ಧಾರವಾಡ: ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆ ಧಾರವಾಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಧಾರವಾಡದ ವಿವೇಕಾನಂದ ವೃತ್ತದಲ್ಲಿ ಡಿಕೆಶಿ ಅವರ ಭಾವಚಿತ್ರ ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಡಿ.ಕೆ.ಶಿವಕುಮಾರ್ ಅವರು ಒಳ್ಳೆಯ ಆಡಳಿತಗಾರರಾಗಿದ್ದು, ಅವರ ಅವಧಿಯಲ್ಲಿ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡರಾದ ರಾಬರ್ಟ್ ದದ್ದಾಪುರಿ ನೇತೃತ್ವದಲ್ಲಿ ನಡೆದ ಈ ಸಂಭ್ರಮಾಚರಣೆಯಲ್ಲಿ ಕಾಂಗ್ರೆಸ್ನ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ಧಾರವಾಡ ನಗರದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಂಭ್ರಮ ಎಲ್ಲೆ ಮೀರಿತ್ತು ಕೆಪಿಸಿಸಿ ಅಧ್ಯಕ್ಷ ರಾದ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರರವರು ಬೆಂಗಳೂರಿನ ವಿಧಾನಸೌಧದ ಸಿಎಲ್ಪಿ ಲೀಡರ ಆಗಿ ಆಯ್ಕೆಯಾಗುತ್ತಿದ್ದಂತೆ ಧಾರವಾಡ ನಗರದಲ್ಲಿ ರಾಬರ್ಟ ದದ್ದಾಪುರಿ ಪ್ರಧಾನ ಕಾರ್ಯದರ್ಶಿಗಳು ಕೆಪಿಸಿಸಿ ಅವರ ನೇತೃತ್ವದಲ್ಲಿ ಸಂಭ್ರಮಾಚರಣೆಯು ಮುಗಿಲು ಮುಟ್ಟಿತು. ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.
ರಾಬರ್ಟ ದದ್ದಾಪುರಿಯವರು ಮಾತನಾಡಿ ಡಿ.ಕೆ. ಶಿವಕುಮಾರವರು ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದರಿಂದ ಸಮಸ್ತ ಕಾರ್ಯಕರ್ತರಿಗೆ ಆತ್ಮವಿಶ್ವಾಸ ಮೂಡಿಸಿದೆ. ಕಾರ್ಯಕರ್ತರೇ ಪಕ್ಷದ ಬುನಾದಿ ಎಂದು ಹೇಳುತ್ತಿದ್ದರು. ಡಿ ಕೆ ಶಿವಕುಮಾರವರು ಮುಖ್ಯಮಂತ್ರಿ ಹುದ್ದೆಗೆ ಏರುತ್ತಿರುವುದು ಕಾರ್ಯಕರ್ತರಲ್ಲಿ ಅತೀವ ವಿಶ್ವಾಸ ಮೂಡಿದೆ ಎಂದು ಹೇಳಿದರು. ಎಲ್ಲಾ ಕಾರ್ಯಕರ್ತರನ್ನು ಶ್ರೀ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಹಾಜರಾಗಲು ಆಹ್ವಾನಿಸಿದರು.
. ಈ ಸಂಭ್ರಮಾಚರಣೆಯಲ್ಲಿ ಆನಂದ ಜಾಧವ, ಜೇಮ್ಸ್ ಯಾಮಾ, ಬಿಎಚ್. ಪೂಜಾರ, ನಾಗರಾಜ ಗುರಿಕಾರ, ಬಾಬಾ ಶೇಖ್ ಸನದಿ, ಆನಂದ ಮುಶಣ್ಣವರ, ಈಶ್ವರ ಹಿರೇಮಠ, ಗೀತಾ ಥಾಂಶಿ, ಗೌರಮ ಬಲೋಗಿ, ಸುಮಾ ಮಿನಗನವರ, ಲಕ್ಷ್ಮಿ ಗುತ್ತೆ, ಖಅಶಿಂ ಖೋಡಿಹಾಳ, ಪ್ರಕಾಶ ಹಳಿಯಾಳ, ಸುರಜ ಗೌಳಿ,ಶಾಮ್ ಮಲ್ಲನಗೌಡರ, ಮಹೇಶ ಹುಳೆಣ್ಣವರ, ಮಂಜು ಭೋವಿ, ಸುಂಕದ, ಜನಾಬ ಖಾದ್ರಿ, ಸತೀಶ ಗಿರೇಣ್ಣವರ, ಮಧುಕೇಶ್ವರ ಮಾದರ, ನಾರಾಯಣ ಮಾದರ, ಹನುಮಂತ ಮೊರಬ, ಮುಂತಾದವರು ಭಾಗವಹಿಸಿದ್ದರು.