Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾರ್ಚ16 ರಿಂದ ಶ್ರೀ ಚೆನ್ನವೃಷಬೇಂದ್ರ ಅಜ್ಜನವರ ಜಾತ್ರೋತ್ಸವ

ನೇಸರಗಿ.ಮಾ. 13.ಇಲ್ಲಿಗೆ ಸಮೀಪದ ಮದನಭಾವಿ ಗ್ರಾಮದ ಸುಕ್ಷೇತ್ರ ಶ್ರೀ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ ಲೀಲಾಮಠ ಇದರ ಜಾತ್ರಾ ಮಹೋತ್ಸವ ಹಾಗೂ ಮಾತೋಶ್ರೀ ನೀಲಗಂಗಮ್ಮ ನವರ 58 ನೇ ಪುಣ್ಯರಾಧನೆಯು  ರವಿವಾರ ದಿನಾಂಕ 16-03-2025 ರಿಂದ 18-03-2025 ರವರೆ ನಡೆಯಲಿದೆ. ದಿ 16 ರಂದು ಹಾರುಗೊಪ್ಪ ಶ್ರೀ   ಶಿವಪ್ಪ ಅಜ್ಜನವರಿಂದ ಕರ್ತುಗದ್ದುಗೆಗೆ ರುದ್ರಾಭಿಷೇಕ, ಕಳಸಾರೋಹಣ, ಸಂಜೆ ಪ್ರವಚನ, ಕೀರ್ತನೆ, ಶ್ರೀಗಳ ಕಿರೀಟ ಪೂಜೆ, ಮಹಾಪ್ರಸಾದ ನಡೆಯುವದು. ದಿ. 17 ರಂದು ರಾತ್ರಿ ಪ್ರವಚನ, ಕೀರ್ತನೆ, ಮಹಾಪ್ರಸಾದ ನೆರವೇರುವವು. ದಿ. 18 ರಂದು ಬೆಳಿಗ್ಗೆ 8 ಕ್ಕೆ ಶಿವಪಂಚಾಕ್ಷರಿ ಜಪಯಜ್ಞ, ಮದ್ಯಾಹ್ನ 11-30 ಕ್ಕೆ ಸಾಮೂಹಿಕ ವಿವಾಹ,ಮಹಾಪ್ರಸಾದ, ಸಂಜೆ 5 ಕ್ಕೆ ಅಜ್ಜನವರ ಮಹಾರಾಥೋತ್ಸವ  ಜರುಗಲಿದೆ. ದಿ. 18 ರಂದು ಸಂಜೆ 6 ಘಂಟೆಗೆ ಮಧನಭಾವಿಯ  ಶ್ರೀ ಮಹಾಂತೇಶ ದೊಡ್ಡಗೌಡರ ಅಭಿಮಾನಿ ಬಳಗದಿಂದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯುತ್ತವೆ. ಈ ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯವಇಕನ್ನು ಇಂಚಲ ಸಾಧು ಸಂಸ್ಥಾನ ಮಠದ ಡಾ. ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ವಹಿಸುವರು. ಸಾನಿಧ್ಯವನ್ನು ಶ್ರೀ ಮಠದ ಪ ಪೂ. ಮಾತೋಶ್ರೀ ಶಿವದೇವಿ ತಾಯಿ ( ಆನಂದ ಭಾರತಿ ) ವಹಿಸುವರು. ಜಾತ್ರಾ ಮಹೋತ್ಸವದಲ್ಲಿ ಜ್ಞಾನದಾಸೋಹದಲ್ಲಿ  ಬೈಲಹೊಂಗಲದ  ಮಹಾದೇವ ಸರಸ್ವತಿ ಶ್ರೀಗಳು, ಇಂಚಲದ ಪೂರ್ನಾನಂದ ಭಾರತಿ  ಶ್ರೀಗಳು,ತೊಂಡಿಕಟ್ಟಿಯ ಅಭಿನವ ವೆಂಕಟೇಶ ಶ್ರೀಗಳು, ಸವಟಗಿಯ ಲಿಂಗಯ್ಯ ಶ್ರೀಗಳು, ಹಾರುಗೊಪ್ಪದ  ಮಾತೋಶ್ರೀ ಶಿವಯೋಗಿಣಿ ತಾಯಿ, ಧತ್ತವಾಡದ ಹೃಶಿಕಾನಂದ ಶ್ರೀಗಳು, ನೇಸರಗಿ ಮಲ್ಲಾಪೂರ ಗಾಳೇಶ್ವರ ಮಠದ ಚಿದಾನಂದ ಶ್ರೀಗಳು, ಮುರಕಿಭಾವಿಯ ಮಾತೋಶ್ರೀ ಪರಮೇಶ್ವರಿ ಅಮ್ಮನವರು, ಹಡಗಿನಹಾಳದ ಮಲ್ಲೇಶ್ವರ ಶರಣರು   3 ದಿನಗಳ ಪ್ರವಚನ ಕೀರ್ತನೆ, ಜಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಠದ ಜಾತ್ರಾ ಕಮಿಟಿ ಸದಸ್ಯರು ತಿಳಿಸಿದ್ದಾರೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ