ನೇಸರಗಿ . ಬೈಲಹೊಂಗಲ ತಾಲೂಕಿನ ಬಹುದಿನಗಳ ನೀರಾವರಿ ಯೋಜನೆಯ ಕನಸು 2005 ರಲ್ಲಿ ಪ್ರಾರಂಭವಾದರೂ ಇನ್ನೂ ಆ ಏತ್ ನೀರಾವರಿ ಯೋಜನೆ ಕನಸು ನನಸಲ್ಲ ಇನ್ನೂವರೆಗೂ ಕನಸಾಗಿ ಉಳಿದಿದ್ದು, ಶಿರೂರ ದ್ಯಾಮನಿಂದ ನೀರು ಹರಿಸುವ ಯೋಜನೆ ಕೇವಲ ಯೋಜನೆಯಾಗಿಯೇ ಉಳಿದಿದ್ದು, ಈ ಮಹತ್ವಕಾಂಕ್ಷೆಯ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ಹಸಿರು ಸ್ರೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಗೋಕಾಕ ನಗರದ ಕಾರ್ಯನಿರ್ವಾಹಕ ಅಭಿಯಂತರರು, ಕರ್ನಾಟಕ ನೀರಾವರಿ ನಿಗಮದ ಕಾರ್ಯಾಲಯಕ್ಕೆ ಬೇಟಿ ನೀಡಿ ಮನವಿ ಸಲ್ಲಿಸಿದರು.
ಈ ಯೋಜನೆಯಿಂದ ಸುಮಾರು 40 ಹಳ್ಳಿಗಳಿಗೆ ನೀರಿನ ಭವನೆ ತಪ್ಪಿಸುವ ಉದ್ದೇಶದಿಂದ ಪ್ರಾರಂಭವಾದ ಕಾಮಗಾರಿ ಅಲ್ಲಿ, ಇಲ್ಲಿ ಅಲ್ಪ ಸ್ವಲ್ಪ್ ಕೆಲಸ ಮಾಡಿ ನೀರಾವರಿ ಕಾಮಗಾರಿ ಕಾರ್ಯ ಇದಕ್ಕೆ ಜನಪ್ರತಿನಿದಿಗಳ ಹಾಗೂ ಅಧಿಕಾರಿಗಳ ವರ್ತನೆಯಿಂದ ಕುಂಟಿತವಾಗಿ ಸಾಗಿದ್ದು ಆದಷ್ಟು ಬೇಗ ಕಾಮಗಾರಿ ಮುಗಿಸಿ ಈ ಭಾಗದ ರೈತರ, ದನಕರುಗಳ ಕುಡಿಯುವ ನೀರಿಗೆ, ಕುಡಿಯುವ ನೀರಿನ ಅಭಾವ ತಪ್ಪಿಸಲು ಕ್ರಮ ತೆಗೆದುಕೊಳ್ಳಲು ರೈತರು ಅಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬಸವರಾಜ ಹೊಸಮನಿ,
ಸತ್ಯನಾಯಿಕ ನಾಯಿಕ,ಹುಸೇನಸಾಬ್ ಕಿಲ್ಲದಾರ,
ಸಿದ್ದಪ್ಪ ಹಣ್ಣಿಕೇರಿ,ಅಪ್ಪಣ್ಣ ಬಶೆಟ್ಟಿ,
ಶಿವಾನಂದ್ ಹೊಸಮನಿ,ಮಲ್ಲೇಶ ಚಿಕ್ಕೋಡಿ ,
ಯಲ್ಲಪ್ಪ ಚಿಕ್ಕೋಪ್ಪ,ಈರಪ್ಪ ಪರಿಟ್, ಹಾಗೂ ರೈತರು ಉಪಸ್ಥಿತರಿದ್ದರು.