Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸುಃಖ, ಶಾಂತಿ, ಸಂಪತ್ತು, ನೆಮ್ಮದಿ ನೀಡುವ ಮೂಲಕ  ದೇಶದಲ್ಲಿ ಎಲ್ಲಾರೂ  ಸೌಹಾರ್ದತೆ,ಯಿಂದ ಭಾಳಬೇಕಿದೆ. ::  ಹೆಚ್.ಎನ್. ಮೊಹಮ್ಮದ ಇಮಾಮ್ ನಿಯಾಜಿ






ಹೊಸಪೇಟೆ : ನಗರದ ಹಳೆಯ ಐ ಎಸ್‌ಅರ್ ರಸ್ತೆಯಲ್ಲಿ ನ ಇದ್ಗಾ ದಲ್ಲಿ‌  ರಂಜಾನ್  ಹಬ್ಬವನ್ನು ಮುಸ್ಲಿಂ ಬಾಂಧವರು  ಸಂಭ್ರಮ ಮತ್ತು ಸಹೋದರತೆಯಿಂದ ಆಚರಿಸಿದರು. 

 

ನಗರದ  ವಿವಿಧ ಪ್ರದೇಶಗಳಿಂದ   ಸಾವಿರಾರು ಮುಸ್ಲಿಂ ಬಾಂಧವರು ಅಂಬೇಡ್ಕರ್ ಸರ್ಕಲ್ ಹತ್ತಿರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಂದುಗಳು ಹೊಸ ಬಟ್ಟೆ ಧರಿಸಿ, ದಾನ (ಫಿತರ್ ಝಕಾತ್) ನೀಡಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು,

ನಂತರ ಪರಸ್ಪರ ಅಲಂಗಿಸುವ ಮೂಲಕ ಹಬ್ಬದ  ಶುಭಾಶಗಳನ್ನು ತಿಳಿಸಿದರು,

 

 ಈದ್ಗಾ ಮೈದಾನದಲ್ಲಿ ಪ್ರಾರ್ಥನೆಯ ನಂತರ  ಹಬ್ಬವನ್ನು ಉದ್ದೇಶಿಸಿ ಹೊಸಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗು ಹೊಸಪೇಟೆ ಅಂಜುಮನ್ ಖಿದ್ಮತೆ ಇಸ್ಲಾಂ ಸಮಿತಿಯ ಅಧ್ಯಕ್ಷರಾದ   ಹೆಚ್.ಎನ್. ಮೊಹಮ್ಮದ ಇಮಾಮ್ ನಿಯಾಜಿ ರವರು ಮಾತನಾಡಿ ಎಲ್ಲಾ ಮುಸ್ಲಿಂ ಬಾಂಧವರು 3೦ ದಿನಗಳ ಉಪವಾಸವನ್ನು ಪೂರೈಸಿದ ನಂತರ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತೇವೆ ಎಂಬ ಪ್ರತೀಜ್ಞೆಯನ್ನು ಮಾಡುವ ಮೂಲಕ ಈ ಒಂದು ರಂಜಾನ್ ಹಬ್ಬದಂದು ಸಾಮೂಹಿಕ ಪ್ರಾರ್ಥನೆಯನ್ನು ಭಗವಂತನಿಗೆ ಸಲ್ಲಿಸಿರುತ್ತೇವೆ, 

 

ಈ ವರ್ಷದ ರಂಜಾನ್ ಹಬ್ಬವು ನಮ್ಮ ದೇಶದ  ಪ್ರತಿಯೊಬ್ಬರಿಗೂ ಸುಃಖ, ಶಾಂತಿ, ಸಂಪತ್ತು, ನೆಮ್ಮದಿ ನೀಡುವ ಮೂಲಕ  ದೇಶದಲ್ಲಿ ಎಲ್ಲಾರೂ  ಸೌಹಾರ್ದತೆ,  ಸಹೋದರ ವಾತ್ಸಲ್ಯದಿಂದ ಕೂಡಿ ಬಾಳಬೇಕು ಎಂದು  ಭಗವಂತನಲ್ಲಿ ಪ್ರಾರ್ಥಿಸುತ್ತಾ ಸಮಸ್ತ ನಾಡಿನ ಎಲ್ಲಾ ಜನತೆಗೆ ರಂಜಾನ್  (ಈದ್- ಉಲ್- ಫಿತರ್) ಹಬ್ಬದ ಹಾರ್ಧಿಕ ಶುಭಾಶಯಗಳನ್ನು ತಿಳಿಸಿದರು.

 

 ನಂತರ ಅಂಜುಮನ್ ಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು.

 

ನಗರದಲ್ಲಿ  ಸಮಸ್ತ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಗಳನ್ನು ಕೋರಿದರು. 

 

ನಗರದ ಆರ್.ಟಿ.ಓ. ಅಫೀಸ್ ಹಿಂಭಾಗದ ಈದ್ಗಾ ಮೈದಾನ, ಬಸ್ ಡಿಪೋ ಹತ್ತಿರ ಈದ್ಗಾ ಮೈದಾನ,  ಗುಲಾಬ್ ಷಾ ವಲಿ ದರ್ಗ ಈದ್ಗಾ ಮೈದಾನ,  ಚಿತ್ತವಾಡ್ಗಿ ಈದ್ಗಾ ಮೈದಾನ, ಕಾರಿಗನೂರು ಈದ್ಗಾ ಮೈದಾನ,  ನಾಗೇನಹಳ್ಳಿ ಈದ್ಗಾ ಮೈದಾನ , ಟಿ.ಬಿ. ಡ್ಯಾಮ್ ಈದ್  ವಿವಿಧೆಡೆ ಪ್ರಾರ್ಥನೆ ಸಲ್ಲಿಸಿದರು.

 

ಪ್ರಾರ್ಥನೆಯ ವೇಳೆ  ಅಂಜುಮನ್ ಕಮಿಟಿ ಉಪಾಧ್ಯಕ್ಷರಾದ ಎಮ್.ಎಮ್. ಫೈರೋಜ್ ಖಾನ್, ಕಾರ್ಯದರ್ಶಿಯಾದ ಅಬೂಬಕ್ಕರ್ ಅಶ್ರಫಿ, ಖಜಾಂಚಿಯಾದ ಅನ್ಸರ್ ಭಾಷ, ಜಂಟಿ ಕಾರ್ಯದರ್ಶಿಯಾದ ಡಾ|| ದುರ್ವೆಶ್ ಮೈನುದ್ದೀನ್, ಸದ್ಯಸರಾದ ಸದ್ದಮ್ ಹುಸೇನ್, ಮೊಹಮ್ಮದ್ ಮೋಸಿನ್, ಗುಲಾಮ್ ರಸೂಲ್, ಸಮಾಜದ ಮುಖಂಡರಾದ, ಖಲಂದರ್, ಗೌಸ್, ಸಮಾಜದ ಹಿರಿಯ ಮುಖಂಡರು ಹಾಗು ಸಾವಿರಾರು ಮುಸ್ಲಿಂ ಭಾಂದವರು  ಭಾಗವಹಿಸಿದರು.

 

ಒಂದು ತಿಂಗಳ ಕಠಿಣ ಉಪವಾಸದ (ರೋಜಾ) ನಂತರ, ಚಂದ್ರದರ್ಶನದೊಂದಿಗೆ ಮಸೀದಿಗಳಲ್ಲಿ ಸಾಮೂಹಿಕ ನಮಾಜ್, ವಿಶೇಷ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಈದ್ ಮುಬಾರಕ್ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬ ಆಚರಿಸಲಾಗುತ್ತದೆ. 


Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ