Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ಪುಟಾಣಿಗಳ ಬಣ್ಣದೋಕುಳಿ" ಪೋಷಕರು, ಸ್ನೇಹ ಬಳಗದೊಂದಿಗೆ ಹೋಳಿ ಸಂಭ್ರಮ! 

ಎಂ.ಕೆ.ಹುಬ್ಬಳ್ಳಿ, ಮಾರ್ಚ್ 26: ತರಹೇವಾರಿ ಬಣ್ಣಗಳು, ಬಣ್ಣ ಎರಚುವ ಕೋವಿ, ಬಣ್ಣ ಮಿಶ್ರಿತ ನೀರು ತುಂಬಿದ ಬಲೂನ್ಸ್ ಹಿಡಿದು ಪರಸ್ಪರ ಬಣ್ಣ ಎರಚಿದ ಪುಟಾಣಿಗಳು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಎಂ.ಕೆ.ಹುಬ್ಬಳ್ಳಿ, ದಾಸ್ತಿಕೊಪ್ಪ, ಶುಗರ್ ಫ್ಯಾಕ್ಟರಿ, ಹೊಳಿ ಹೊಸೂರು, ನೇಗಿನಹಾಳ ಹಾಗೂ ಸುತ್ತಲಿನ ಹಲವು ಹಳ್ಳಿಗಳಲ್ಲಿ ಸೋಮವಾರ ಮತ್ತು ಮಂಗಳವಾರ ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು.

               

ಕಾಮನನ್ನು ತಯಾರಿಸಿ ಇಡೀ ರಾತ್ರಿ ಹೋಳಿ ಹಾಡು, ತತ್ವಪದ, ಭಜನೆಗಳೊಂದಿಗೆ ಕಾಮನನ್ನು ಮೆರೆಸಿದ ಬುಧವಾರ ದಹಿಸಿ ಕೆಂಪು, ಕೇಸರಿ, ಹಳದಿ, ಹಸಿರು, ನೀಲಿ, ಗುಲಾಬಿ ಹೀಗೆ ವಿವಿಧ ಬಣ್ಣಗಳಲ್ಲಿ ಪುಟಾಣಿಗಳು, ಯುವಕ, ಯುವತಿಯರು ಮಿಂದೆದ್ದರು.

ಪುಟಾಣಿಗಳು ತಮ್ಮ ಪ್ರಿಯಕರ ಮತ್ತು ಸ್ನೇಹ ಬಳಗದೊಂದಿಗೆ ಖುಷಿಯಿಂದ ಬಣ್ಣದೋಕುಳಿ ಆಡಿದರು. ಹಿರಿಯರು, ಕಿರಿಯರು ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಸಂಭ್ರಮದ ಹೋಳಿ ಹಬ್ಬಕ್ಕೆ ಸಾಕ್ಷಿಯಾದರು.

ದಾಸ್ತಿಕೊಪ್ಪ ಗ್ರಾಮದಲ್ಲಿ ಬುಧವಾರ ಕಾಮನನ್ನು ದಹಿಸಿ ಬಣ್ಣದೋಕುಳಿ ಆಡಲಾಯಿತು. ಗ್ರಾಮದ ಬಸವೇಶ್ವರ ಓಣಿ ಹಾಗೂ ಶಾಂತಿ ನಗರದಲ್ಲಿ ಕಾಮನನ್ನು ದಹಿಸಿ ಪುಟಾಣಿಗಳು ಹಾಗೂ ಯುವ ಸಮೂಹ ಬಣ್ಣಗಳಲ್ಲಿ ಮಿಂದೆದ್ದರು.

ಶಾಂತಿನಗರದ ಪುಟಾಣಿಗಳಾದ ಸಾಹಿತ್ಯ, ಸಾನ್ವಿ, ಕೃತಿಕಾ, ಪ್ರಣೀತ, ಚಾರ್ವಿ, ಖುಷಿ, ರಿಷಿ, ಶ್ರೇಯಸ್, ಆರಾಧ್ಯ, ಕುಮಾರ, ಗಣೇಶ್, ಕಾವೇರಿ ಹಾಗೂ ಕಾಲನಿಯ ಎಲ್ಲ ಮಕ್ಕಳ ತರಹೇವಾರಿ ಬಣ್ಣಗಳಲ್ಲಿ ಮಿಂದೆದ್ದು ಸಂಭ್ರಮಪಟ್ಟರು.

ಆನಂದ ತಳವಾರ, ಮಂಜು ಕೋಲಕಾರ, ರುದ್ರಪ್ಪ ತಳವಾರ, ಬಸವರಾಜ ಕೋಲಕಾರ, ಮಾರುತಿ ಗಣಾಚಾರಿ, ಯಜಕಲ್ ಕೋಲಕಾರ, ಸಿದ್ಧರಾಮ ತಳವಾರ, ಪರಶುರಾಮ ತಳವಾರ, ಹಣಮಂತ ತಳವಾರ, ರಾಜು ತಳವಾರ, ಅಶೋಕ ಕೋಲಕಾರ, ಶೇಖರ ತಳವಾರ, ಮೈಲಾರ ಕೋಲಕಾರ, ಚಂದ್ರು ತಳವಾರ, ನಾಗರಾಜ ತಳವಾರ, ಪ್ರಕಾಶ ಕೋಲಕಾರ, ಪ್ರಕಾಶನ ತಳವಾರ , ಮೈಲಾರ, ಶ್ರೀಧರ, ಚೇತನ್ ಸೇರಿದಂತೆ ಶಾಂತಿ ಕಾಲನಿಯ ಪ್ರಮುಖರು, ಯುವಕರು ಹೋಳಿ ಹಬ್ಬವನ್ನು ಸಂಭ್ರಮದಿಂದ ಒಗ್ಗಟ್ಟಾಗಿ ಆಚರಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ