ಬೆಳಗಾವಿ,ಮೇ,೦೮ : ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಇವರು ಇದೇ ದಿನಾಂಕ ೯ ಶನಿವಾರದಂದು ಸಾಯಂಕಾಲ ೪-೩೦ ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ "ವೈದ್ಯಕೀಯದಲ್ಲಿ ವಿನೋದ ಪ್ರಸಂಗಳು" ಎ೦ಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಖ್ಯಾತ ವೈದ್ಯರಾದ ಡಾ. ಎಚ್. ಬಿ. ರಾಜಶೇಖರ ಇವರು ಅಧ್ಯಕ್ಷತೆಯನ್ನು ವಹಿಸಲಿದ್ದು ಪ್ರೊ. ಜಿ. ಕೆ. ಕುಲಕರ್ಣಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಡಾ.ಚಿದಾನಂದ ಗವಿಮಠ ಇವರು. "ಹಾಸ್ಯದ ಹಿಂದಿನ ವಿಜ್ಞಾನ" ವಿಷಯ ಕುರಿತಂತೆ ಮಾಡನಾಡಲಿದ್ದಾರೆ. ಖ್ಯಾತ ಆಯುರ್ವೇದ ವೈದ್ಯರಾದ ಡಾ. ಸ್ವಪ್ನಾ ಕುಲಕಣಿ೯ ಮತ್ತು ಡಾ. ವೈಷ್ಣವಿ ಕಾಥವಟೆ "ವೃತ್ತಿಯಲ್ಲಿಯ ಹಾಸ್ಯ ಪ್ರಸಂಗಗಳನ್ನು ಹಂಚಿಕೊಂಡು ರಂಜಿಸಲಿದ್ದಾರೆ.
ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಯಗಳನ್ನಾಡಲಿದ್ದು ತವನಪ್ಪ ದೇಸಾಯಿ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. ತಾನಾಜಿ ನಿರೂಪಿಸಲಿದ್ದಾರೆ ಎಂದು ಕ.ಸಾ.ಭ.ವಿ. ಮಂಡಳಿ ಗೌರವ ಕಾರ್ಯದರ್ಶಿ ರಾಮಚಂದ್ರ ಕಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.