ಹೊಸಪೇಟೆ 15:..ನಗರದ ಹಳೆ ಪಲ್ಲೆಕಟ್ಟಿಯ ಹತ್ತಿರ ವಿಜಯನಗರ ಶ್ರೀ ಲಕ್ಷ್ಮೀನರಸಿಂಹ ಸೌಹಾರ್ದ ಸಹಕಾರ ಸಂಘ ನಿಯಮಿತ ಎಂಬ ಸಹಕಾರ ಸಂಘವನ್ನು ಜೋಗದ ಶ್ರೀಗಳಾದ ಶ್ರೀ ದಿಗಂಬರ ರಾಜಭಾರತಿ ಮಹಾರಾಜ್ ಮಹಾಸ್ವಾಮಿಗಳು ದೀಪ ಬೆಳಗಿಸುವರ ಮೂಲಕ ಉದ್ಘಾಟಿಸಿ ಆಶೀರ್ವದಿಸಿದರು.
ನಗರದ ಹಳೆ ಪಲ್ಲೆಕಟ್ಟಿಯ ಹತ್ತಿರ ಈ ಸಹಕಾರ ಸಂಘವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು ಜನರ ಅಶೋತ್ತರಗಳಿಗೆ ಸ್ಪಂದಿಸಿ ಈ ಸಹಕಾರ ಸಂಘವು ಕಾರ್ಯನಿರ್ವಹಿಸಿ ಯಶಸ್ವಿಯಾಗಲೆಂದು ಹಾರೈಸಿ ಆಶೀರ್ವದಿಸಿದರು.
ಸ್ಥಳೀಯ ಯುವಕರು ಬಡ ಜನರಿಗೆ, ಕೂಲಿ ಕಾರ್ಮಿಕರಿಗೆ ಮತ್ತು ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಸಹಕಾರ ಸಂಘವನ್ನು ಸ್ಥಾಪಿಸಿದ್ದು ಜನತೆಯ ಸಹಕಾರ ಬೆಂಬಲವನ್ನು ಕೋರಿದರು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಎಲ್ಲಾ ಪದಾಧಿಕಾರಿಗಳು, ವಿವಿಧ ಕೇರಿಯ ಯಜಮಾನರು, ಮುಖಂಡರು, ಯುವಕರು ಮತ್ತಿತರರು ಭಾಗವಹಿಸಿ ಶುಭ ಕೋರಿದರು.
