Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಾ. ರಾಜಕುಮಾರ್ ಜೀವನವೇ  ಒಂದು ವಿಶ್ವವಿದ್ಯಾಲಯ ಇದ್ದಂತೆ :  ಮೇಯರ್ ಗಾದೆಪ್ಪ ಅಭಿಮತ 

ಬಳ್ಳಾರಿ. ಮೇ. 05:  ಡಾ. ರಾಜಕುಮಾರ್ ಚಲನಚಿತ್ರಗಳನ್ನು ನೋಡುವ ಮೂಲಕ ಅವರ ಜೀವನದ ಪಾಠವನ್ನು ಕಲಿತುಕೊಂಡಿದ್ದೇವೆ ನಾನು ಡಾ. ರಾಜಕುಮಾರ್ ಅವರ ದೊಡ್ಡ ಅಭಿಮಾನಿ, ಅವರ ಜೀವನವೇ ಒಂದು ವಿಶ್ವವಿದ್ಯಾಲಯ ಇದ್ದಂತೆ ಅವರನ್ನು ನೋಡಿ ತಿಳಿದುಕೊಂಡು ಕಲಿಯಬೇಕಾದದ್ದು ಬಹಳಷ್ಟು ಇದೆ  ಎಂದು ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಪಿ ಗಾದೆಪ್ಪ ಹೇಳಿದರು.
ಅವರು ಇಂದು ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ವತಿಯಿಂದ ಡಾ. ರಾಜಕುಮಾರ್ ರಸ್ತೆಯ ಕನ್ನಡ ಭವನದಲ್ಲಿ ಹಮ್ಮಿಕೊಂಡ ಡಾ. ರಾಜಕುಮಾರ್ ರವರ 98ನೇ  ಜಯಂತಿ ಕಾರ್ಯಕ್ರಮದಲ್ಲಿ ವೀರ ಕನ್ನಡಿಗ  ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು 
 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ   ಗಾಂಧಿನಗರ ಸರ್ಕಲ್ ಇನ್ಸ್ಪೆಕ್ಟರ್  ರವಿ ಚಂದನ್ l ನಾನು ಡಾ.ರಾಜ್ ಅಭಿಮಾನಿ ಅವರ ಜೀವನ ಚರಿತ್ರವನ್ನು ಅವರ ಚಿತ್ರಗಳ ಮುಖಾಂತರ ನೋಡಿ ಇವತ್ತು ಇಲಾಖೆಯಲ್ಲಿ ಉತ್ತಮ ವ್ಯಕ್ತಿಯಾಗಿ  ಸೇವೆ ಸಲ್ಲಿಸುತ್ತಿದ್ದೇನೆ ಎಲ್ಲರೂ ಡಾ ರಾಜ್ ಅವರ ಚಲನಚಿತ್ರಗಳಲ್ಲಿನ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
 ಈ ಸಂದರ್ಭದಲ್ಲಿ ಕರವೇ  ಕಾವಲುಪಡೆಯ ರಾಜ್ಯಾಧ್ಯಕ್ಷ ಸುರೇಶ್ ಮಾತನಾಡಿ, ಡಾಕ್ಟರ್ ರಾಜಕುಮಾರ್ ಒಬ್ಬ ಚಿತ್ರನಟ ಮಾತ್ರ ಆಗಿರದೆ ಅವರು ಕನ್ನಡದ ಆಸ್ಮಿತೆಯಾಗಿ ಗುರುತಿಸಿಕೊಂಡಿದ್ದರು ಚಿತ್ರರಂಗದಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡುತ್ತಾ ಆಡುಮುಟ್ಟದ ಸೊಪ್ಪಿಲ್ಲ ಡಾಕ್ಟರ್ ರಾಜ್ ಅಭಿನಯಿಸಿದ ಪಾತ್ರವಿಲ್ಲ ಎಂಬಂತೆ ಇಡೀ ಕನ್ನಡ ಚಿತ್ರರಂಗಕ್ಕೆ ಒಂದು ಮಹಾ ವಿಶ್ವವಿದ್ಯಾಲಯವಾಗಿದ್ದರು  ಎಂದರು.
 ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಾಗರ್ ಅಪ್ಪು ಜಿಲ್ಲಾಧ್ಯಕ್ಷರು, ತಾಲೂಕ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಹಲವಾರು ಜನ ಸದಸ್ಯರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಂಚಮಸಾಲಿ ಮಠದಲ್ಲಿ ಯಾವುದೇ ಸಭೆ, ಸಮಾರಂಭ ನಡೆಸುವಂತಿಲ್ಲ; ಬಿಎನ್​​ಎಸ್ 163 ಅಡಿ ನೋಟಿಸ್​ ಜಾರಿ ಅತ್ತೆಗೆ ಚಾಕು ಇರಿದ ಅಳಿಯಸಿಗ್ನಲ್ ಗಳಲ್ಲಿ ನೆರಳು ಛಾವಣಿ: ಸಾರ್ವಜನಿಕರ ಮೆಚ್ಚುಗೆ  ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಆರ್ಥಿಕ ನೆರವುಮಹಾತ್ಮ ಗಾಂಧಿ ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಸೂಚನೆಗರ್ಭಿಣಿಯರ ಆರೈಕೆ, ಸುರಕ್ಷೆತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಸೂಚನೆಪಂಚರಾಜ್ಯ ಫಲಿತಾಂಶ ಹಿನ್ನೆಲೆ ಸಿರುಗುಪ್ಪದಲ್ಲಿ ಬಿಜೆಪಿ ಸಂಭ್ರಮಾಚರಣೆರೈಲ್ವೆ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಬೆಂಬಲಜಮಖಂಡಿಯಲ್ಲಿ ಕಾಂಗ್ರೆಸ್‌ ವಿಜಯೋತ್ಸವ; ಜನಪರ ಆಡಳಿತಕ್ಕೆ ಮನ್ನಣೆ - ಆನಂದ ನ್ಯಾಮಗೌಡಜಮಖಂಡಿಯಲ್ಲಿ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ- ಶಾಸಕ ಜಗದೀಶ ಗುಡಗುಂಟಿ