ಕಾಗವಾಡ: ಜನಶಕ್ತಿ ಸೇವಾ ಸಂಘವು ದೇಶದಲ್ಲಿ ಹಾಗು ರಾಜ್ಯದಲ್ಲಿ ಮಾದರಿ ಸಂಘವಾಗಲ್ಲಿ
ಎಂದು ಉಗಾರ ಶುಗರ್ಸ ಕಾರ್ಖಾನೆಯ ಜನರಲ್ ಮ್ಯಾನೇಜರ್ ಅನಂತ ಸಿದ್ದಾಂತಿ ಶುಭ ಹಾರೈಸಿದರು.
ಅವರು ಸಮೀಪದ ಉಗಾರಖುರ್ದ ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ಜನಶಕ್ತಿ ಸೇವಾ ಸಂಘವನ್ನು ಡಾ.ಬಿ ಆರ್ ಅಂಬೇಡ್ಕರ್ ಹಾಗೂ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಜನರ ಶಕ್ತಿ ದೇಶದ ಶಕ್ತಿ ಉಗಾರ ಖುರ್ದ ನಗರ ಜನರಿಗೆ ಸುತ್ತಮುತ್ತಲಿನ ನೊಂದ,ನಿರ್ಗತಿಕ ಜನರಿಗೆ ಅನುಕೂಲವಾಗಲಿ ಹಾಗೂ ಕಾನೂನು ಚೌಕಟ್ಟಿನಲ್ಲಿ ಈ ಸಂಘ ಸ್ಪಂದಿಸಲಿ ಎಂದರು.
ಅತಿಥಿಗಳಾಗಿ ಅಥಣಿ ನ್ಯಾಯವಾದಿ
ರಾಘವೇಂದ್ರ ಹಳಿಂಗಳಿ ಮಾತನಾಡುತ್ತ, ಕಾನೂನು ದೃಷ್ಟಿಯಲ್ಲಿ ಎಲ್ಲರೂ ಸಮಾನರು ಇಲ್ಲಿ ಮೇಲು-ಕೀಳು ಎಂಬ ಭೇದವಿಲ್ಲದೆ ಎಲ್ಲರೂ ಕೂಡಿಕೊಂಡು ಸಂಘವನ್ನು ಬೆಳೆಸಬೇಕು ಎಂದ ಅವರು ಘನ ನೇತೃತ್ವ ವಹಿಸಿದ ಕಾಗವಾಡ ಮತಕ್ಷೇತ್ರ ಯುವನಾಯಕ ನ್ಯಾಯವಾದಿ ರಾಹುಲ ಕಟಗೇರಿಯವರು ಚಿಕ್ಕವಯಸ್ಸಿನಲ್ಲೇ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದರು.
ಇ ಸಂದರ್ಭದಲ್ಲಿ ನ್ಯಾಯವಾದಿ ವಿಜಯ ದೇಸಾಯಿ, ಹಿರಿಯರಾದ ವಿರಭದ್ರ ಕಟಗೇರಿ,ವಿನಾಯಕ ಕಾಂಬಳೆ,ರಾಜು ಯಶವಾಡೆ,ದಾವಲಮಲಿಕ ಜಮಖಾನೆ,ಹಾರೂಣ ಮುಲ್ಲಾ,ಶಾನೂರ ಜಮಖಾನೆ ದಿಲಿಪ ಕಾಂಬಳೆ,ಹಾಜಿಸಾಬ ಶೇಖ,ತೋಪೇಲಹ್ಮದ ಮುಜಾವರ, ಮುಬಾರಕ ನದಾಪ, ಕುಮಾರ ಯಾದವ ಜೈನುದಿನ ಇನಾಮದಾರ, ಚಂದ್ರಕಾಂತ ಶೇಟ್ಟಿ, ರಾಮಾ ಕಾಂಬಳೆ ಹಾಗೂ ಪಟ್ಟಣದ ನಾಗರಿಕರು ಸೇರಿದಂತೆ ಇತರರು ಇದ್ದರು.
ನ್ಯಾಯವಾದಿ ರಾಹುಲ ಕಟಗೇರಿ ನಿರೂಪಿಸಿ ವಂದಿಸಿದರು.