ನೇಸರಗಿ., ಸಾರ್ವಜನಿಕರು ಸರ್ಕಾರವು ದೇವಸ್ಥಾನಗಳ ಅಭಿವೃದ್ಧಿಗೆ ನೀಡುವ ಅನುಧಾನದ ಜೊತೆಗೆ ಸಾರ್ವಜನಿಕರು ಕೈಜೋಡಿಸಿ ತನು, ಮನ, ಧನದ ಸಹಾಯದೊಂದಿಗೆ ದೇವಸ್ಥಾನದ ಅಭಿವೃದ್ಧಿಗೆ ಕೈಜೋಡಿಸಿ ದೇವಸ್ಥಾನಗಳ ಪುನಃಸಚೇತನಕ್ಕೆ ಪಾತ್ರರಾಗಬೇಕೆಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಬುಧವಾರದಂದು ಸಮೀಪದ ದೇಶನೂರ ಗ್ರಾಮದಲ್ಲಿ 7 ಲಕ್ಷ 51 ಸಾವಿರ ರೂಪಾಯಿಗಳ ಅನುಧಾನದಲ್ಲಿ ಶ್ರೀ ಗಣೇಶ ದೇವಸ್ಥಾನದ ಹತ್ತಿರ ಗಜಾನನ ಸೇವಾ ಮಂಡಲ ಟ್ರಸ್ಟ್ ಇದರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ 10 ಲಕ್ಷ ರೂಪಾಯಿಗಳ ಅನುಧಾನದಲ್ಲಿ ಕಲ್ಯಾಣ ಮಂಟಪ ಕಾಮಗಾರಿಗೆ ಭೂಮಿ ಪೂಜೆ, ಶಾಸಕ ಬಾಬಾಸಾಹೇಬ ಪಾಟೀಲ ಅನುಧಾನದ ನೂತನ ಬಸ್ ನಿಲ್ದಾಣ ಉದ್ಘಾಟನೆ, ಅಲ್ಪಸಂಖ್ಯಾತರ ಕಲ್ಯಾಣ ನಿಧಿ ಅನುಧಾನದಲ್ಲಿ ನೂತನ ವಾಹನ ವಿತರಣೆ ನೆರವೇರಿಸಿ ಮಾತನಾಡಿ ದೇವಸ್ಥಾನ, ರಸ್ತೆ, ಶಾಲೆ, ಕಾಲುಜು, ನೀರು, ಚರಂಡಿ, ಇನ್ನಿತರ ಕೆಲಸಗಳನ್ನು ಮಾಡುತ್ತಿದ್ದು, ಮುಂದೆಯೂ ನಿರಂತರವಾಗಿ ಕ್ಷೇತ್ರದ ಕೆಲಸ ಮಾಡಿ ಅಭಿವೃದ್ಧಿಗೆ ಶ್ರಮಿಸಿತ್ತೇನೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ದೀಪಕ ಪಾಟೀಲ,ಸಚಿನ ಪಾಟೀಲ,ಶಿವನಗೌಡ ಪಾಟೀಲ, ಅಣ್ಣಪ್ಪ ಕಡಕೋಳ, ಹಿರಿಯರಾದ ಡಾ. ಮಲ್ಲಿಕಾರ್ಜುನ ಹರಕುಣಿ, ಮೋಹನ್ ಹಜೇರಿ, ಶಿವಾನಂದ ಪಟ್ಟಣಶೆಟ್ಟಿ, ಅಣ್ಣಪ್ಪ ಶೆಟ್ಟರ, ನಾಗಪ್ಪ ಬಾಗಲಕೋಟ,ಕಾಶೀನಾಥ ಹಿರೇಮಠ,ಅಬ್ಬಾಸ ಪೀರಜಾದೆ, ಶಾನ್ ರಾಮಣ್ಣವರ, ಸದೆಪ್ಪಾ ಕಡಕೋಳ, ಅಣ್ಣಪ್ಪ ಕಡಕೋಳ, ಕಮಿತಿ ಸದಸ್ಯರಾದ ಪ್ರಕಾಶ ಮುಂಗರವಾಡಿ,ಚೇತನ ಪಟ್ಟಣಶೆಟ್ಟಿ, ಆಜೀತ ಗಾಣಗಿ, ಮಹಾರುದ್ರ ಹರಕುಣಿ, ವಿನೋದ್ ಉಪ್ಪಿನ, ಅರುಣ ಕಬ್ಬುರ, ಬಸವರಾಜ ಗುರವಣ್ಣವರ, ಪೇಟೆ ಪ್ರಮುಖರಾದ ಆನಂದ ಭಾವಿಕಟ್ಟಿ,ಬಸವರಾಜ ಭಾವಿಕಟ್ಟಿ, ಬಸವರಾಜ್ ಶೆಟ್ಟರ, ಮಲ್ಲಪ್ಪ ಕೆದಾರಿ, ಬಾಂವೆಪ್ಪ ಕೊತ್ತಲ, ವೀರಣ್ಣ ಹರಕುಣಿ, ಮಲ್ಲಿಕಾರ್ಜುನ ಮುಂಗರವಾಡಿ, ಚಂದ್ರು ಹರಕುಣಿ, ಮಂಜುನಾಥ ಹುಲಮನಿ,ಅಯೂಬ್ ಗಣಾಚಾರಿ, ಕಲ್ಲಪ್ಪ ತಿಳಗಂಜಿ, ಮಲ್ಲಿಕಾರ್ಜುನ ಕಲ್ಲೋಳಿ, ಅರುಣಾ ಮುಂಗರವಾಡಿ, ದಾನಮ್ಮ ಹರಕುಣಿ, ಸೇರಿದಂತೆ ದೇಶನೂರ ಗ್ರಾಮದ ಹಿರಿಯರು,ಮುಖಂಡರು,ಪೇಟೆ ಓಣಿ ಹುಡುಗರು, ಮಹಿಳೆಯರು ಇದ್ದರು.