Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗಾಂಧಾರಿ ವಿದ್ಯೆ ಪ್ರದರ್ಶನ ಹಾಗೂ ಪುಣ್ಯಾರಾಧನೆ ಪೂರ್ವಭಾವಿ ಸಭೆ ಯಶಸ್ವಿ

ಬಳ್ಳಾರಿ, ಮೇ 27: ನಗರದ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಶ್ರೀ ನಂದಿಪುರ ಅಜ್ಜನವರ ಪುಣ್ಯಾರಾಧನೆ ಪ್ರಯುಕ್ತ ಪೂರ್ವಭಾವಿ ಸಭೆ ಹಾಗೂ ಗಾಂಧಾರಿ ವಿದ್ಯೆ ಪ್ರದರ್ಶನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಚಿದಂಬರರಾವ್ ಅವರ ನೇತೃತ್ವದಲ್ಲಿ ಉಮಾ ಗಡಗಿ ಅವರು 15 ಮಕ್ಕಳಿಗೆ ಗಾಂಧಾರಿ ವಿದ್ಯೆಯನ್ನು ತರಬೇತಿ ನೀಡಿದರು. ಈ ತಂಡದಲ್ಲಿ ಸಿ.ಕೆ. ಪ್ರಕಾಶ್ ಹಾಗೂ ಎ. ರಾಘವೇಂದ್ರ ಸಹಕರಿಸಿದರು. ಮಕ್ಕಳಿಗೆ ಗಾಂಧಾರಿ ವಿದ್ಯೆಯನ್ನು ತಿಳಿಸಿಕೊಡುವಲ್ಲಿ ಶ್ರೀಮತಿ ವನಜಾಕ್ಷಿ ಮೇಡಂ ಅವರು ಪ್ರಮುಖ ಪಾತ್ರವಹಿಸಿ ಕಾರ್ಯಕ್ರಮಕ್ಕೆ ಕೈಜೋಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಲಿಂಗಪ್ಪ ವಹಿಸಿದ್ದರು. ಉದ್ಘಾಟಕರಾಗಿ ಶ್ರೀ ಜೋಳದರಾಶಿ ತಿಮ್ಮಪ್ಪ ಅವರು ಭಾಗವಹಿಸಿ ಗಾಂಧಾರಿ ವಿದ್ಯೆಯ ಮಹತ್ವದ ಕುರಿತು ಮಾತನಾಡಿ ಮಕ್ಕಳನ್ನು ಉತ್ಸಾಹಭರಿತರನ್ನಾಗಿ ಮಾಡಿದರು.
 ಮಕ್ಕಳಿಂದ ಗಾಂಧಾರಿ ವಿದ್ಯೆಯ ಪ್ರದರ್ಶನ ಕೂಡ ನಡೆಸಲಾಯಿತು. ಅಲ್ಲದೆ ಶ್ರೀ ಅಜ್ಜನವರ ಸಮ್ಮುಖದಲ್ಲಿ ವಿದ್ಯೆಯ ಡೆಮೊ ಪ್ರದರ್ಶಿಸಿ ಆಶೀರ್ವಾದ ಪಡೆದರು.
ನಂತರ ಮಕ್ಕಳಿಗೆ ಸರ್ಟಿಫಿಕೇಟ್ ಹಾಗೂ ಮೆಮೊಂಟೋಗಳನ್ನು ವಿತರಿಸಲಾಯಿತು. ಪೂಜ್ಯರ ಆಶೀರ್ವಾದ ಪಡೆದ ಮಕ್ಕಳು ಸಂತಸ ವ್ಯಕ್ತಪಡಿಸಿದರು. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಹಾಗೂ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮವನ್ನು ಪತಂಜಲಿ ಶ್ರೀ ಶಂಕರಾಚಾರ್ಯ ಚೈತನ್ಯ ವೇದಿಕೆ ಹಾಗೂ ಎಸ್.ಆರ್.ಕೆ ಯೋಗಾ ಕೇಂದ್ರ, ಬಳ್ಳಾರಿ ಇವರ ವತಿಯಿಂದ ಆಯೋಜಿಸಲಾಗಿತ್ತು. ಭಾಗವಹಿಸಿದ ಪ್ರತಿಯೊಬ್ಬರಿಗೂ ಸಂಘಟಕರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸುಮಾರಡ್ಡಿ, ಅಶೋಕ್ ದಿನ್ನಿ, ವಾಮಣ್ಣ, ಪ್ರಕಾಶ್, ರಾಘವೇಂದ್ರ, ರಮೇಶ್ ಸರ್ ಸೇರಿದಂತೆ ಅನೇಕ ಗಣ್ಯರು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಯೂರವರ್ಮನ ನಾಡಪ್ರೇಮ ಅಮರವಾಗಲಿಪ್ರಭು ತುಮ್ಮರಗುದ್ದಿ, ನಾರಾಯಣ ಪಾಟೀಲ   ಸೇವಾ ನಿವೃತ್ತಿ ಝಳಕಿ : ಅನುಮಾನಾಸ್ಪದವಾಗಿ ನಾಲ್ಕು ಕುರಿಗಳ ಸಾವು.ಬಕ್ರೀದ ತ್ಯಾಗ ಬಲಿದಾನದ ಸಂಕೇತಗ್ರಾಮ ಆಡಳಿತ ಅಧಿಕಾರಿಗಳು ಸಾರ್ವಜನಿಕ ಸೇವೆಯಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ : ಆಯುಕ್ತೆ ಜಾನಕಿ ಕೆ. ಎಂ.ಮಹಾಲಿಂಗಪುರದಲ್ಲಿ ಬಲಿದಾನ ಸಂಕೇತ ಬಕ್ರಿದ್ ಹಬ್ಬ ಆಚರಣೆ ಅಡಿವೆಪ್ಪ ದೊಡಮನಿ ಅವರಿಗೆ ವಲಯ ಅರಣ್ಯಾಧಿಕಾರಿ ಹುದ್ದೆಗೆ ಪದೋನ್ನತಿ: ಗ್ರಾಮಸ್ಥರಿಂದ ಸನ್ಮಾನಗಾಂಧಾರಿ ವಿದ್ಯೆ ಪ್ರದರ್ಶನ ಹಾಗೂ ಪುಣ್ಯಾರಾಧನೆ ಪೂರ್ವಭಾವಿ ಸಭೆ ಯಶಸ್ವಿಜಾತಿ-ಧರ್ಮ ಭೇದ ನಿವಾರಣೆಗೆ ಅಂಬೇಡ್ಕರ್ ಪಂಚಲೋಹದ ಪುತ್ಥಳಿ ಅನಾವರಣ : ಗೋಪಿನಾಥ ಮೀಸಿ'ಮನೆಯಲ್ಲಿ ಮಹಾಮನೆ' ಕಾರ್ಯಕ್ರಮ ಸರಳತೆ ಶರಣರ ಧ್ಯೇಯ: ಬೇವಿನಗಿಡದ