ಹೊಸಪೇಟೆ: ಅಗ್ನಿಶಾಮಕ ಸಿಬ್ಬಂದಿಗಳು ನಿಜ ಜೀವನದ ಹೀರೋಗಳು. ಅವರು ಜೀವಗಳನ್ನು ಉಳಿಸುವ ಕಾರ್ಯ ಮಾಡುವರು ಆದ್ದರಿಂದ ಅವರು ಹೀರೋಗಳು ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ ವೀರಭದ್ರಪ್ಪ ತಂಬ್ರಳ್ಳಿ ಹೇಳಿದರು .
ಅವರು. ಶಂಕರ ಆನಂದ್ ಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ NSS ಹಾಗೂ Youth Red Cross ಘಟಕಗಳ ಹಾಗೂ ಅಗ್ನಿ ಶಾಮಕ ಇಲಾಖೆಗಳ ಸಹಯೋಗದಲ್ಲಿ "ಅಗ್ನಿ ಸುರಕ್ಷತೆ ಹಾಗೂ ಅಗ್ನಿ ತುರ್ತು ಪರಿಸ್ಥಿತಿಯ ನಿರ್ವಹಣೆ" ಯ ಕುರಿತು ಉಪನ್ಯಾಸವನ್ನು ಕಾರ್ಯ ಕ್ರಮ ದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೊಸಪೇಟೆ ಅಗ್ನಿಶಾಮಕ ಠಾಣಾಧಿಕಾರಿಗಳಾದ ಯುವರಾಜ್ ರವರು ಅಗ್ನಿಯ ವಿಧಗಳು ಹಾಗೂ ಅಗ್ನಿ ಅವಘಡಗಳನ್ನು ಎದುರಿಸುವ ಕುರಿತು ಉಪನ್ಯಾಸದ ನಂತರದಲ್ಲಿ, ಅಗ್ನಿಶಾಮಕ ವಿಭಾಗದ ಸಿಬ್ಬಂದಿಗಳು ಕಾಲೇಜಿನ ಆವರಣದಲ್ಲಿ ಅಗ್ನಿಯನ್ನು ನಂದಿಸುವ ಕುರಿತು ಪ್ರಾತ್ಯಕ್ಷಿಕೆಯನ್ನು ನೀಡಿದರು. NSS ಕಾರ್ಯಕ್ರಮಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಕಪ್ಪಿ, ವೀರೇಶ್ ಹಳೆಮನೆ, ಯುವ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ವೀರೇಂದ್ರ ಪಾಟೀಲ್ ಸಿ, ಅಧ್ಯಾಪಕರುಗಳಾದ ಡಾ. ಸಿ ದೇವಣ್ಣ, ಡಾ. ನಾಗಣ್ಣ, ಡಾ ವಾಣಿಶ್ರೀ ತೋಟದ, ಡಾ. ದಾರುಕಸ್ವಾಮಿ, ಡಾ. ಗುರುರಾಜ್, ಡಾ. ರಘುಪ್ರಸಾದ್, ಶ್ರೀ ರಾಜವಲಿ, ಶ್ರೀ ಮುರಳೀಧರ, NSS, ಯುವ ರೆಡ್ ಕ್ರಾಸ್ ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕು ರೇವತಿ ಹಾಗೂ ಕು ವಿಶ್ವನಾಥ್ ನಿರೂಪಿಸಿದರು.
