Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಡವರ ಆರೋಗ್ಯ ಸೇವೆಯಿಂದ ಪುಣ್ಯ ಪ್ರಾಪ್ತಿ: ಗುರುಸಿದ್ದೇಶ್ವರ ಶ್ರೀಗಳು

ಮಹಾಲಿಂಗಪುರ: ಉಳ್ಳವರು ಬಡವರಿಗೆ ಆರೋಗ್ಯದ ವಿವಿಧ ರೀತಿಯ ಉಚಿತ ಸೇವೆಗಳನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ರಬಕವಿಯ ಬೃಹ್ಮಾನಂದಮಠದ ಗುರುಸಿದ್ದೇಶ್ವರ ಶ್ರೀಗಳು ಹೇಳಿದರು.

ಪಟ್ಟಣದ ಸಿದ್ಧಾರೂಢ ಆಶ್ರಮದಲ್ಲಿ ಶುಕ್ರವಾರ ಸಿ. ಎಂ. ಹುರಕಡ್ಲಿ ಫೌಂಡೇಶನ್ ವತಿಯಿಂದ ಕೃತಕ ಕೈ, ಕಾಲು ಜೋಡಣೆ ಮತ್ತು ಆಸರೆ ಕೋಲುಗಳ ವಿತರಣಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು ಮನು?ನ ಜೀವನದಲ್ಲಿ ಅಂಗವೈಕಲ್ಯವಾಗುವಂತಹ ಅನೇಕ ದುರಂತ ಘಟನೆಗಳು ನಡೆಯುತ್ತವೆ. ಶ್ರೀಮಂತರು ಕೃತಕ ಪರಿಕರಗಳನ್ನು ಖರಿದಿಸಲು ಎತೇಚ್ಛ ಹಣ ಖರ್ಚು ಮಾಡಿದರೆ,ದುರ್ಭಲ ಆರ್ಥಿಕ ಸ್ಥಿತಿ ಉಳ್ಳವರಿಗೆ ಇದು ಅಸಾಧ್ಯ.ಇಂತಹ ಸಂದರ್ಭದಲ್ಲಿ ದುರ್ಬಲ ವರ್ಗದವರ ಅಂಗವೈಕಲ್ಯ ನೋವು ನಲಿವು ಕಂಡು ಅವರಿಗೆ ಸರಿ ಹೊಂದುವ ಕೃತಕ ಕೈ, ಕಾಲು ಮತ್ತು ಇನ್ನಿತರ ಉಪಕರಣಗಳನ್ನು ಉಚಿತವಾಗಿ ನೀಡುವುದಿದೆಯಲ್ಲ, ಆ ಸೇವೆ ಜನಾರ್ದನ ಸೇವೆ ಇದ್ದಂತೆ, ಎಂದು ಪೌಂಡೇಶನ್ ಅಧ್ಯಕ್ಷ ಚನಬಸು ಹುರಕಡ್ಲಿ ಮತ್ತು ದಂಪತಿ ಕಾರ್ಯ ವೈಖರಿ ಮೆಚ್ಚುವಂಥದ್ದು ಇದು ನಿರಂತರ ಸಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ಧಾರೂಢ ಆಶ್ರಮದ ಸಹಜಾನಂದ ಶ್ರೀಗಳು ಆಶೀರ್ವಚನ ನೀಡುತ್ತಾ, ಶ್ರೀಮಂತಿಕೆ ಅಸ್ಥಿರ, ದಾನ, ಧರ್ಮ ಮತ್ತು ಕೀರ್ತಿ ಇವು ಸ್ಥಿರ.ಇವುಗಳನ್ನು ಗಮನದಲ್ಲಿಟ್ಟುಕೊಂಡು ಕ?ದಲ್ಲಿರುವವರಿಗೆ ಸಹಾಯ ಸಹಕಾರ ನೀಡುವುದು ಮಾನವ ಧರ್ಮ.ಈ ನಿಟ್ಟಿನಲ್ಲಿ ಹುರಕಡ್ಲಿ ದಂಪತಿಗಳು ನಿರಂತರ ೧೬ ವ?ಗಳಿಂದ ತಂದೆ ತಾಯಿಗಳ ಸ್ಮರಣೆಯಲ್ಲಿ ಅಂಗಾಂಗ ವಿಕಲರಿಗೆ ಉಚಿತ ಸಲಕರಣೆಗಳನ್ನು ವಿತರಿಸುತ್ತಿರುವುದು ಬಡವರ ಪಾಲಿಗೆ ವರದಾನವಾಗಿದ್ದಾರೆ ಎಂದು ಹೇಳಿದರು.

೭೦ ಜನರಿಗೆ (ತಲಾ ೮ ಸಾವಿರ) ಕೃತಕ ಕೈ, ಕಾಲು ಜೋಡಣೆ, ೧೪ (ತಲಾ ೫ ಸಾವಿರ) ಜನರಿಗೆ ಕ್ಯಾಲಿಬರ್ ಮತ್ತು ೩೪ ಜನರಿಗೆ (ತಲಾ ೨ ಸಾವಿರ) ಆಸರೆ ಕೋಲುಗಳನ್ನು ಉಚಿತವಾಗಿ ವಿತರಿಸಲಾಯಿತು ಎಂದು ಪೌಂಡೇಶನ್ ಅಧ್ಯಕ್ಷ ಚನಬಸು ಹುರಕಡ್ಲಿ ಹೇಳಿದರು.

ಇನ್ನೂಳಿದಂತೆ ಸಮಾರಂಭದಲ್ಲಿ ಪೌಂಡೇಶನ್ ಅಧ್ಯಕ್ಷ ಚನಬಸು ಹುರಕಡ್ಲಿ, ಪುರಸಭೆ ಸದಸ್ಯೆ ಸವಿತಾ ಚ. ಹುರಕಡ್ಲಿ, ಮಹಾವೀರ ಲಿಂಬ್ ಸೆಂಟರ್ ಹುಬ್ಬಳ್ಳಿಯ ಡಾ.ಮಹಾದೇವ ನಾಯ್ಕ, ಕಾನಿಪ ಅಧ್ಯಕ್ಷ ಮಹೇಶ್ ಮಣ್ಣಯ್ಯನವರಮಠ ಮತ್ತು ಎಸ್.ಕೆ. ಪಕಾಲಿ ಸೇರಿದಂತೆ ಪೌಂಡೇಶನ್ ಕಾರ್ಯಕರ್ತರು ಇದ್ದರು. ಕಲಾವಿದ ಶಿವಾನಂದ ಬಿದರಿ ಸ್ವಾಗತಿಸಿ,ಪತ್ರಕರ್ತ ಚಂದ್ರಶೇಖರ ಮೋರೆ ನಿರೂಪಿಸಿ, ವಂದಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ