ಬೆಟಗೇರಿ, ಮೇ, ೧೪ : ಬರುವ ಅಧಿಕ ಮಾಸದ ನಿಮಿತ್ಯ ಹುಚ್ಚನಗೌಡ್ರ ಓಣಿಯಲ್ಲಿ ನೆಲೆನಿಂತ ಶ್ರೀ ಬಚ್ಚಲಕಮ್ಮ ದೇವಸ್ಥಾನದಲ್ಲಿ ಅಧಿ ಶಕ್ತಿ ಬಚ್ಚಲಕಮ್ಮ ದೇವಿಯ ಸನ್ನಿಧಾನದಲ್ಲಿ ೧೭.೫.೨೦೨೬ ರಂದು ರವಿವಾರದಿಂದ ೬.೬.೨೦೨೬ ಶನಿವಾರದ ವರೆಗೆ ಶ್ರೀ ಜ್ಞಾನೇರ್ಶವರ ಮೌಲಿಯವರಿಂದ ರಚಿಸಲ್ಪಟ್ಟ ಶ್ರೀ ಸಾರ್ಥ ಜ್ಞಾನೇಶ್ವರ ಸಂಪೂರ್ಣ ಗ್ರಂಥವನ್ನು ಕನ್ನಡದಲ್ಲಿ ಪಾರಾಯಣ ಮಾಡಲು ರಾಮಕೃಷ್ಣ ಕಲ್ಯಾಣಿ ಗುರುಗಳ ನೇತೃತ್ವದಲ್ಲಿ ಸತತ ೨೧ ದಿನಗಳ ಪರ್ಯಂಗ ಪಾರಾಯಣವು ಪ್ರತಿನಿತ್ಯ ಮುಂಜಾನೆ ೭ ಗಂಟೆಗೆ ಪ್ರಾರಂಭವಾಗಿ ೯ ಗಂಟೆಗೆ ಪೂರ್ನಗೊಳ್ಳಲಿದೆ ಅಧಿಕ ಮಾಸದಲ್ಲಿ ನಡೆಯುವ ಈ ಸಾಮೂಹಿಕ ಪಾರಾಯಣ ಮಾಡುವದರ ಮೂಲಕ ಭಕ್ತಾಧಿಗಳಿಗೆ ಅಧಿಕ ಮಾಸದ ಪುಣ್ಯ ಪ್ರಾಪ್ತಿಯಾಗಲಿ ಎಂಬ ಆಶಯದಿಂದ ಈ ಸಾಮೂಹಿಕ ಪರಾಯಣವನ್ನು ಬೆಟಗೇರಿಯ ಸದ್ಭಕ್ತರು ಹಾಗೂ ಸಂತ ಮಂಡಳಿಯವರು ಹಮ್ಮಿಕೊಂಡಿದ್ದು ಸರ್ವರಿಗೂ ಸ್ವಾಗತ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶ್ರೀರಾಮಕೃಷ್ಣಪ್ಪ ಕಲ್ಯಾಣಿ ಗುರುಗಳು,೯೬೮೬೦೬೮೭೦೬, ಶ್ರೀ ವಿಷ್ಣು ಕೋಕಲೆ ೯೬೮೬೫೬೩೬೭೯, ಶ್ರೀಲಕ್ಷ್ಮೀಕಾಂತ ಕಬಾಡಿ ೯೯೧೬೮೪೪೧೩೫, ಶ್ರೀ ಷಣ್ಮುಖ ಕೋಪರ್ಡೆ ೯೦೩೫೫೨೬೬೮೫, ಶ್ರೀ ಶಂಕ್ರಪ್ಪ ಗಾರ್ಗಿ ೯೫೩೫೦೨೨೯೨೮ ಸಂಪರ್ಕಿಸಲು ಕೋರಲಾಗಿದೆ.
