Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಸವ ಜಯಂತಿ ನಿಮಿತ್ತ ಏ.10 ರಿಂದ ಪ್ರತಿ ದಿನ ಪ್ರವಚನ


ಬಳ್ಳಾರಿ, ಏ.04.:  ನಗರದಲ್ಲಿ ಏ.20 ರಂದು ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಕುರಿತು ಪೂರ್ವ ಭಾವಿ ಸಭೆ ನಗರದ ರಾಷ್ಟ್ರೀಯ ಬಸವದಳದ ಸಭಾಂಗಣದಲ್ಲಿ ನಿನ್ನೆ ಸಂಜೆ ನಡೆಯಿತು.

ಬಸವ ಜಯಂತಿಯನ್ನು ನಗರದಲ್ಲಿ ಈ ಮೊದಲು ಶರಣ ಸಕ್ಕರೆ ಕರಡೀಶ ಚೌಕಿಯಲ್ಲಿ  ವೀರಶೈವ ಯುವಕ ಸಂಘ ದಿಂದ ಆಚರಿಸುತ್ತಾ ಬಂದಿತ್ತು. 1988 ರಿಂದ  ರಾಷ್ಟ್ರೀಯ ಬಸವ ದಳ ಮಾಡುತ್ತಾ ಬಂದಿದೆ.

ಈ ವರ್ಷ ಏ.10 ರಿಂದ ಬಸವ ಜಯಂತಿ ವರೆಗೆ ಪ್ರತಿದಿನ ಸಂಜೆ ಇಲ್ಲಿ ಪ್ರವಚನ ಮಾಡಲಿದೆ. ಜೊತೆಗೆ ಆರೋಗ್ಯ ತಪಾಸಣಾ ಶಿಬಿರ ಮೊದಲಾದ ಸಾಮಜ ಸೇವಾ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಿದೆಂದು  ಸಭೆಗೆ ರವಿಶಂಕರ್ ಅವರು ತಿಳಿಸಿದರು.

ಏ.19 ರಂದು ಸಮಾಜದವರೆಲ್ಲ ಬಸವ ದಳದಲ್ಲಿ ಸೇರಿ ಕಾರ್ಯಕ್ರಮದ ಮೂಲಕ ಪ್ರಸಾದ ವ್ಯವಸ್ಥೆ ಮಾಡುವ ಚಿಂತನೆ ಇದೆಂದರು.

ಸಭೆಯಲ್ಲಿ ವೀರೇಶ್ ಗಂಗಾವತಿ ಅವರು ಮಾತನಾಡಿ,ಅಲ್ಲಂ ಪ್ರಶಾಂತ್ ಅವರು ಪ್ರಸಾದ ವ್ಯವಸ್ಥೆ ಮಾಡಲಿದ್ದಾರೆ.ನಗರದ ಸಂಗನಕಲ್ಲು ರಸ್ತೆಯ ಕೆಇಬಿ ಸರ್ಕಲ್ ಗೆ ಬಸವೇಶ್ವರ ಸರ್ಕಲ್  ಎಂದು ಕಳೆದ ವರ್ಷ ಪೂಜೆ ಮಾಡಿ ನಾಮಕರಣ ಮಾಡಲಾಗಿತ್ತು. ಅಂದು ಪಾಲ್ಗೊಂಡಿದ್ದ ನಮ್ಮ ಜನ ಪ್ರತಿನಿಧಿಗಳು ಇಲ್ಲಿ ಒಂದು ವರೆ ಕೋಟಿ ರೂ ವೆಚ್ಚದಲ್ಲಿ ಅಶ್ವಾರೂಡ ಬಸವೇಶ್ವರ ಪುತ್ಥಳಿ ಸ್ಥಾಪಿಸಲಿದೆಂದು ಹೇಳಿದ್ದರು.  ಆದರೆ ಈ ವರೆಗೆ ಆಗಲಿಲ್ಲ. ದಾನಿಗಳು ಬಸವ ಪುತ್ಥಳಿ ಮಾಡಲು ಎರೆಡು ಲಕ್ಷ ರೂ ನೀಡಿದ್ದಾರೆ. ಸರ್ಕಾರದಿಂದ ಆಗದಿದ್ದರೆ ಸಮಾಜದಿಂದಲೇ ಮಾಡಲು ಮುಂದಾಗಬೇಕೆಂಬ ಅಭಿಪ್ರಾಯ ತಿಳಿಸಿದರು.

ಕೇಣಿ ಬಸಪ್ಪ ಅವರು ಮಾತನಾಡಿ, ಬಸವ ಜಯಂತಿ ಸಮಾರಂಭದ ಪ್ರಸಾದ ವ್ಯವಸ್ಥೆಗೆ 50 ಸಾವಿರ ರೂ ದೇಣಿಗೆ ನೀಡುವುದಾಗಿ ಹೇಳಿದರು.

ಹತ್ತು ದಿನಗಳ ಕಾಲ ನಗರದ ಹಲವುಕಡೆ ಭಾವಚಿತ್ರದೊಂದಿಗೆ ತೆರಳಿ ಬಸವ ಜಯಂತಿಯ ಆಚರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕುರಿತು ಸಹ ಚರ್ಚೆ ನಡೆಯಿತು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ