ಹುನಗುಂದ; ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಪ್ರತಿವ? ಜೂನ್ ೫ರಂದು ’ವಿಶ್ವ ಪರಿಸರ’ ದಿನವನ್ನು ಆಚರಿಸಲಾಗುತ್ತಿದೆ.ಇದು ಹಸಿರನ್ನು ಉಳಿಸಿ, ಬೆಳೆಸುವ ಮೂಲಕ ಹೆಚ್ಚು ಸಮರ್ಥನೀಯ ಭವಿ?ವನ್ನು ಸೃಷ್ಟಿಸುವ ಗುರಿ ಹೊಂದಿದೆ. ಈ ಮಹತ್ವದ ದಿನದಂದು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪರಿಸರ ರಕ್ಷಣೆಗೆ ಉತ್ತೇಜನ ನೀಡಲು ದೃಢವಾದ ಮತ್ತೊಂದು ಹೆಜ್ಜೆಗೆ ಸಿದ್ದರಾಗೋಣ ಎಂದು ವಲಯ ಅರಣ್ಯಾಧಿಕಾರಿ ಜೈವರ್ಧನ ತಳವಾರ ಹೇಳಿದರು.
ಇಲ್ಲಿನ ವಲಯ ಅರಣ್ಯಾಧಿಕಾರಿಗಳ ಕಚೆರಿ ಮತ್ತು ಕಾನೂನು ಅಅರಿವು ನೆರವು ಹಾಗೂ ವಕೀಲರ ಸಂಘ ಸಹಯೋಗದಲ್ಲಿ ನಡೆಸಿದ ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಸಸಿ ನೆಟ್ಟು ನೀರುಣಿಸಿ ಅವರು ಮಾತನಾಡುತ್ತ ವನ್ಯ ಜೀವಿಗಳ ಪೋ?ಣೆಯಲ್ಲಿ ಪರಿಸರವೂ ಅತಿ ಮುಖ್ಯ ಪಾತ್ರ ವಹಿಸುತ್ತಿದೆ. ಹೀಗಾಗಿಯೇ ಈ ದಿನಕ್ಕೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ ಎಂಬುದನ್ನು ನಾವಿಂದು ಮನಗಾಣಬೇಕಾಗಿದೆ. ಮಾನವ ಸೇರಿದಂತೆ ಇತರ ಪ್ರಾಣಿ, ಪಕ್ಷಿಗಳೂ ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ ,ನೀರು ಮತ್ತು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನು ಅವಲಂಬಿಸಿದ್ದೇವೆ.ಆದರೆ ಅದರ ಜತೆಗೆ ಇತ್ತಿಚಿನ ದಿನಗಳಲ್ಲಿ ಮಾನವನು ತನ್ನ ಅನುಕೂಲತೆಗಳಿಗಾಗಿ ಪರಿಸರವನ್ನು ಹಾಳು ಮಾಡುತ್ತಿದ್ದಾನೆ ಎಂಬುದನ್ನು ನಾವು ನಿತ್ಯ ನೋಡುತ್ತೇವೆ ಎಂದು ತಳವಾರ ತಿಳಿಸಿದರು.
ನ್ಯಾಯವಾದಿ ಉಮಾ ಬಳ್ಳೋಳ್ಳಿ ಮಾತನಾಡುತ್ತ ಮಣ್ಣು, ಗಾಳಿ ,ನೀರು ಸೇರಿದಂತೆ ಎಲ್ಲವೂ ಕಲುಷಿತಗೊಂಡು ಇಡೀ ಪರಿಸರವೇ ಹಾಳಾಗುತ್ತದೆ. ಇದರಿಂದಾಗಿಯೇ ಹವಾಮಾನ ವೈಪರಿತ್ಯ, ಆರೋಗ್ಯ ಸಮಸ್ಯೆಗಳು ಹೆಚ್ಚಿ ಜನಜೀವನ ದುಸ್ತರವಾಗಿ ಮನು ಕುಲದ ಸರ್ವನಾಶಕ್ಕೆ ನಾವೇ ಕಾರಣರಾಗಿದ್ದೇವೆ. ಹೀಗಾಗಿ ಪರಿಸರ ಉಳಿಸುವಂತೆ ಜನರಿಗೆ ತಿಳಿಸಿ ಹೇಳುವುದರ ಮೂಲಕ ಅದರ ಉಳಿವಿಗೂ ಸಂಕಲ್ಪ ಮಾಡುವುದು ಇಂದಿನ ಕರ್ತವ್ಯವಾಗಿದೆ. ಆ ದಿಸೆಯಲ್ಲಿ ನಾವೆಲ್ಲರೂ ಕಾಡು ಬೆಳೆಸಿ ನಾಡು ಉಳಿಸಲು ಮುಂದೆ ಸಾಗೋಣ ಎಂದರು. ಉಪ ವಲಯ ಅರಣ್ಯಾಧಿಕಾರ ಎಸ್.ಎನ್. ಕಂಬಿಮಠ, ವಿಜಯಕುಮಾರ ನಾಯಕ, ಜಗಧೀಶ ಚಿಂಚೋಳ್ಳಿ, ಗಿರೀಶ ಮೆಕ್ಕೇದ, ಅರಣ್ಯ ವೀಕ್ಷಕ ಯಲ್ಲಪ್ಪ ಅಂಬಿಗೇರ ಮತ್ತು ಸಿಬ್ಬಂದಿ, ಶ್ರೀಮತಿ ದೀಪಾ, ದೇವರಾಜ ಅರಸು ವಸತಿ ನಿಲಯದ ವಿಧ್ಯಾರ್ಥಿನಿಯರು ಇದ್ದರು.
೫;ಎಚ್ಎನ್ಡಿ;೧; ಹುನಗುಂದ ವಲಯ ಅರಣ್ಯ ಇಲಾಖೆ ಮತ್ತು ಕಾನೂನು ಅರಿವುನೆರವು ಮತ್ತು ವಕೀಲರ ಸಂಘದ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಜೈವರ್ಧನ ತಳವಾರ ಸಸಿ ನೆಟ್ಟು ನೀರುಣಿಸಿದರು.
