ಜಮಖಂಡಿ; ಸನಾತನ ಸಂಸ್ಕೃತಿಯ ಉಳಿವಿಗೆ ಪ್ರತಿಯೊಬ್ಬರು ಶ್ರಮಿಸಬೇಕು, ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನ ತೀರ್ಥರು ತಿಳಿಸಿದರು. ಬುಧವಾರ ನಡೆಯಲಿರುವ ಸಾಮೂಹಿಕ ಉಪನಯನ ಕಾರ್ಯಕ್ರಮಗಳಲ್ಲಿ ವಟುಗಳಿಗೆ ಬ್ರಹ್ಮೋಪದೇಶ ನೀಡಲು ಮಂಗಳವಾರ ನಗರಕ್ಕೆ ಆಗಮಿಸಿದ್ದ ಅವರು ಅನಂತರಾವ ಸಾಬಡೆ ಮೈದಾನ ಹೊಕ್ಕಳಭಾವಿ ಪ್ರದೇಶದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಪುರಾತನ ಖುಷಿ ಮುನಿಗಳ ಹೆಸರನ್ನು ಗೋತ್ರವನ್ನು ಹೇಳುವಾಗ ಹೇಳುತ್ತೇವೆ. ಅವರು ಸಾವಿರಾರು ವರ್ಷಗಳ ತಪಸ್ಸನ್ನು ಆಚರಿಸಿ ಅದರ ಫಲವನ್ನು ನಮಗೆ ನೀಡಿದ್ದಾರೆ ಅದರ ಖುಣ ವನ್ನು ತೀರಿಸಲು ಗಾಯತ್ರಿ ಮಂತ್ರದ ಅನುಷ್ಠಾನ ಶಾಸ್ತ್ರಗಳ ಅಧ್ಯಯನ ನಿರಂತರವಾಗಿ ನಡೆಸಿ ಮುಂದಿನ ಪೀಳಿಗೆಗೆ ತಿಳಿಸಿ ಕೊಟ್ಟರೇ ಋುಷಿಗಳ ಋಣ ತೀರಿಸಿದಂತಾಗುತ್ತದೆ ಎಂದು ತಿಳಿಸಿದರು. ಹೆಣ್ಣು ಮಕ್ಕಳಿಗೆ ಲಕ್ಷ್ಮೀ ಸೋಬಾನ ಪದ, ಹರಿಕಥಾಮೃತ ಸಾರ ಮುಂದಾವುಗಳ ಅಧ್ಯಯನ ಪಾರಾಯಣವನ್ನು ಶಾಸ್ತ್ರದಲ್ಲಿ ಹೇಳಲಾಗಿದೆ. ಗಂಡು ಮಕ್ಕಳಿಗೆ ಆತ್ಮ ಉದ್ಧಾರಕ್ಕಾಗಿ ವೇದಾಧ್ಯಯನ, ದೇಹ ಪೋಷಣೆಗೆ ಲೌಕಿಕ ವಿದ್ಯೆ ಎರಡನ್ನೂ ಚನ್ನಾಗಿ ಕಲಿತು ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ವಾಗಬೇಕು ಎಂದು ತಿಳಿಸಿದರು. ಸೂರ್ಯ ನಿಂದ ಹೊರ ಪ್ರಪಂಚದ ಕತ್ತಲು ದೂರವಾಗುತ್ತದೆ. ಒಳಗಿರುವ ಅಜ್ಞಾನ ಎಂಬ ಕತ್ತಲನ್ನು ಹೋಗಲಾಡಿಸಲು ಸೂರ್ಯನಾರಾಯಣನ ಕೃಪೆ ಬೇಕು ಅದಕ್ಕೆ ಗಾಯತ್ರಿ ಮಂತ್ರದ ನಿರಂತರ ಅನುಷ್ಠಾನ ನಡೆಯಬೇಕು ಎಂದು ತಿಳಿಸಿದರು. ಸನಾತನ ಸಂಸ್ಕೃತಿಯ ಬಗ್ಗೆ ತಿಳಿ ಪಡಿಸಲು ಶಿಬಿರಗಳನ್ನು ಏರ್ಪಡಿಸಬೇಕು ಪ್ರತಿಯೊಬ್ಬರೂ ಧರ್ಮಮಾರ್ಗದಲ್ಲಿರ ಬೇಕು ಎಂದು ಹೇಳಿದರು.
ರಾಜೇಂದ್ರ ಹುಲ್ಯಾಳಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಳೆದ 5 ವರ್ಷಗಳಿಂದ ಸಾಮೂಹಿಕ ಉಪನಯನ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು. ಸಮಾಜದವರ ಸಹಕಾರ ದಿಂದ ಈವರೆಗೆ ಸುಮಾರು 75 ಕ್ಕೂ ಹೆಚ್ಚು ವಟುಗಳಿಗೆ ಉಪನಯನ ಮಾಡಿಸಿ, ಯತಿಗಳಿಂದ ಅನುಗ್ರಹ, ಬ್ರಹ್ಮೋಪದೇಶ ಮಾಡಿಸಲಾಗಿದೆ. ಈ ಬಾರಿ 20 ವಟುಗಳಿಗೆ ಉಪನಯನ ನಡೆಯಲಿದೆ ಎಂದು ತಿಳಿಸಿದರು. ವಿದ್ಯಾರ್ಥಿ ಅಕ್ಷಯ ಮಾತನಾಡಿದರು. ಶ್ರೀಮಠ ದಿಂದ ಹಾವೇರಿ ಜಿಲ್ಲೆಯ ಕರಜಗಿ ಗ್ರಾಮದಲ್ಲಿ ವಿ
ಶ್ವೇಶತೀರ್ಥ ಗುರುಕುಲ ಪ್ರಾರಂಭಿಸಲಾಗಿದ್ದು ಆಸಕ್ತರು ತಮ್ಮ ಮಕ್ಕಳನ್ನು ವೇದ, ಶಾಸ್ತ್ರಗಳ ಅಧ್ಯಯನಕ್ಕೆ ಕಳುಹಿಸಿ ಕೊಡಬಹುದು ಎಂದು ತಿಳಿಸಿದರು. ವಿದ್ಯಾರ್ಥಿಗಳು ವೇದಘೋಷ ಮಾಡಿದರು. ಶುಭಶ್ರೀ ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ಮೈಗೂರ ಆಚಾರ ಅನಿಸಿಕೆ ಹಂಚಿ ಕೊಂಡರು. ಎಸ್.ಎಲ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪ್ರವೀಣ ಕುಲಕರ್ಣಿ ವಂದಿಸಿದರು.
