Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅನಿರ್ದಿಷ್ಟಾವಧಿ ಧರಣಿಯ ೩೯ನೆ ದಿನಕ್ಕೆ : ಕೆಂಗಲ್ಲ-ಖಜಗಲ್ಲ ಗ್ರಾಮಸ್ಥರ ಬೆಂಬಲ

ಹನಗುಂದ,ಜೂ,೧೫ : ತಾಲೂಕಿನ ಇದ್ದಲಗಿ ಗ್ರಾಮದ ಯೋಜನಾ ಭಾದಿತ ಮುಳಗಡೆ ಸಂತ್ರಸ್ತರ ಪುನರ್ವಸತಿ ಕೇಂದ್ರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವುದು, ಶೆಡ್ ಪುನರ ನಿರ್ಮಾಣ ಹಾಗೂ ೪ ಗುಂಟೆ ನಿವೇಶನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯ ೩೯ನೆ ದಿನ ಕೆಂಗಲ್ಲ-ಖಜಗಲ್ಲ ಗ್ರಾಮಗಳ ಸಂತ್ರಸ್ತರು ಭಾಗವಹಿಸಿ ಧರಣಿ ಸತ್ಯಾಗ್ರಹಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದರು.
ಸಂತ್ರಸ್ಥ ಹನಮಗೌಡ ಪಾಟೀಲ ಮಾತನಾಡಿ ೧೦ ಮುಳಗಡೆ ಗ್ರಾಮಗಳ ಸಂತ್ರಸ್ತರ ಸಂಕಷ್ಟ ಹೇಳತೀರದಾಗಿದೆ. ಎಲ್ಲ ಮುಳುಗಡೆ ಗ್ರಾಮಗಳಿಗೂ ಪುನರ್ವಸತಿ ಕೇಂದ್ರಗಳು ಇದ್ದರೂ ಯಾವುದೆ ಮೂಲಭೂತ ಸೌಲಭ್ಯಗಳು ಕಲ್ಪಿಸಿಲ್ಲ. ಅಲ್ಲಿ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಸಧ್ಯ ಸರ್ಕಾರ ಒಂದು ಗುಂಟೆ ನಿವೇಶನ ನೀಡಿದೆ. ಆ ಒಂದು ಗುಂಟೆ ಜಾಗೆ ರೈತಾಪಿ ಕುಟುಂಬಗಳಿಗೆ ಸಾಕಾಗುತ್ತಿಲ್ಲ ಮನೆ ಮಂದಿ, ದನಕರು, ಆಡು, ಕುರಿಗಳನ್ನು ಕಟ್ಟಿಕೊಂಡು ಸರ್ಕಾರ ಕೊಟ್ಟ ಜಾಗೆಯಲ್ಲಿ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಲ್ಲ. ನಮಗೆ ನಾಲ್ಕು ಗುಂಟೆ ನಿವೇಶನ ನೀಡುವರಿಗೂ ಮತ್ತು ಸೌಲಭ್ಯಗಳನ್ನು ಒದಗಿಸುವವರೆಗೂ ನಮ್ಮಗಳ ಹೋರಾಟ ನಿರಂತರವಾಗಿರುತ್ತದೆ. ಮುಳಗಡೆ ಸಂಸ್ರಸ್ತರ ನ್ಯಾಯಯುತವಾದ ಬೇಡಿಕೆ ಈಡೇರಿವರಿಗೂ ಹೋರಾಟ ನಿರಂತರವಾಗಿರಲಿ ಅದಕ್ಕೆ ನಮ್ಮ ಗ್ರಾಮಸ್ಥರ ಬೆಂಬಲ ಸದಾ ಬೆಂಬಲ ಇರುತ್ತದೆ ಎಂದರು. ಈ ಸಂದರ್ಭದಲ್ಲಿ ಬಿ. ಬಿ. ಕೊಪ್ಪದ, ಯಮನಪ್ಪ ವಾಲಿಕಾರ, ಬಿ. ಎಸ್, ಕಳ್ಳಿಗುಡ್ಡ, ಹನಮಂತನ ನಂದಿಕೇಶ್ವರ, ಮಂಜುನಾಥ್ ಲಗಮ್ಮಣ್ಣವರ, ಬಸಪ್ಪ ಜುಮ್ಮಣ್ಣವರ, ಗಂಧಪ್ಪ ಜುಮಣ್ಣವರ, ಬಸವರಾಜ ಮುಳ್ಳೂರ, ಕಲ್ಲಪ್ಪ ಆನೇಹೊಸೂರ, ಶೇಖಪ್ಪ ಕಾಳಗಿ, ಸಿದ್ದಪ್ಪ ಲಗಮ್ಮಣ್ಣವರ, ಯಮನಪ್ಪ ಕೊಪ್ಪದ, ಹನುಮಂತ ಮಂಕಣಿ, ಮುತ್ತಪ್ಪ ಮಾಗಿ, ರಾಮಣ್ಣ ಕೊಪ್ಪದ ಸೇರಿದಂತೆ ಇತರರು ಇದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ