ರನ್ನ ಬೆಳಗಲಿ: ಮೇ.೧೯., ಸ್ಥಳೀಯ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಸ್ಥೆ ರನ್ನ ಬೆಳಗಲಿ ಆಶ್ರಯದಲ್ಲಿ. ಆಯೋಜಿಸಿದ ಸನ್ಮಾನ ಸಮಾರಂಭದಲ್ಲಿ ಪ್ರಸ್ತುತ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು. ಉತ್ತೀರ್ಣರಾದ ಲಕ್ಷ್ಮಿ ಮಲ್ಲಪ್ಪ ಬಡಿಗೇರ ಹಾಗೂ ಸಚಿನ ಮಲ್ಲಪ್ಪ ಬಡಿಗೇರ ಇರ್ವ ಸಾಧಕರಿಗೆ. ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬಾದಮಿ ಅಮವಾಸ್ಯೆಯ ಅನ್ನ ಪ್ರಸಾದ ವ್ಯವಸ್ಥೆಯನ್ನು ತಮ್ಮನ್ನಪ್ಪ ಲೋಹಾರ ಇವರು ನೆರವೇರಿಸಿದರು.
ಸಂಸ್ಥೆಯ ಅಧ್ಯಕ್ಷ ಬಸವರಾಜ ಕಂಬಾರ ಮಾತನಾಡಿ,ಶ್ರೀ ಕುಲಗುರು ಮೌನೇಶ್ವರರ ಆಶೀರ್ವಾದ ಪಡೆಯಬೇಕಾದರೆ,ನಿಸ್ವಾರ್ಥ ಸೇವೆ,ಬಿದ್ದವರನ್ನು ಎತ್ತುವ ಕಾಯಕ ಮಾಡಬೇಕು.ಕುಲ ಕಾಯಕದ ಜೊತೆಗೆ ಶಿಕ್ಷಣಕ್ಕೆ ಮಹತ್ವವನ್ನು ನೀಡಿ ಎಂದು ತಿಳಿಸಿದರು.
ಅಣ್ಣಪ್ಪ ಕಂಬಾರ ಶಿಕ್ಷಕರು,ಚನ್ನಪ್ಪ ಬಡಿಗೇರ,ಮಾದೇವ ಸುತಾರ, ಸಂಗಪ್ಪ ಲೋಹಾರ,ರಾಮಚಂದ್ರ ಕಂಬಾರ,ತಮ್ಮಣ್ಣಪ ಲೋಹಾರ, ಮಹಾಲಿಂಗಪ್ಪ ಬಡಿಗೇರ, ರಾಮಚಂದ್ರ ಸುತಾರ,ಬಸಪ್ಪ ಬಡಿಗೇರ,ಸಿದ್ಧಾರೂಢ ಸುತಾರ ಹಾಗೂ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಸ್ಥೆ ರನ್ನ ಬೆಳಗಲಿ ಸದಸ್ಯರು,ಸಮಾಜದ ಗುರುಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
