ಸಿರಿಗೇರಿ ಮೇ.04:.. ಸಿರುಗುಪ್ಪ ತಾಲೂಕು ಸಿರಿಗೇರಿ ಹೋಬಳಿಯ ಕೊಂಚಗೇರಿ ಗ್ರಾಮದಲ್ಲಿ, ವಿಶೇಷ ಸಂದರ್ಭಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ಎರಡು ಕೈ ಪಂಪುಗಳ ವ್ಯವಸ್ಥೆ ಮಾಡಿಸಿಕೊಡಬೇಕೆಂದು ಜನರು ಆಗ್ರಹಪಡಿಸುತ್ತಿದ್ದಾರೆ. ದಿನನಿತ್ಯ ಕರೆಂಟ್ ನಿಂದ ನಡೆಯುವ ಬೋರ್ವೆಲ್ ಗಳಿಂದ ಬಳಕೆಯ ಮತ್ತು ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಕರೆಂಟ್ ಕೈ ಕೊಡುವ ಸಮಯದಲ್ಲಿ, ಬೋರ್ಗಳು ಕೆಟ್ಟು ಹೋದ ಸಂದರ್ಭದಲ್ಲಿ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ಕಳೆದವಾರ ಮಳೆ ಗಾಳಿಯಿಂದಾಗಿ ಅಲ್ಲಲ್ಲಿ ಮರಗಳು ವಿದ್ಯುತ್ ಕಂಬಗಳ ಲೈನ್ ಮೇಲೆ ಉರಳಿಬಿದ್ದ ಪರಿಣಾಮ, ಎರಡುಮೂರು ದಿನ ವಿದ್ಯುತ್ ಸಮಸ್ಯೆಯಾಗಿತ್ತು. ಇದರಿಂದ ಊರಲ್ಲಿ ನೀರಿನ ಸಮಸ್ಯೆ ತಲೆದೂರಿತ್ತು. ಅಲ್ಲದೆ ಆಗಾಗ ದಿನಗಟ್ಟಲೆ ಕರೆಂಟು ಹೋದಾಗ, ಬೋರುಗಳು ಕೆಟ್ಟು ಹೋದಾಗ ನೀರು ಬರದೆ ಸಮಸ್ಯೆಯಾಗುತ್ತದೆ. ಇದನ್ನು ತಪ್ಪಿಸಲು ಗ್ರಾಮದಲ್ಲಿ ಎರಡು ಮೂರು ಕೈ ಪಂಪುಗಳನ್ನು ಕೊರೆಸುವುದು ಅವಶ್ಯವಾಗಿದೆ. ಈ ಕುರಿತು ಗ್ರಾಮಾಡಳಿತದಿಂದ, ಗ್ರಾಮದಲ್ಲಿ ಅಗತ್ಯ ನೀರು ಪೂರೈಕೆಗೆ ಗಮನಹರಿಸಬೇಕು, ವಿಶೇಷ ಸಂಕಷ್ಟದ ಸಮಯದಲ್ಲಿ ನೀರಿನ ಕೊರತೆಯಾಗದಂತೆ ಎರಡು ಕೈಪಂಪು ಬೋರು ಕೊರಿಸಬೇಕೆಂದು ಕೊಂಚಗೇರಿ ಗ್ರಾಮಸ್ಥರು ಆಗ್ರಹಪಡಿಸುತ್ತಿದ್ದಾರೆ.