Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿಕ್ಷಕಿ ಗೀತಾ ಬಸ್ತವಾಡ ಚೊಚ್ಚಲ ಕೃತಿ ಗೀತ ಗುಚ್ಚ ಕವನ ಸಂಕಲನ ಬಿಡುಗಡೆ

 

ಹುಕ್ಕೇರಿ : ಮಹಿಳೆಯರಲ್ಲಿ ಅಡಗಿರುವ ಆಚಾರ ವಿಚಾರಗಳ ಅನುಭವಮೃತ ನುಡಿಗಳನ್ನ ಬರವಣಿಗೆ ಮೂಲಕ ಮುಖ್ಯವಾಹಿನಿಗೆ ತರುವದು ಇಂದು ಪ್ರಸ್ತುತ ಅವಶ್ಯವಾಗಿದೆ ಎಂದು ಚಿಕ್ಕೋಡಿ ಶಿಕ್ಷಣ ಇಲಾಖೆಯ ಯೋಜನಾಧಿಕಾರಿ ರೇವತಿ ಮಠದ ಹೇಳಿದರು.
ಅವರು ಪಟ್ಟಣದ ರವದಿ ಪಾರ್ಮ ಹೌಸದಲ್ಲಿ ಜರುಗಿದ ಶಿಕ್ಷಕಿ ಗೀತಾ ಸುಭಾಷ ಬಸ್ತವಾಡ ಅವರು ರಚಿಸಿದ ಗೀತ ಗುಚ್ಚ ಕವನ ಸಂಕಲನ ಹಾಗೂ ವಿವಾಹ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ಸಾಹಿತ್ಯ ಬರವಣಿಗೆ ಎಲ್ಲರಲ್ಲಯೂ ಮೂಡಿ ಸಮಾಜಕ್ಕೆ ಒಳ್ಳೆಯ ಯುವ ಸಾಹಿತಿಗಳು ತಮ್ಮ ಪ್ರತಿಭೆಗಳು ಹೊರಬರಬೇಕಾಗಿದೆಂದರು.
ಸಾನಿಧ್ಯವಹಿಸಿದ್ದ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ಜಾನಪದ ಸೋಗಡಿನ ಜೊತೆಗೆ ಓದುಗರ ಅಭಿರುಚಿಗೆ ಸಾಹಿತ್ಯ ರಚನೆಗಳು ಮೂಡಿಬರಬೇಕಾಗಿದೆ. ಧಾರ್ಮಿಕ ಸಾಮಾಜೀಕಿ, ಶೈಕ್ಷಣಿಕವಾಗಿ ಶ್ರಮಿಸುತ್ತರಿರುವ ಯುವ ಸಾಹಿತಿ ಗೀತಾ ಸುಭಾಷ ಬಸ್ತವಾಡ ದಂಪತಿಗಳು ಕಾರ್ಯ ಶ್ಲಾಘನೀಯ ಎಂದರು.
ಶಿಕ್ಷಕಿ ಗೀತಾ ಬಸ್ತವಾಡ (ಶೇಠಿ) ಮಾತನಾಡಿ ಬಾಲ್ಯದಿಂದಲೂ ಕಥೆ,ಕವನ ಬರೆಯುವ ರೂಡಿಯನ್ನು ಗುರುಗಳ ಹಾಗೂ ನನ್ನಪರಿಸರದ ಜನರ ಪೋತ್ಸಾಹ ಋಣದ ಫಲವಾಗಿ ಇಂದು ಧಾರ್ಮಿಕ, ಸಾಂಸ್ಕೃತಿಕ ಸಾಮಾಜಿಕ ,ಶೈಕ್ಷಣಿಕ ಸೇರಿದಂತೆ ೧೦೦ ಕವನಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿರುವದು ಹೆಮ್ಮೆ . ಜೊತೆಗೆ ಹಲವಾರು ಪ್ರಶಸ್ತಿಗಳು ಗೌರವಗಳು ಲಭಿಸಿರುವದು ಸಮಾಜಕ್ಕೆ ಋಣಿಯಾಗಿದ್ದೇನೆಂದರು
ಮಹಾವೀರ ಶಿಕ್ಷಣ ಸಂಸ್ಥೆ ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಅಧ್ಯಕ್ಷತೆ ವಹಿಸಿದ್ದರು. ವಿಜಯ ಸಮಾಜ ಸಂಸ್ಥೆ ಅಧ್ಯಕ್ಷ ವಿಜಯ ರವದಿ ಕಾರ್ಯಕ್ರಮ ಉದ್ಘಾಟಿಸಿದರು.
ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ ಪಾಟೀಲ, ನಿವೃತ್ತಿ ಪ್ರಾಧ್ಯಾಪಕ ಪಿ.ಜಿ ಕೊಣ್ಣೂರ, ಅರಿಹಂತ ಬ್ಯಾಂಕ ಅಧ್ಯಕ್ಷ ಬಿಬಿ ಚೌಗಲಾ, ಸಾಹಿತಿ ಎಸ್.ಎಮ್ ಶಿರೂರ,ಅಥಿತಿಗಳಾಗಿ ಆಗಮಿಸಿದ್ದರು.
ವಿಶ್ರಾಂತ ಪ್ರಾಧ್ಯಾಪಕ ಡಾ ರಾಜಶೇಖರ ಇಚ್ಚಂಗಿ ಗ್ರಂಥ ಪರಿಚಯಿಸಿದರು.
೨೫ ಜನ ಆದರ್ಶ ದಂಪತಿಗಳನ್ನು ಸಮಿತಿವತಿಯಿಂದ ಗೌರವಿಸಿದರು.
ಕ್ಷೇತ್ರ ಸಮನ್ವಧಿಕಾರಿ ಎ.ಎಸ್ ಪದ್ಮಣವರ ,ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಮ್ ನಾಯಿಕ ಪಿಡಿಓ ಶ್ರೀಶೈಲ್ ಮಠದ ಮಾತನಾಡಿದರು.
ಚಿತ್ರ ಕಲಾ ಶಿಕ್ಷಕ ಕುಮಾರ ಬಡಿಗೇರ ಸ್ವಾಗತಿಸಿದರು. ಎಮ್ ಎನ್ ತೇರದಾಳ ಪ್ರಾರ್ಥನೆ ಮಾಡಿದರು.ಸಿಎಮ್ ದರಬಾರೆ ಕಾರ್ಯಕ್ರಮ ನಿರೂಪಿಸಿದರು ಸುಭಾ? ಬಸ್ತವಾಡ ವಂದಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ