ಸಂಕೇಶ್ವರ : ಬೇಸಿಗೆ ದಾಹ ತಣಿಸುವ ಉದ್ದೇಶದಿಂದ ಚನ್ನಮ್ಮ ಸರ್ಕಲ್ ನಲ್ಲಿ ಪುರಸಭೆ ವತಿಯಿಂದ ಮಡಿಕೆಯಲ್ಲಿ ನೀರು ಹಾಕಿ ತಂಪಾದ ಕುಡಿಯುವ ನೀರಿನ ಅರವಟಿಗೆ ಇಟ್ಟು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿದೆ.
ಚನ್ನಮ್ಮ ಸರ್ಕಲ್ ನಲ್ಲಿನ ರಸ್ತೆಯಲ್ಲಿ ನಿತ್ಯ ಸಾವಿರಾರು ಜನರು ಓಡಾಟ ನಡೆಸುತ್ತಿರುತ್ತಾರೆ. ಬಿಸಿಲ ಧಗೆಯಿಂದ ಬಾಯಾರಿ ಬಂದವರು ಇಲ್ಲಿ ಸ್ವಲ್ಪ ಹೊತ್ತು ತಂಗಿ, ಇಲ್ಲಿ ಇಡಲಾದ ತಂಪಾದ ಕುಡಿಯುವ ನೀರು ಸೇವಿಸಿ ದಾಹ ತಣಿಸಿಕೊಳ್ಳುತ್ತಿದ್ದಾರೆ.
ಚನ್ನಮ್ಮ ಸರ್ಕಲ್ ಬಳಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಪುರಸಭೆ ವತಿಯಿಂದ ಟೆಂಟ್ ನಿರ್ಮಿಸಿ ಅದರಲ್ಲಿ ಜನರಿಗೆ ಕುಳಿತುಕೊಳ್ಳಲು ಕುರ್ಚಿಯನ್ನು ಸಹ ಇಡುವ ವ್ಯವಸ್ಥೆಯನ್ನು ಮಾಡಲಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ತತ್ತರಿಸುತ್ತಿರುವ ಜನರಿಗೆ ಈ ವ್ಯವಸ್ಥೆಯು ಸಾರ್ವಜನಿಕರಿಗೆ ಅನುಕೂಲಕರವಾಗಲಿ ಎಂದು ಪುರಸಭೆಯ ಆರೋಗ್ಯಕಿರು ನೀರಿಕ್ಷಕರಾದ ಶ್ರೀಧರ ಬೆಳವಿ ತಿಳಿಸಿದರು.
ಈ ಸಂಧರ್ಭದಲ್ಲಿ ಪುರಸಭೆಯ ಸಿಬ್ಬಂದಿಗಳಾದ ಕೃಷ್ಣಾ ಖಾತೆದಾರ, ಪರುಶರಾ ಪಾಟೀಲ, ಪೌರಕಾರ್ಮಿಕರಾದ ಮಂಗಲ ತಮ್ಮಣ್ಣವರ, ಪ್ರಕಾಶ ಸತ್ಯನಾಯಿಕ ಸೇರಿದಂತೆ ಅನೇಕರು ಇದ್ದರು.
ಸದ್ಯ ಬಿಸಿಲಿನ ಪ್ರಖರತೆ ಅಧಿಕವಾಗುತ್ತಿದ್ದು ಪಟ್ಟಣದಲ್ಲಿ ಅಧಿಕವಾಗಿ ಸಾರ್ವಜನಿಕರ ಓಡಾಟ ನಡೆಸುವ ಪ್ರದೇಶದಲ್ಲಿ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.