ಬಳ್ಳಾರಿ, ಮೇ.09:. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ವತಿಯಿಂದ ಗುರುವಾರ ನಗರದಲ್ಲಿನ ಬೀದಿ ಬದಿ ವ್ಯಾಪಾರಸ್ಥರಿಗೆ ಬೃಹತ್ ಕೊಡೆಗಳ ವಿತರಣೆ ಮಾಡಲಾಯಿತು.
ನಗರದ ಗಡಿಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆಯ ಎರಡೂ ಬದಿ ಹಾಗೂ ದೊಡ್ಡ ಮಾರುಕಟ್ಟೆ ಬಳಿಯ ಬೀದಿ ಬದಿ ವ್ಯಾಪಾರಸ್ಥರಿಗೆ ಬೃಹತ್ ಕೊಡೆಗಳನ್ನು ವಿತರಿಸಲಾಯಿತು.
ಕಳೆದ ಮೂರು ದಿನಗಳಿಂದ ಕೊಡೆಗಳ ವಿತರಣೆ ನಡೆಯುತ್ತಿದ್ದು, ಮೂರನೆ ದಿನವಾದ ಗುರುವಾರವೂ ವಿತರಣೆ ನಡೆಯಿತು.
ಕೊಡೆಗಳ ವಿತರಣೆಗೆ ಸಂಬಂಧಿಸಿ ಹರ್ಷ ವ್ಯಕ್ತಪಡಿಸಿರುವ ಬೀದಿ ಬದಿ ವ್ಯಾಪಾರಸ್ಥರು "ಶಾಸಕರು ನೀಡಿರುವ ಕೊಡೆಗಳಿಂದ ಬಿಸಿಲಿನಿಂದ ರಕ್ಷಣೆ ಸಿಕ್ಕಿದ್ದು, ವ್ಯಾಪಾರ ವಹಿವಾಟಿಗೆ ಅನುಕೂಲ ಆಗಿದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಥಿಯೇಟರ್ ಶಿವು, ದುರ್ಗಾಮೋಹನ್, ಟಿಲ್ಲು, ಬೆಣಕಲ್ ರಘು, ಕಪ್ಪೆ ಶಿವು, ಸೆವೆನ್ ಹಿಲ್ಸ್ ರಘು, ಗೌತಮ್, ಧರ್ಮಶ್ರೀ, ಭಾಸ್ಕರ್ ರೆಡ್ಡಿ, ಟಿ.ಹೆಚ್.ಸೀನಾ, ರಘು, ಬುಜ್ಜಿ, ಹನಮಂತು, ರಸೂಲ್, ಪ್ರದೀಪ್, ಶ್ರೀಕಾಂತ್, ಸುನೀಲ್, ಶಶಿ ಸೇರಿದಂತೆ ಮತ್ತಿತರರು ಹಾಜರಿದ್ದು ಕೊಡೆಗಳನ್ನು ವಿತರಿಸಿದರು.
