ರನ್ನ ಬೆಳಗಲಿ: ಮೇ.೧೪., ಪಟ್ಟಣದ ಮಿರ್ಜಿ ರಸ್ತೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತೋಟ ನಂ.೧ (ಗುಂಡ ಬಸವೇಶ್ವರ ತೋಟ) ದಲ್ಲಿ ಇತ್ತೀಚಿಗೆ ವಿಪರೀತ ಗಾಳಿ ಮಳೆಯ ಪ್ರಭಾವ ದಿಂದ. ಶಾಲೆಯ ಆವರಣದಲ್ಲಿದ್ದ ಬೃಹದಾಕಾರದ ಹತ್ತಿ ಮರ ಉರಳಿ ಸುಮಾರು ೪ ಲಕ್ಷ ಮೌಲ್ಯದ ಶಾಲಾ ರಕ್ಷಣಾ ಗೋಡೆ, ಶಾಲೆಯ ಮೇಲ್ಚಾವಣಿ ಧ್ವಂಸಗೊಂಡಿದೆ. ಇದೇ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಮಾದರಿ ಶಾಲೆ ಎಂಬ ಹೆಸರಿಗೆ ಪಾತ್ರವಾಗಿದ್ದ ನಮ್ಮ ಶಾಲೆ. ಇಂದು ಪ್ರಕೃತಿ ವಿಕೋಪದ ಅತಿವೃಷ್ಟಿಯಿಂದ ಹಾಳಾಗಿದೆ,ಸರ್ಕಾರ ಶಾಲಾ ಪ್ರಾರಂಭದ ಅವಧಿಯ ಪೂರ್ವದಲ್ಲಿಯೇ ಶಾಲೆಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಸಿಂಗಾಡಪ್ಪ ಹೊಸೂರ ಪತ್ರಿಕಾ ಮಾಹಿತಿ ನೀಡಿದರು.
ವಾರ್ಡ್ ಪ್ರತಿನಿಧಿ ಸಾವಿತ್ರಿ ಸಂಗಪ್ಪ ರಾಮದುರ್ಗ ಮತನಾಡಿ ಮುಧೋಳ ತಾಲೂಕಿನಲ್ಲಿ ಅತ್ಯುತ್ತಮ ಕಿರಿಯ ಪ್ರಾಥಮಿಕ ಮಾದರಿ ಶಾಲೆಯಾಗುವಲ್ಲಿ ಎಸ್ ಡಿ ಎಂ ಸಿ ಅವರ ಪಾತ್ರ ಬಹಳ ಮುಖ್ಯವಾಗಿದೆ. ಪ್ರಕೃತಿ ವಿಕೋಪದಿಂದ ಶಾಲೆಯು ಮೂಲಭೂತ ಸಂಪತ್ತನ್ನು ಕಳೆದುಕೊಂಡಿದೆ. ಶಾಲೆ ಪ್ರಾರಂಭದ ಅವಧಿ ಒಳಗೆ ಸರಕಾರ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
ಲಕ್ಷ್ಮಿ ರಾಮದುರ್ಗ,ಆನಂದ ಪಾಟೀಲ, ವಿಠ್ಠಲ ಜೈನಾಪುರ, ಕಾಳಪ್ಪ ಅಮಾತಿ, ಮಹಾನಂದ ಕಡಪಟ್ಟಿ, ಪ್ರಿಯಾಂಕ ವಗ್ಗನ್ನವರ, ಪರಮಾನಂದ ಸೆರಮಣಿ, ಬಸಪ್ಪ ರಾಮದುರ್ಗ,ಮಲ್ಲಪ್ಪ ಕಳ್ಳಿಬಡ್ಡಿ, ಪದ್ಮಶ್ರೀ ಅಲ್ಗೋರ, ಸುಮತಿ ಅಲಗೂರು, ಯಮನಪ್ಪ ಉಸಳಿ, ಶಕುಂತಲಾ ಕಡಪಟ್ಟಿ, ಲಕ್ಷ್ಮಿ ಹಳ್ಳಿಗಿಡದ, ಪರಮಾನಂದ ಕಡಪಟ್ಟಿ, ಸದಾಶಿವ ಕಡಕೊಳ, ಮಾಯಪ್ಪ ಹಂಚಿನಾಳ,ಸಚಿನ ಆಲ್ಗೂರ ಇನ್ನಿತರ ಉಪಸ್ಥಿತರಿದ್ದರು.
