ಶಿಕ್ಷಣ ಜೊತೆಗೆ ಕೌಶಲ್ಯ ರೂಡಿಸಿಕೊಳ್ಳಿ: ಪ್ರೊ ಪ್ರವೀಣ ಅವರಾದಿ
ರನ್ನ ಬೆಳಗಲಿ:ಏ.೦೧., ಪಟ್ಟಣದ ಸರಕಾರಿ ಪ್ರೌಢ ಶಾಲೆ ಮತ್ತು ಪಿಎಂ ಶ್ರೀ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಜನತಾ ಪ್ಲಾಟ್ ಆಶ್ರಯದಲ್ಲಿ ಬುಧವಾರ ದಂದು ಶಾಲಾ ಆವರಣದಲ್ಲಿ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು ಯೋಜನೆಯ ಅಡಿಯಲ್ಲಿ ಆಟೋಮೊಬೈಲ್ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರೊ. ಪ್ರವೀಣ ಅವರಾದಿ ಕೆಎ??? ಪಾಲಿಟೆಕ್ನಿಕ್ ಮಹಾಲಿಂಗಪುರ ಅವರು ಶಿಕ್ಷಣ ಜೊತೆಗೆ ಕೌಶಲ್ಯ ರೂಡಿಸಿಕೊಳ್ಳಿ, ಪ್ರಸ್ತುತ ದಿನಗಳಲ್ಲಿ ತಾಂತ್ರಿಕ ಜ್ಞಾನ ವಿಜ್ಞಾನ ತುಂಬಾ ಬೆಳೆಯುತ್ತಿದೆ. ಸ್ಪರ್ಧಾತ್ಮಕ ಯುಗಕ್ಕೆ ಗಟ್ಟಿಗೊಳ್ಳಬೇಕಾದರೆ ಕೌಶಲ್ಯಗಳನ್ನು ರೂಡಿಸಿಕೊಂಡು ಅಭಿವೃದ್ಧಿಪಡಿಸಿಕೊಳ್ಳುವ ಮಾರ್ಗವನ್ನು ನಾವೇ ಹುಡುಕಿಕೊಳ್ಳಬೇಕು. ಎಸ್ ಎಸ್ ಎಲ್ ಸಿ ನಂತರ ಮುಂದೇನು ಎಂಬ ಪ್ರಶ್ನೆಗೆ ಪಾಲಕ ಪೋ?ಕರು ಗೊಂದಲಕ್ಕೆ ಒಳಗಾಗಿದ್ದಾರೆ. ವಿದ್ಯಾರ್ಥಿಗಳ ಅಭಿವೃದ್ಧಿ ಆಸಕ್ತಿ ಕಲಿಕೆಗೆ ಪ್ರೇರಣೆ ನೀಡುತ್ತದೆ ಆ ದಿಶೆಯಲ್ಲಿ ಆಟೋಮೊಬೈಲ್ ಒಂದು ಕೌಶಲ್ಯ ಕಲಿಕೆಯಾಗಿದೆ ಸ್ವಯಂ ಉದ್ಯೋಗ ಮಾಡುವುದರ ಜೊತೆಗೆ ನಮ್ಮ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂಬ ವಿಚಾರವನ್ನು ತಿಳಿಸುವುದರ ಜೊತೆಗೆ ಆಟೋಮೊಬೈಲ್ ಬಗ್ಗೆ ಮಾಹಿತಿಯನ್ನು ನೀಡಿದರು.
ಅಧ್ಯಕ್ಷತೆ ವಹಿಸಿದ ಎಸ್ ಎಸ್ ಉದಪುಡಿ ಮುಖ್ಯೋಪಾಧ್ಯಾಯನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳು ಕಾರ್ಯಾಗಾರದ ಅನುಕೂಲತೆಯನ್ನು ಪಡೆಯಬೇಕೆಂದು ಕೋರಿದರು.
ಆರ್ ಎಸ್ ಹಗಳಗಾರ ಪಿಎಂಶ್ರೀ ಶಾಲೆಯ ಮುಖ್ಯೋಪಾಧ್ಯಾಯನಿ, ಚಿತ್ರಕಲಾ ಶಿಕ್ಷಕ ಬಿ ಪಿ ಚೋಪ್ಡೆ ಕಾರ್ಯಕ್ರಮದ ಕುರಿತು ಮಾತನಾಡಿದರು.
ಶಿಕ್ಷಕರಾದ ಆರ್ ವಾಯ್ ನಾರೋಗೋಳ,ಜಿ ವಾಯ್ ಭಜಂತ್ರಿ, ಎಸ್ ಎಸ್ ಕಾಯಿ ಮತ್ತು ವಿದ್ಯಾರ್ಥಿಗಳು,ಪಾಲಕ- ಪೋ?ಕರು ಇನ್ನಿತರರು ಉಪಸ್ಥಿತರಿದ್ದರು.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.