ಬಳ್ಳಾರಿ. ಮೇ. 14:. ದೇಶದ ಜನರ, ದೇಶದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಚಿನ್ನ ಖರೀದಿ ಕುರಿತು ನೀಡಿದ ಹೇಳಿಕೆ ಗೆ, ಕಾಂಗ್ರೆಸ್ ನವರು ರಾಜಕೀಯ ಚಟಕ್ಕಾಗಿ ಮೋದಿ ಅವರ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ, ಮೋದಿ ಅವರು ಏನೇ ತೀರ್ಮಾನ ಕೈಗೊಂಡರೂ ಅದು ದೇಶದ ಜನರ, ಅಭಿವೃದ್ಧಿ ಪೂರಕವಾಗಿಯೇ ಇರಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿದ ಅವರು, ಪ್ರಧಾನ ಮಂತ್ರಿ ಮೋದಿ ಅವರು ತೆಗೆದುಕೊಂಡ ಯಾವುದೇ ನಿರ್ಧಾರ, ಅದು ದೇಶದ ಅಭಿವೃದ್ಧಿಗಾಗಿ ಇರಲಿದೆ, ದೇಶದ ಜನರ ಸುಭಿಕ್ಷೆಗಾಗಿ ಇರಲಿದೆ, ಇದರಲ್ಲಿ ಅನುಮಾನವೇ ಬೇಡ, ಮೋದಿ ಅವರು ತೆಗೆದುಕೊಂಡ ತೀರ್ಮಾನವನ್ನು ನಾವೆಲ್ಲರೂ ಸ್ವಾಗತಿಸಬೇಕು, ಗೌರವಿಸಬೇಕು. ಈ ಹಿಂದೆ ಕಳೆದ 1967ರಲ್ಲಿ ಇಂದಿರಾ ಗಾಂಧಿ ಅವರು, ಚಿನ್ನ ಖರೀದಿ ಅದಷ್ಟು ಕೈಬಿಡಿ, ರಾಷ್ಟ್ರೀಯ ಶಿಸ್ತು ಎಂದು ಹೇಳಿಕೆ ನೀಡಿ ಮನವಿ ಮಾಡಿದ್ದರು ಎಂಬುದನ್ನು ಕೈ ನಾಯಕರು ಮರೆಯಕೂಡದು. ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ಮಾಡಲು ಆದ್ಯತೆ ನೀಡಿ, ಒಂದು ವರ್ಷದ ವರೆಗೆ ಆದಷ್ಟು ಚಿನ್ನ, ಖರೀದಿಸುವುದನ್ನು ನಿಲ್ಲಿಸಿ, ಪೆಟ್ರೋಲ್, ಡೀಸೆಲ್, ಬಳಕೆಯನ್ನು ಕಡಿಮೆ ಮಾಡಿ, ಮೆಟ್ರೋ, ಸಾರ್ವಜನಿಕ ಸಾರಿಗೆ ಬಳಕೆ ಮಾಡಿ, ಅಡುಗೆ ಎಣ್ಣೆಯ ಬಳಕೆ ಕಡಿಮೆ ಮಾಡಿ, ರಾಸಾಯನಿಕ ರಸಗೊಬ್ಬರ ಮೇಲಿನ ಅವಲಂಬನೆ ಕಡಿಮೆ ಮಾಡಿ, ನೈಸರ್ಗಿಕ ಕೃಷಿಯತ್ತ ಮುನ್ನಡೆಯರಿ, ವಿದೇಶಿ ಬ್ರ್ಯಾಂಡ್ ಉತ್ಪನ್ನಗಳನ್ನು ಕಡಿಮೆ ಮಾಡಿ, ಸ್ವದೇಶಿ ವಸ್ತುಗಳನ್ನು ಹೆಚ್ಚು ಬಳಸಿ, ಕನಿಷ್ಠ 1 ವರ್ಷ ವಿದೇಶಿ ಪ್ರವಾಸವನ್ನು ತಪ್ಪಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ, ಎಲ್ಲರೂ ದೇಶಕ್ಕಾಗಿ, ದೇಶದ ಜನರಿಗಾಗಿ ಪಾಲಿಸಬೇಕು, ಕಾಂಗ್ರೆಸ್ ನವರ ರಾಜಕೀಯ ಚಟದ ಹೇಳಿಕೆಗೆ ಕಿವಿಕೊಡಬಾರದು ಎಂದು ಮನವಿ ಮಾಡಿದ್ದಾರೆ.
