನ್ನವರ, ಫಕ್ಕಿರಪ್ಪಾ ಸೋಮಣ್ಣವರ, ಫಕ್ಕಿರಪ್ಪ ತೋಟಗಿ, ಯಲ್ಲಪ್ಪ ತಳವಾರ, ಸಾವಿತ್ರಿ ಕೋಲಕಾರ, ಸುರೇಶ ಖಂಡ್ರಿ, ಮಕಬುಲ್ ಬೇಪಾರಿ, ಮತ್ತು ಗ್ರಾಮದ ಮುಖಂಡರಾದ ಅಡಿವಪ್ಪ ಮಾಳಣ್ಣವರ, ಸೋಮಪ್ಪ ಸೋಮಣ್ಣವರ, ಶಂಕರ ತಿಗಡಿ,ಸಿದ್ದಪ್ಪ ಇಂಚಲ, ಎಮ್ ಟಿ ಪಾಟೀಲ, ಮಹಾಂತೇಶ ಕೂಲಿನವರ,ದೇಮಣ್ಣ ಗುಜನಟ್ಟಿ, ಶಿವನಪ್ಪ ಮದೇನ್ನವರ, ಸುಜಾತ ಪಾಟೀಲ,ಅಡಿವಪ್ಪ ಚಿಗರಿ, ಶೇಖರ ಕಾರಜೋಳ, ಮಲ್ಲಪ್ಪ ಗುಜನಟ್ಟಿ,ಬಸವರಾಜ ಚಿಕ್ಕನಗೌಡ್ರ, ಸಹಕಾರಿಯ ಸದಸ್ಯರು, ನೇಸರಗಿ, ಸೋಮನಟ್ಟಿ ಗ್ರಾಮದ ರೈತರು, ಗ್ರಾಮದ ಮುಖಂಡರು, ಗ್ರಾಮಸ್ಥರು,ಸಂಘದ ಸಿಬ್ಬಂದಿ ಪಾಲ್ಗೊಂಡಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ