ಜಮಖಂಡಿ; ತಾಲುಕಿನ ಹುನ್ನೂರು ಗ್ರಾಮದ ಗಾಂಧಿನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಧರ್ಮನಾಥ ಜೈನ್ ಸೇವಾ ಮಂಡಳಿಯ ವತಿಯಿಂದ ನೋಟ್ ಪುಸ್ತಕ, ಬ್ಯಾಗ್ ಊಟದ ತಟ್ಟೆ, ಆಹಾರದ ಕಿಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು, ಬಡ ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದೇ ಶಾಲೆಯಲ್ಲಿ ಓದುತ್ತಿದ್ದು ಅವರ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುವ ದೃಷ್ಠಿಯಂದ ಪಠ್ಯ ಪರಿಕರಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೇವಾ ಮಂಡಲಿ ಅಧ್ಯಕ್ಷ ಮಹಾವೀರ ಬಂಡಾರಿ ತಿಳಿಸಿದರು, ಸಾಮಾಜಿಕ ಹೋರಾಟಗಾರ ಉಮೇಶ ಆಲಮೇಲ್ಕರ ಮಾತನಾಡಿ ಜೈನ ಸೇವಾ ಮಂಡಲಿಯ ಕಾರ್ಯ ಶ್ಲಾಘನೀಯವಾಗಿದೆ ಎಂದು ತಿಳಿಸಿದರು. ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು ಸೇರಿದಂತೆ ಮುಖಂಡರಾದ ನೀತಿನ ಓಸ್ವಾಲ. ವಿಕ್ಕಿ ಜೈನ ವಿಶ್ವಾಲ ಓಸ್ವಾಲ, ಮಯೂರ ಓಸ್ವಾಲ, ಸಂತೋಷ ಬಂಡಾರಿ ಗೌತಮ ಓಸ್ವಾಲ ಕುನಾಲ ಜೈನ, ರಾಜು ಗಾಂಧಿ, ಭರತ ಓಸ್ವಾಲ, ನರೇಶ ಬಂಡಾರಿ ನರೇಶ ಓಸ್ವಾಲ ಸೇರಿದಂತೆ ಸೇವಾ ಮಂಡಳಿಯ ಅನೇಕ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.