ರಾಮದುರ್ಗ: ತಾಲೂಕಿನ ಕಟಕೋಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೧೪ ವರ್ಷದ ಎಲ್ಲಾ ಹೆಣ್ಣು ಮಕ್ಕಳಿಗೆ ಹೆಚ್.ಪಿ.ವಿ ಲಸಿಕೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ| ಶ್ರೀಶೈಲ ಬೆವನೂರ ಮಾತನಾಡಿ, ಹೆಣ್ಣು ಮಕ್ಕಳಿಗೆ ಮುಂದೆ ಉಂಟಾಗಬವುದಾದ ಗರ್ಭ ಕಂಠದ ಕ್ಯಾನ್ಸರ್ ತಡೆಯುವಲ್ಲಿ ಈ ಹೆಚ್.ಪಿ.ವಿ ಲಸಿಕೆ ಪೂರಕವಾಗಿದೆ. ಆದ್ದರಿಂದ ಸರಕಾರ ಈಗ ೧೪ ವರ್ಷದ ಎಲ್ಲ ಹೆಣ್ಣು ಮಕ್ಕಳಿಗೆ ಈ ಲಸಿಕೆಯನ್ನು ನೀಡುವ ಕಾರ್ಯಕ್ಕೆ ಮುಂದಾಗಿದ್ದು, ೧೪ ವರ್ಷದ ಹೆಣ್ಣು ಮಕ್ಕಳು ಇದನ್ನು ಪಡೆದುಕೊಳ್ಳುವಲ್ಲಿ ಮುಂದಾಗಬೇಕು. ಕಟಕೋಳ ಪ್ರಾಥಮಿಕ ಆರೋಗ ಕೇಂದ್ರ ಶೇ. ೯೦ ರಷ್ಟು ಗುರಿ ಸಾಧಿಸಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ವಿ.ಎಸ್. ಯರಗುದ್ರಿ, ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಬಿ.ಜಿ. ಉಣಕಲ್ಲ, ಆಯುಷ್ಯ ವೈದ್ಯಾಧಿಕಾರಿ ಡಾ| ಪ್ರಿಯಾಂಕ ಜಗಮಯ್ಯನವರ, ಪಿ.ಎಚ್.ಸಿ.ಒ ಶಶಿಕಲಾ ಕಾಡಯ್ಯನವರ, ಸಿ.ಎಚ್.ಒ ಗಳಾದ ಉಮೇಶ ನಿಜಗುಲಿ, ಮಹಾಂತೇಶ ರೂಗಿ ಸೇರಿದಂತೆ ಇಲಾಖೆಯ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
