ಅಥಣಿ: ಅಥಣಿ ಮತಕ್ಷೇತ್ರದ ಕಟಗೇರಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಪ್ರಾರ್ಥನಾ ನಾಗಪ್ಪ ಬಿರಾದರ ಪಾಟೀಲ ಎಸ್,ಎಸ್,ಎಲ್,ಸಿ ಪರೀಕ್ಷೆಯಲ್ಲಿ ೬೨೫/೬೨೫ ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ಐಗಳಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ, ವಿದ್ಯಾರ್ಥಿದಶರಥ ಶಿವಾಜಿ ಭೋಸಲೆ ೬೨೪/೬೨೫ ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಅಥಣಿ ತಾಲೂಕಿಗೆ ಹೆಮ್ಮೆಯ ತಂದಿರುವ ಹಿನ್ನಲೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ ಗೃಹ ಕಛೇರಿಯಲ್ಲಿ ಸಾಧನೆಗೈದ ಇಬ್ಬರು ವಿದ್ಯಾರ್ಥಿಗಳಿಗೆ ಶಾಸಕ ಲಕ್ಷ್ಮಣ ಸವದಿಯವರು ಸತ್ಕರಿಸಿ ಗೌರವಿಸ ಅಭಿನಂದಿಸಿದರು
ಈ ವೇಳೆ ಪುರಸಭೆ ಸದಸ್ಯ ರಾಜೂ ಗೂಡೊಡಗಿ, ಬಿಇಓ ಎಮ್ ಆರ್ ಮುಂಜೆ, ಮುಖ್ಯ ಶಿಕ್ಷಕ ಗೌಡಪ್ಪ ಖೋತ, ಪೊಷಕರಾದ ನಾಗಪ್ಪ ಬಿರಾದಾರ ಪಾಟೀಲ, ವಿನೋದಾ ಬಿರಾದಾರ ಪಾಟೀಲ ಉಪಸ್ಥಿತರಿದ್ದರು