Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೇ.31 ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಉದ್ಘಾಟನೆ

ಬಳ್ಳಾರಿ, ಮೇ.29:  ಛಲವಾದಿ ಸಮುದಾಯದ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು ಸೇರಿದ ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘ  ಅಸ್ಥಿತ್ವಕ್ಕೆ ತರಲಾಗಿದೆ. ಇದರ ಉದ್ಘಾಟನೆ ಮತ್ತು ಎಸ್ ಎಸ್ ಎಲ್ ಸಿ  ಮತ್ತು ದ್ವಿತಿಯ ಪಿಯುನಲ್ಲಿ  ಶೇ 75 ಕ್ಕಿಂತ ಹೆಚ್ಚು ಅಂಕಪಡೆದ  ಸಮುದಾಯದ ವಿದ್ಯಾರ್ಥಿಗಳಿಗೆ  ಪ್ರತಿಭಾ ಪುರಸ್ಕಾರದ  ಕಾರ್ಯಕ್ರಮ ಮೇ.31 ರಂದು ಬೆಳಿಗ್ಗೆ 11 ಕ್ಕೆ  ನಗರದ ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ಹಮ್ಮಿಕೊಂಡಿದೆ ಎಂದು ಸಂಘದ ಅಧ್ಯಕ್ಷ ಗೂಳಪ್ಪ  ಹೇಳಿದ್ದಾರೆ.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಕಾರ್ಯಕ್ರಮದ ಮಾಹಿತಿ ನೀಡಿ,
ನಮ್ಮ ಸಂಘ ಹೋರಾಟ ಮಾಡುವ  ಸಂಘ ಅಲ್ಲ. ಹೋರಾಟದಿಂದ ದೂರ. ಅಂಬೇಡ್ಕರ್, ಓಬವ್ವ ಜಯಂತಿ ಆಚರಣೆ ಮಾಡಲಿದೆ. ಕಲ್ಯಾಣ ನಿಧಿ ಸ್ಥಾಪನೆ, ಶಿಕ್ಷಣಕ್ಕೆ ಒತ್ತು ನೀಡಿ ಸಮುದಾಯದ ಮಕ್ಕಳಿಗೆ ಸ್ಪರ್ಧಾತ್ಮಕ ತರಬೇತಿ ನೀಡುವುದು. ಅನ್ಯಾಯವಾದಾಗ ಅದರ ವಿರುದ್ದ
ಶಾಂತಿಯುತವಾಗಿ ಮನವಿಗಳ ಮೂಲಕ ನ್ಯಾಯ ದೊರಕಿಸುವ ಪ್ರಯತ್ನ ಮಾಡಲಿದೆ. ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಲಿದೆಂದರು.
ಕಾರ್ಯಕ್ರಮದಲ್ಲಿ  ಜ್ಞಾನಪ್ರಕಾಶ ಸ್ವಾಮೀಜಿ ಉರಿಲಿಂಗ, ಪೆದ್ದಿ ಮಠ ಮೈಸೂರು,  ಬಸವನಾಗಿದೇವ ಸ್ವಾಮೀಜಿ, ಛಲವಾದಿ ಮಹಾಮಠ, ಚಿತ್ರದುರ್ಗ,  ಕಮಲರತ್ನ ಭಂತೇಜಿ, ಭಾರತೀಯ ಬೌದ್ಧ ಮಹಾಸಭಾ ಇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ.
ಉದ್ಘಾಟನೆಯನ್ನು ಛಲವಾದಿ ಸಮುದಾಯದ  ಮುಖಂಡರು,   ಸಚಿವರಾದ  ಡಾ.ಜಿ. ಪರಮೇಶ್ವರ, ಡಾ. ಹೆಚ್.ಸಿ. ಮಹಾದೇವಪ್ಪ,  ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಬಿ.ಝಡ್. ಜಮೀರ್ ಅಹಮದ್ ಖಾನ್,ಕರ್ನಾಟಕ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ
ಅಬ್ಬಯ್ಯ ಪ್ರಸಾದ್, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ  ಪಿ.ಎಂ. ನರೇಂದ್ರಸ್ವಾಮಿ ನೆರವೇರಿಸಲಿದ್ದಾರೆ.ಜೊತೆಗೆ ಜಿಲ್ಲೆಯ ಜನಪ್ರತಿನಿಧಿಗಳು, ಸಮುದಾಯದ ಶಾಸಕರು ಸಂಸದರು ಪಾಲ್ಗೊಳ್ಳಲಿದ್ದಾರೆ.
ಪ್ರತಿಭಾ ಪುರಸ್ಕಾರ ಪ್ರದಾನವನ್ನು  ಹೆಚ್. ಸಿದ್ದಯ್ಯ,  ರಾಜ್ಯಾಧ್ಯಕ್ಷರು, ಕರ್ನಾಟಕ ಛಲವಾದಿ ಮಹಾಸಭಾ, ಡಿಸಿ  ನಾಗೇಂದ್ರ ಪ್ರಸಾದ್, ವಾಣಿ ಕೆ. ಶಿವರಾಮು, ರಾಜ್ಯಾಧ್ಯಕ್ಷರು, ಛಲವಾದಿ ಮಹಾಸಭಾ, ಡಾ. ಮೂರ್ತಿ .ಎಲ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಯೋಗ,  ಕೆ.ಎಸ್. ಗಂಗಾಧರಯ್ಯ, ಕಾರ್ಯನಿರ್ವಾಹಕ ನಿರ್ದೇಶಕರು,  ಸಿ.ಎನ್. ಜ್ಯೋತಿಲಕ್ಷ್ಮಿ ಚೀಫ್ ಇಂಜಿನಿಯರ್,   ರಮೇಶ್,  ಎ.ಜಿ.ಎಂ., ಕ.ವಿ.ನಿ.ನಿ. ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ, ಕುಡತಿನಿ ಅವರು ನಡೆಸಿಕೊಡಲಿದ್ದಾರೆ.
:ನಿವೃತ್ತ ನೌಕರರಿಗೆ ಗೌರವ ಪುರಸ್ಕಾರ :
ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಮಾನಯ್ಯ, ಮಾಜಿ ಅಧ್ಯಕ್ಷರು, ಕೇಂದ್ರ ಪರಿಹಾರ ಸಮಿತಿ,  ಹೆಚ್.ಕೆ. ಬಸವರಾಜು, ಮಾಜಿ ರಾಜ್ಯಾಧ್ಯಕ್ಷರು ಛಲವಾದಿ ಮಹಾಸಭಾ ಇವರು ಸಮುದಾಯದ ನಿವೃತ್ತ ನೌಕರರಿಗೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಿದ್ದಾರೆಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ  ಸಂಘದ ಗೌರವ ಅಧ್ಯಕ್ಷ ಸೋಮನಾಥ, ಸಮುದಾಯದ ಮುಖಂಡರುಗಳಾದ ಸಿ..ನರಸಪ್ಪ, ಸಿ.ಮಂಜುನಾಥ, ಹನುಮಪ್ಪ, ಶಂಕರ್ ನಂದಿಹಾಳ್, ವಿಲಾಶ್ ಮಾನ್ಕರ್, ಹನುಮೇಶ್, ಜೆ.ಎಸ್.ಶ್ರೀನಿವಾಸುಲು. ಮೊದಲಾದವರು ಇದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*