ರಾಮದುರ್ಗ,ಜು,೦೧: ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆಯಾಗಿ ೫ ವರ್ಷ ಪೂರೈಸಿದ ಪ್ರಯುಕ್ತ ಸಹಕಾರ ಸಪ್ತಾಹ ಆಚರಣೆ ಅಂಗವಾಗಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ರಾಮದುರ್ಗ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಜರುಗಿತು.
ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ. ಬೆಂಗಳೂರು, ಬೆಳಗಾವಿ ಸಹಕಾರ ಯುನಿಯನ್, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಕರ್ನಾಟಕ ರಾಜ್ಯ ಸೌಹಾರ್ಧ ಸಂಯುಕ್ತ ಸಹಕಾರಿ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಬೆಳಗಾವಿ ಯಶಸ್ವಿನಿ ಟ್ರಸ್ಟ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರಾಮದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಹುಬ್ಬಳ್ಳಿ ಜಯಪ್ರಿಯಾ ಕಣ್ಣಿನ ಆಸ್ಪತ್ರೆ ಇವರ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ನಡೆಸಲಾಯಿತು.
ಸಹಕಾರ ಅಭಿವೃದ್ಧಿ ಅಧಿಕಾರಿ ಗಿರೀಶ ಯಾವಗಲ್ಲ ಶಿಬಿರ ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ ತಾಲೂಕಾ ನಿಯಂತ್ರಣಾ ಅಧಿಕಾರಿ ಬಿ.ಬಿ. ಹಾಲೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ವೈದ್ಯಾಧಿಕಾರಿಗಳಾದ ಡಾ. ವೆಂಕಟರಾಮ ಕಟ್ಟಿ, ಡಾ. ಅಮರಜಿತ ಚೌವ್ಹಾಣ, ಬಸವರಾಜ ಹೂಗಾರ ಮತ್ತು ಡಿಸಿಸಿ ಬ್ಯಾಂಕ್ ಬಿಐ ಜಂಬಗಿ, ಪ್ರಕಾಶ್ ಹಾಗೂ ಪಿಕೆಪಿಸ್ ಕಾರ್ಯದರ್ಶಿಗಳಾದ ಮಾರುತಿ ರಡರಟ್ಟಿ, ಬಸವರಾಜ ಸೊಮಗೊಂಡ, ಮಾರುತಿ ಕೊಡ್ಲಿವಾಡ, ಮಲ್ಲಪ್ಪ ತಳವಾರ, ಬಿ.ಎಸ್. ದ್ಯಾವಣಗೌಡರ, ರಾಜೇಸಾಬ ದಾನಕಟಗಿ, ಎಂ.ಎಚ್. ಪೂಜೇರ, ಮಲ್ಲಪ್ಪ ಸಂಕದಾಳ, ಎಂ.ಜಿ. ಚಿನಗುಡಿ, ಶಿವಾನಂದ ಅವರಾದಿ ಸೇರಿದಂತೆ ಪಿಕೆಪಿಎಸ್ ನ ಇತರ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.