ಹುಕ್ಕೇರಿ,ಮೇ,೧೨ : ಹುಕ್ಕೇರಿ ತಾಲೂಕಿನ ರೈತರ ಬಾಳಿಗೆ ಸ್ವಾತಂತ್ರ ದೊರೆತು ೮೦ ವರ್ಷಗಳಾದರೂ ಸಹ ಅವರ ಆರ್ಥಿಕ ಸ್ವಾವಲಂಭನೆಗೆ ಸಿಗಬೇಕಾದ ಮೂಲಭೂತ ಸೌಕರ್ಯವಾದ ನೀರು, ಇನ್ನೂವರೆಗೂ ಗಗನ ಕುಸುಮವಾಗಿದೆ.
ತಾಲೂಕಿನ ನೂರಾರು ಹಿರಿಯ ರೈತರ ಪರಿಶ್ರಮ, ತ್ಯಾಗದ ಪ್ರತಿಕವಾಗಿ, ಹಲವಾರು ಹಿರಿಯ ಸಹಕಾರಿಗಳು, ಬುದ್ದಿ ಜೀವಿಗಳು, ಅಲ್ಲದೇ ಎಷ್ಟೋ ಜನ ರೈತರು ತಮ್ಮ ಮನೆ ಹೊಲ ಗದ್ದೆಗಳನ್ನು ದಾನ ನೀಡಿ ತಾಲೂಕಿನ ನನ್ನ ಜನ ಮುಂದೆ ಏಂದೂ ಯಾವದೇ ಕಾರಣಕ್ಕೂ ನೀರಿಗಾಗಿ ಪರಿತಪ್ಪಿಸ ಬಾರದು ಎಂಬ ಮಹತ್ತರ ಉದ್ದೇಶವನ್ನು ಹೊಂದಿ ತಾಲೂಕಿನ ಜನರ ಒಳಿತಿಗಾಗಿ ಎರಡು ಡ್ಯಾಮಗಳನ್ನು ನಿರ್ಮಿಸಿದ್ದಾರೆ.
ಆದರೇ ಇವತ್ತಿನ ದಿನ ತಾಲೂಕಿನ ಮುಗ್ಧ ಜನ ತಮ್ಮ ದನ ಕರು ಜಾನುವಾರುಗಳಿಗೆ ಕುಡಿಯಲು ನೀರು ಸಿಗದೆ ಕೃಷಿ ಕೆಲಸಕ್ಕೆ ನೀರು ಸಿಗದೆ ನೀರಿಗಾಗಿ ಪರದಾಡುವಂತಾಗಿದೆ, ತಾಲೂಕಿನ ರೈತರಲ್ಲಿ ಶೇಕಡಾ ೬೦ ರಷ್ಟು ಜನ ಮಳೆ ಆಶ್ರಿತ ಕೃಷಿ ಕಾಯಕ ಮಾಡುತ್ತಿದ್ದಾರೆ, ನೀರಿನ ಅಂತರ ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿವುತ್ತಿದೆ, ತಾಲೂಕಿನ ರೈತ ಕುಟುಂಬದ ಯುವಕರು ಶಹರಗಳಿಗೆ ಕೃಷಿಯನ್ನು ಬಿಟ್ಟು ಬೇರೆ ಕೆಲಸಕ್ಕೆ ಹೋಗುತ್ತಿದ್ದಾರೆ.
ಇಂತಹ ದುಸ್ತರ ಪರಿಸ್ಥಿತಿ ತಾಲೂಕಿನಲ್ಲಿ ಇರುವಾಗ ಮಾನ್ಯ ರಾಜ್ಯ ಸರಕಾರ ಹುಕ್ಕೇರಿ ತಾಲೂಕಿನಲ್ಲಿಯ ಡ್ಯಾಮ ನೀರನ್ನು ಧಾರವಾಡದ ಕೈಗಾರಿಕೆಗೆ ಪೂರೈಸುವ ಯೋಜನೆಯನ್ನು ರೂಪಿಸಿ ಕೆಲಸ ಪ್ರಗತಿ ಯಲ್ಲಿದೆ. ಇದನ್ನು ಪ್ರಶ್ನೀಸದ ಸ್ಧಳೀಯ ಯಾವ ಒಬ್ಬ ಶಾಸಕ, ಲೋಕಸಭೆ ಸದಸ್ಯ ಇವರ ಈ ಮಲತಾಯಿ ನೀತಿಯನ್ನು ಧಿಕ್ಕರಿಸಿವುದು.
ತಾಲೂಕಿನಲ್ಲಿ ಹತ್ತಾರು ವಷ೯ಗಳಿಂದ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನಗಳಾದ ಮಲ್ಲಿಕಾಜು೯ನ ಎತ ನೀರಾವರಿ ಯೋಜನೆ, ಕುರಣಿ ಎತ ನೀರಾವರಿ ಯೋಜನೆ,ಕೋಚರಿ ಎತ ನೀರಾವರಿ ಯೋಜನೆ,ಹಿರಣ್ಯಕೇಶಿ ಎತ ನೀರಾವರಿ ಯೋಜನೆ,ರುಸ್ತುಂಪೂರ ಎತ ನೀರಾವರಿ ಯೋಜನೆ,ಉಳ್ಳಾಗಡಿ ಖಾನಾಪೂರ ಗ್ರಾಮದ ಕೆರೆ ತುಂಬುವ ಯೋಜನೆ, ಅಲ್ಲದೇ ತಾಲೂಕಿನ ಅವಳಿ ನಗರಗಳಾದ ಸಂಕೇಶ್ವರ ಹಾಗೂ ಹುಕ್ಕೇರಿ ನಗರಗಳಿಗೆ ೨೪/೭ ಕುಡಿಯುವ ನೀರಿನ ಯೋಜನೆಯನ್ನು ಯಶಸ್ವಿಗೋಳಿಸುವ ಕುರಿತು ಇದೇ ದಿನಾಂಕ ೨೦-೦೫-೨೦೨೬ ರಂದು ಹುಕ್ಕೇರಿ ನಗರದ ಕೋಟ೯ಸಕ೯ಲದಲ್ಲಿ ತಾಲುಕಿನ ಎಲ್ಲಾ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ,ತಾಲುಕಿನ ಸಮಗ್ರ ನೀರಾವರಿ ಆಗುವವರೆಗೆ ಕನಾ೯ಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ರಾಜ್ಯಾಧ್ಯಕ್ಷರಾದ ಶ್ರೀ ಚೂನಪ್ಪ ಪೂಜೇರಿ ಹಾಗೂ ರಾಜ್ಯ ಗೌರವಾಧ್ಯಕ್ಷರಾದ ಶ್ರೀ ಶಶೀಕಾಂತ ಪಡಸಲಗಿ ಗೂರುಜಿ ಇವರ ನೇತ್ರತ್ವದಲ್ಲಿ ಬೃಹತ ಪ್ರಮಾಣದಲ್ಲಿ ಅನಿದಿ೯ಷ್ಟ ಅವಧಿಯವರೆಗೆ ತಾಲೂಕನ್ನು ಸಂಪೂಣ೯ ನೀರಾವರಿ ಮಾಡುವವರೆಗೆ ಹೋರಾಟ ಹಮ್ಮಿಕೊಳ್ಳಲಾಗಿದೆ.
ಸದರಿ ಹೋರಾಟದಿಂದ ತಾಲೂಕಿನ ಸರಿಸುಮಾರು ೬೦ ಹಳ್ಳಿಗಳಿಗೆ ೧೮,೦೦೦ ಹೆಕ್ಟರ ಕೃಷಿ ಜಮೀನು ಸಂಪೂ೯ಣ ನೀರಾವರಿ ಕೃಷಿ ಜಮೀನಾಗಿ ಪರಿವತ೯ನೆ ಆಗಲಿದೆ.ಸದರಿ ಎಲ್ಲಾ ನೀರಾವರಿ ಯೋಜನೆಗಳ ಒಟ್ಟು ವೆಚ್ಚ ೧೦೩೦.೦೦ ಕೋಟಿ ರೂಗಳು ಅಂತಾ ಅಂದಾಜು ಮಾಡಲಾಗಿದೆ. ಈ ಯೋಜನೆಗಳ ಅನುಷ್ಠಾನದಿಂದ ತಾಲೂಕಿನ ಜನ ಮುಂದೇ ಎಂದೂ ನೀರಾವರಿಗಾಗಿ ಪರಿತಪ್ಪಿಸುವ ಪ್ರಮಯ ಬರುವದಿಲ್ಲ, ಹಾಗಾಗಿ ತಾಲೂಕಿನ ರೈತ ದೇವರುಗಳು, ಪ್ರಜಾವಂತ ಜನರು, ಸದರಿ ಹೋರಾಟದಲ್ಲಿ ಪಾಲ್ಗೋಂಡು ಹೋರಾಟ ಯಶಸ್ವಿಗೋಲಿಸ ಬೇಕಾಗಿ ವಿನಂತಿ.
