Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೊಂಚಿಗೇರಿಯಲ್ಲಿ ಕೈಪಂಪ್ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹ

 ಸಿರಿಗೇರಿ ಮೇ.04:.. ಸಿರುಗುಪ್ಪ ತಾಲೂಕು ಸಿರಿಗೇರಿ ಹೋಬಳಿಯ ಕೊಂಚಗೇರಿ ಗ್ರಾಮದಲ್ಲಿ, ವಿಶೇಷ ಸಂದರ್ಭಗಳಲ್ಲಿ  ಕುಡಿಯುವ ನೀರಿನ ವ್ಯವಸ್ಥೆಗಾಗಿ ಎರಡು ಕೈ ಪಂಪುಗಳ ವ್ಯವಸ್ಥೆ ಮಾಡಿಸಿಕೊಡಬೇಕೆಂದು ಜನರು ಆಗ್ರಹಪಡಿಸುತ್ತಿದ್ದಾರೆ. ದಿನನಿತ್ಯ ಕರೆಂಟ್ ನಿಂದ ನಡೆಯುವ ಬೋರ್ವೆಲ್ ಗಳಿಂದ ಬಳಕೆಯ ಮತ್ತು ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಕರೆಂಟ್ ಕೈ ಕೊಡುವ ಸಮಯದಲ್ಲಿ, ಬೋರ್ಗಳು ಕೆಟ್ಟು ಹೋದ ಸಂದರ್ಭದಲ್ಲಿ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ಕಳೆದವಾರ ಮಳೆ ಗಾಳಿಯಿಂದಾಗಿ ಅಲ್ಲಲ್ಲಿ ಮರಗಳು ವಿದ್ಯುತ್ ಕಂಬಗಳ ಲೈನ್ ಮೇಲೆ ಉರಳಿಬಿದ್ದ ಪರಿಣಾಮ, ಎರಡುಮೂರು ದಿನ ವಿದ್ಯುತ್ ಸಮಸ್ಯೆಯಾಗಿತ್ತು. ಇದರಿಂದ ಊರಲ್ಲಿ ನೀರಿನ ಸಮಸ್ಯೆ ತಲೆದೂರಿತ್ತು. ಅಲ್ಲದೆ ಆಗಾಗ ದಿನಗಟ್ಟಲೆ ಕರೆಂಟು ಹೋದಾಗ, ಬೋರುಗಳು ಕೆಟ್ಟು ಹೋದಾಗ ನೀರು ಬರದೆ  ಸಮಸ್ಯೆಯಾಗುತ್ತದೆ. ಇದನ್ನು ತಪ್ಪಿಸಲು ಗ್ರಾಮದಲ್ಲಿ ಎರಡು ಮೂರು ಕೈ ಪಂಪುಗಳನ್ನು ಕೊರೆಸುವುದು ಅವಶ್ಯವಾಗಿದೆ. ಈ ಕುರಿತು ಗ್ರಾಮಾಡಳಿತದಿಂದ, ಗ್ರಾಮದಲ್ಲಿ ಅಗತ್ಯ ನೀರು ಪೂರೈಕೆಗೆ ಗಮನಹರಿಸಬೇಕು, ವಿಶೇಷ ಸಂಕಷ್ಟದ ಸಮಯದಲ್ಲಿ ನೀರಿನ ಕೊರತೆಯಾಗದಂತೆ ಎರಡು ಕೈಪಂಪು ಬೋರು ಕೊರಿಸಬೇಕೆಂದು ಕೊಂಚಗೇರಿ ಗ್ರಾಮಸ್ಥರು ಆಗ್ರಹಪಡಿಸುತ್ತಿದ್ದಾರೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಂಚಮಸಾಲಿ ಮಠದಲ್ಲಿ ಯಾವುದೇ ಸಭೆ, ಸಮಾರಂಭ ನಡೆಸುವಂತಿಲ್ಲ; ಬಿಎನ್​​ಎಸ್ 163 ಅಡಿ ನೋಟಿಸ್​ ಜಾರಿ ಅತ್ತೆಗೆ ಚಾಕು ಇರಿದ ಅಳಿಯಸಿಗ್ನಲ್ ಗಳಲ್ಲಿ ನೆರಳು ಛಾವಣಿ: ಸಾರ್ವಜನಿಕರ ಮೆಚ್ಚುಗೆ  ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಆರ್ಥಿಕ ನೆರವುಮಹಾತ್ಮ ಗಾಂಧಿ ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಸೂಚನೆಗರ್ಭಿಣಿಯರ ಆರೈಕೆ, ಸುರಕ್ಷೆತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಸೂಚನೆಪಂಚರಾಜ್ಯ ಫಲಿತಾಂಶ ಹಿನ್ನೆಲೆ ಸಿರುಗುಪ್ಪದಲ್ಲಿ ಬಿಜೆಪಿ ಸಂಭ್ರಮಾಚರಣೆರೈಲ್ವೆ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಬೆಂಬಲಜಮಖಂಡಿಯಲ್ಲಿ ಕಾಂಗ್ರೆಸ್‌ ವಿಜಯೋತ್ಸವ; ಜನಪರ ಆಡಳಿತಕ್ಕೆ ಮನ್ನಣೆ - ಆನಂದ ನ್ಯಾಮಗೌಡಜಮಖಂಡಿಯಲ್ಲಿ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ- ಶಾಸಕ ಜಗದೀಶ ಗುಡಗುಂಟಿ