Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಕ್ಕಳಿಗೆ ವೃದ್ಧರಿಗೆ ತೊಂದರೆಯಾಗುತ್ತದೆ  ಮೊಬೈಲ್ ಟವರ್ ಸ್ಥಳಾಂತರ ಬೇಡ : ಯಾಸಿನ್ ಮಸೀದಿ  ಬೀದಿಯ ಜನರ ತೀವ್ರ ವಿರೋಧ.






ಬಳ್ಳಾರಿ. ಎ. 09: ನಗರದ  28 ವಾರ್ಡ್ ಪ್ರದೇಶದ ಯಾಸಿನ್ ಸಾಬ್ ಮಸೀದಿಯ ವಾಣಿಜ್ಯ ಸಂಕೀರ್ಣಗಳ ಕಟ್ಟಡದಮೇಲೆ ಈಗಾಗಲೇ 1989ರಿಂದ ಏರ್ಟೆಲ್ ಕಂಪನಿ ಗೆ ಸಂಬಂಧಿಸಿದ ಮೊಬೈಲ್ ಟವರ್ ಅನ್ನು ಸ್ಥಾಪಿಸಲಾಗಿತ್ತು , ಆದರೆ ಈ ಮೊಬೈಲ್ ಟವರ್ ಅನ್ನು ಈಗ ಏಕಾಏಕಿ ತೆರವುಗೊಳಿಸಿ ಅತ್ಯಂತ ಜನನಿಬಿಡ ಮತ್ತು ಜನವಸತಿ ಪ್ರದೇಶದ ಸಮೀಪದಲ್ಲಿರುವ ಅದೇ ಮಸೀದಿಯ ಹಿಂದಿನ ಭಾಗದಲ್ಲಿ ಅಳವಡಿಸಲು ಮಸೀದಿಯ ಕಮಿಟಿಯವರು ಹುನ್ನಾರ ನಡೆಸುತ್ತಿದ್ದಾರೆ, ಈ ಮೊಬೈಲ್ ಟವರನ್ನು  ಈಗ ಎಲ್ಲಿದೆಯೋ ಅಲ್ಲಿ ಹಾಗೆ ಬಿಡಲಿ ಅಥವಾ ಬೇಡವಾದರೆ ಅದನ್ನು ಈ ಪ್ರದೇಶದಿಂದ ಸಂಪೂರ್ಣವಾಗಿ ತೆರವುಗೊಳಿಸಲು ಯಾವುದೇ ಕಾರಣಕ್ಕೂ ಮಸೀದಿ ಹಿಂದಿನ ಜಾಗದಲ್ಲಿ ಮೊಬೈಲ್ ಟವರ್ ಅಳವಡಿಸಬಾರದು ಎಂದು ಈ ಪ್ರದೇಶದ ಮಾಜಿ ಕಾರ್ಪೊರೇಟರ್ ಇಸ್ಮಾಯಿಲ್ ಮತ್ತು   ಯಾಸಿನ್ ಸಾಬ್ ಮಸೀದಿಯ ಸುತ್ತಮುತ್ತಲ ವಾಸಿಸುವ ಸಾರ್ವಜನಿಕರು ತೀವ್ರವಾದ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.


 ಈ ಹಿಂದೆ ಹಲವಾರು ಬಾರಿ

 ಈಗಾಗಲೇ ಸಂಬಂಧಿಸಿದ ಶಾಸಕರಿಗೆ ಸಂಸದರಿಗೆ, ಜಿಲ್ಲಾಧಿಕಾರಿಗಳಿಗೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೂರನ್ನು ನೀಡಿ ಈ ಮೊಬೈಲ್ ಟವರ್ ಈ ಪ್ರದೇಶದಲ್ಲಿ ಅಳವಡಿಸ ದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು. ಆದರೂ ಸಹ ಯಾವೊಬ್ಬ ಅಧಿಕಾರಿಗಳು ಈ ಮೊಬೈಲ್ ಟವರ್ ಅಳವಡಿಕೆಯನ್ನು ತಡೆಯಲು ಮುಂದಾಗಿಲ್ಲದ ಕಾರಣ ಕಂಪನಿ ಈ ಜನವಸತಿ ಪ್ರದೇಶದ ಹತ್ತಿರ ಮೊಬೈಲ್ ಟವರ್ ಅಳವಡಿಸಲು ಮುಂದಾಗಿರುತ್ತದೆ, ಕಂಪನಿಯ ಮ್ಯಾನೇಜರ್ ಖಲೀಲ್ ಅಹ್ಮದ್ ಅವರನ್ನು ಕೇಳಿದಾಗ ಸಮಿತಿಯ ಕೆಲ ಜನ ಈ ಟವರನ್ನು ಸ್ಥಳಾಂತರಿಸಲು ತಿಳಿಸಿದ್ದಾರೆ ಕಾರಣ ಅದನ್ನು ನಾವು ಕಂಪನಿ ವತಿಯಿಂದ ಕಟ್ಟಡದ ಮೇಲಿನಿಂದ ಈ ಕೆಳಗಿನ ಸ್ಥಳಕ್ಕೆ ಸ್ಥಳಾಂತರ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಯಾರು ಹೇಳಿದರು ಎಂದರೆ ಹೆಸರು ಹೇಳಲು ಇಚ್ಚಿಸದ ಖಲೀಲ್ ನನ್ನನ್ನು ಏನು ಕೇಳಬೇಡಿರಿ ಸಮಿತಿಯವರನ್ನೇ ಕೇಳಿ ಎಂದು ಹಾರೈಕೆ ಉತ್ತರ ನೀಡುತ್ತಿದ್ದಾರೆ.


 ಒಂದು ವೇಳೆ ಈ ಮೊಬೈಲ್ ಟವರ್ ಅನ್ನು ಈಗಿನ ಪ್ರಸ್ತಾಪಿತ ಸ್ಥಳದಲ್ಲಿ ಅಳವಡಿಸಿದ್ದೆ ಆದಲ್ಲಿ ಅದರ ಜನರೇಟರ್ ನಿಂದ ಶಬ್ದ ಮಾಲಿನ್ಯ ವಿಪರೀತ ಮೊಬೈಲ್ ರೇಡಿಯೇಷನ್ಗಳು  ಉಂಟಾಗಿ ಮಕ್ಕಳಿಗೆ ಮತ್ತು ವೃದ್ಧರಿಗೆ ತೊಂದರೆಯಾಗುವ ಅಪಾಯವಿದೆ ಮತ್ತು ಅದಕ್ಕಿಂತಲೂ ಮುಖ್ಯವಾಗಿ ಎಳೆವಯಸ್ಸಿನ ಮಕ್ಕಳಿಗೆ ಮತ್ತು ಇಳಿ ವಯಸ್ಸಿನ ವೃದ್ಧರಿಗೆ ಹಲವಾರು ರೀತಿಯ ಅನಾರೋಗ್ಯ ಕಾಡುವ ಅಪಾಯವಿದೆ  ಯಾವುದೇ ಕಾರಣಕ್ಕೂ ಈ ಮೊಬೈಲ್ ಟವರ್  ಅಳವಡಿಸುವುದನ್ನು ತಡೆಹಿಡಿಯಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಲ್ಲಿ ಮಾಧ್ಯಮದ ಮೂಲಕ ಇವರ ಅಕ್ರೋಶವನ್ನು ವ್ಯಕ್ತಪಡಿಸಿದರು.

 ಈ ಮಸೀದಿಯು ವಕಾಫ್  ಬೋರ್ಡ್ ಆಸ್ತಿಯಲ್ಲ, ಬದಲಾಗಿ ಕೇವಲ ನಿರ್ವಹಣೆ ಮಾತ್ರ ಬೋರ್ಡಿಗೆ ಸಂಬಂಧಿಸಿದಂತೆ

ಮಸೀದಿಯ ಆದಾಯಕ್ಕಾಗಿ  ಸಾರ್ವಜನಿಕರ ಆರೋಗ್ಯವನ್ನು ಹಾಳು ಗೆಡುವಲು ಮುಂದಾಗಿದ್ದಾರೆ ಯಾವುದೇ ಕಾರಣಕ್ಕೂ ಮೊಬೈಲ್ ಟವರ್ ಅಳವಡಿಕೆ ಬೇಡ ಎಂದು

ಮಾಜಿ ಕಾರ್ಪೊರೇಟರ್  ಇಸ್ಮಾಯಿಲ್, ಸ್ಥಳೀಯ ನಿವಾಸಿಗಳಾದ  ರಿಯಾಜ್, ಶಬ್ಬೀರ್, ಮೌಸಿನ್ ಅಲಿ, ಖಾಜಾ ಮೌನಿದಿನ್, ಸುಲೇಮಾನ್, ಎಂ.ಡಿ. ಅಲಿ, ಮೊಹಮ್ಮದ್ ಭಾಷಾ, ರಮಾನಾಥ್ ರಾವ್, ನೇಯಾಜ್, ಅಹ್ಮದ್, ಅಯೂಬ್, ಆಶ್ರರ್ ಸುಹಾಲ್, ಮೊಹಮ್ಮದ್ ಇಶಾಕ್ ಸೇರಿದಂತೆ ಹಲವರು ಸಹಿ ಹಾಕಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಸಾರ್ವಜನಿಕ ಸುರಕ್ಷತೆ ಮತ್ತು ಜನರ ಯೋಗಕ್ಷೇಮದ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.







Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ