Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕುಟುಂಬ, ಸ್ನೇಹ ಎರಡು ಅವಿನಾಭಾವ ಸಂಬಂಧ ಹೊಂದಿವೆ : ಪ್ರೋ. ವಾಯ್ ಎಮ್ ಯಾಕೊಳ್ಳಿ 

ನೇಸರಗಿ. ಜೀವನದಲ್ಲಿ ನಾವು, ನೀವೆಲ್ಲರೂ ಕುಟುಂಬಕ್ಕೆ ಹೇಗೆ ಪರಸ್ಪರ ಪ್ರೀತಿ, ವಿಶ್ವಾಸ ನೀಡುತ್ತಿರೋ, ಸ್ನೇಹಕ್ಕೆ ಅದೇ ರೀತಿ ಅನುಕರಣೆ ಮಾಡಿ ಜೀವನದಲ್ಲಿ ಮುಂದೆ ಬನ್ನಿ ಎಂದು ನಿವೃತ್ತ ಪ್ರಾಂಶುಪಾಲರಾದ ವಾಯ್ ಎಮ್ ಯಾಕ್ಕೊಳಿ ಹೇಳಿದರು.

    ಅವರು ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯ ವೇದಿಕೆಯಲ್ಲಿ ಆಯೋಜಿಸಲಾಗಿದ್ದ 1999-2002 ರವರೆಗೆ ಬಿ ಎ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಂದ ಗುರುವಂದನೆ, ಸ್ನೇಹಿತರ ಪುನರ ಮಿಲನ ಕಾರ್ಯಕ್ರಮ ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಫ್ ಡಿ ಗದ್ದಿಗೌಡರ ವೀರಚಿತ ಗುರು ನೀನು ಶಿಷ್ಯ ನಾನು ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ ನಾನು ಕಠಿಣ ಪರಿಶ್ರಮದಿಂದ ಮುಂದೆ ಬಂದಿದ್ದು, ಇದಕ್ಕೆ ನಮ್ಮ ಕುಟುಂಬದ ಸಹಕಾರ ಇದ್ದು, ಹಾಗೆ ನೀವು ನಿಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಪ್ರೀತಿ ವಿಶ್ವಾಸದಿಂದ  ಕಾಣಿರಿ ಎಂದರು.

    ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಜಂಟಿ ನಿರ್ದೇಶಕರಾದ ವ್ಹಿ ಎಸ್ ಪ್ರಕಾಶ ಮಾತನಾಡಿ ಕುಟುಂಬಕ್ಕಿಂತ ಸ್ನೇಹಕ್ಕೆ ಹೆಚ್ಚಿನ ಬೆಲೆ  ಇದ್ದು, ಬಾಲ್ಯದ ಸ್ನೇಹಿತರನ್ನು ನಾವು, ನೀವೆಲ್ಲರೂ ಮರೆಯಬಾರದು, ತಾವು ಎಲ್ಲರೂ ಇಂದು ಈ ವೇದಿಕೆಯಲ್ಲಿ ಸೇರಿದ್ದು ಸಂತಸ ನೀಡಿದ್ದು, 27 ವರ್ಷಗಳ ಹಿಂದಿನ ಸವಿ ನೆನಪು ಪಾಠ ಕಲಿಸಿದ ಗುರುಗಳಿಗೆ ಗುರುವಂದನೆ ಮಾಡುತ್ತಿರುವದು ಹೆಮ್ಮೆಯ ವಿಷಯ ಎಲ್ಲರಿಗೂ ಯಾಕೊಳ್ಳಿ ಗುರುಗಳ ಕುಟುಂಬ ಪದ್ಧತಿ ಮಾದರಿ  ಎಂದರು.

     ಪದವಿ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಎಫ್ ಡಿ ಗದ್ದಿಗೌಡರ ಮಾತನಾಡಿ 27 ವರ್ಷಗಳ ಹಿಂದೆ ವ್ಯಾಸಂಗ ಮಾಡಿದ್ದ ತಾವು ಇಂದು ಕಾಲೇಜು ನೆನಪಿಸಿ, ಕಷ್ಟಪಟ್ಟು ಕಾರ್ಯಕ್ರಮ ಆಯೋಜನೆ ಮಾಡಿ, ಗುರುಗಳಿಗೆ ವಂದನೆ ಸಲ್ಲಿಸಿ ಕಾಲೇಜು ಅಭಿವೃದ್ಧಿಗೆ ತಾವು 20 ಡೆಸ್ಕಗಳನ್ನು ದೇಣಿಗೆ ನೀಡಿ ಹಿಂದಿನ ಕಾಲೇಜು ವಿದ್ಯಾರ್ಥಿಗಳಾದ ತಾವುಗಳು ಕಾಲೇಜು ಅಭಿವೃದ್ಧಿಗೆ ಕಾಣಿಕೆ ನೀಡಿ ಅಪಾರ ಸಾಧನೆ ಮಾಡಿದ್ದೀರಿ, ಮುಂದೆ ನಮ್ಮ ಕುಟುಂಬ, ಸ್ನೇಹ ಸದಾ ಮುಂದೆ ಸಾಗಲಿ ಎಂದರು.

  ಕಾರ್ಯಕ್ರಮದಲ್ಲಿ ಪ್ರೋ. ಬಿ ಪಿ ಮಠದ, ಪ್ರೋ ಎಸ್ ವ್ಹಿ ಚಿನಗುಡಿ, ಡಾ. ಎ ಎಸ್ ನಾಯಿಕ, ಡಾ. ಜೆ ಎಮ್ ಜಾಲಿಹಾಳ, ಪ್ರೋ. ಅರ್ ಜೆ ಕಟ್ಟಿ,ಪ್ರೋ. ಎಮ್ ಎ ಡವಳೇಶ್ವರ, ಪ್ರೋ. ಬಿ ಎ ಹಸರಡ್ಡಿ,, ಪ್ರೋ, ಎಸ್ ವಿ ಚಿಂಚಣಿ, ಪ್ರೋ. ಬಿ ಕೆ ಮದವಾಲ, ಪ್ರೋ ಎಸ್ ಕೆ ಮೂಲಿಮನಿ, ಪ್ರೋ ಡಿ ಎಸ್ ಮಲ್ಲಿಭಾಶೆಟ್ಟಿ,ಮಲ್ಲಿಕಾರ್ಜುನ ಮಾಳಣ್ಣವರ, ಜೆ ಬಿ ಬೂದಿಹಾಳ, ಎಸ್ ಎಸ್ ಉಕ್ಕಿನಯ್ಯನವರ, ಐ ಬಿ ಫೀರಜಾದೆ, ಸುಜಾತಾ ಮಹಾಳೆ, ರಾಘವೇಂದ್ರ ಕುಲಕರ್ಣಿ, ಎನ್ ಎಮ್ ನೀಲಣ್ಣವರ, ಡಿ ಅರ್ ಸಾಲುಂಕೆ, ಸುಧಾರಣೆ ಸಮಿತಿ ಸದಸ್ಯರಾದ ನಜೀರ್ ಅಹಮ್ಮದ ತಹಶೀಲ್ದಾರ, ಚನಗೌಡ ಪಾಟೀಲ, ಯಮನಪ್ಪ ಪೂಜೇರಿ, ಸುರೇಶ ಲೆಂಕನಟ್ಟಿ, ಸುನೀಲ ಪಿಸೆ ಹಾಗೂ ಅಡಿವಪ್ಪ ಚಿಗರಿ, ಪಿ ಡಿ ಓ ವನಜಾಕ್ಷಿ ಪಾಟೀಲ, ಕಾಲೇಜು ಪ್ರಾಧ್ಯಾಪಕರು, ಭೋಧಕ, ಭೋಧಕ್ಕೇತ್ತರ ಸಿಬ್ಬಂದಿ, 1999-2002 ರವೆರೆಗೆ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು.  ನಿರೂಪಣೆಯನ್ನು ಪಟ್ಟೆದ ಗುರುಗಳು ನೆರವೇರಿಸಿದರೆ, ಪರಿಚಯ ಅಭಿನಂದನೆಯನ್ನು ಶ್ರೀಮತಿ ಕಳ್ಳಿಬಡ್ಡಿ ನಡೆಸಿಕೊಟ್ಟರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ