ಧಾರವಾಡ: ಹುಬ್ಬಳ್ಳಿಯ ಆಸಾರ ಓಣಿಯ ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಮುಚ್ಚಿ ರಸ್ತೆ ಮಾಡಲಾಗುತ್ತಿದೆ ಎಂದು ಆರೋಪಿಸಿ ದೇವಸ್ಥಾನದ ಉಳಿವಿಗಾಗಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ದೊಡ್ಡಮಟ್ಟದಲ್ಲೇ ಮೊನ್ನೆಯಷ್ಟೇ ಪ್ರತಿಭಟನೆ ಮಾಡಿದ್ದವು.
ಆದರೆ, ಆಸಾರ ಓಣಿಯ ರಸ್ತೆ ಕಾಮಗಾರಿಗೆ ಜಗದೀಶ ಶೆಟ್ಟರ್ ಹುಬ್ಬಳ್ಳಿ, ಧಾರವಾಡ ಕೇಂದ್ರ ಶಾಸಕರಿದ್ದಾಗಲೇ ಅನುದಾನ ಬಿಡುಗಡೆ ಮಾಡಿಸಿದ್ದಾರೆ ಎಂಬುದನ್ನು ಶಾಸಕ ಅರವಿಂದ ಬೆಲ್ಲದ ಅರಿತುಕೊಳ್ಳಬೇಕು ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ದೀಪಕ್ ಚಿಂಚೋರೆ ಇದೀಗ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ದೀಪಕ ಚಿಂಚೋರೆ, 2013ರಲ್ಲಿ ಜಗದೀಶ ಶೆಟ್ಟರ್ ಅವರು ಶಾಸಕರಿದ್ದಾಗ ಬಿಡುಗಡೆಯಾದ ಅನುದಾನದ ಬಗೆಗಿನ ದಾಖಲೆಗಳನ್ನು ಬಿಡುಗಡೆಗೊಳಿಸಿದರು. ಅವರದ್ದೇ ಶಾಸಕರಿದ್ದ ಸಂದರ್ಭದಲ್ಲಿ ಆಸಾರ ಓಣಿ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಆಗ ಯಾಕೆ ಶಾಸಕರಾದ ಬೆಲ್ಲದ ಹಾಗೂ ಟೆಂಗಿನಕಾಯಿ ಅವರು ಈ ಬಗ್ಗೆ ಧ್ವನಿ ಎತ್ತಲಿಲ್ಲ. ಧಾರವಾಡದಲ್ಲೂ ಕೇಂದ್ರ ಅರ್ಕಾಲಜಿ ಇಲಾಖೆಗೆ ಸೇರಿದ ಅನೇಕ ದೇವಸ್ಥಾನಗಳಿವೆ. ಧಾರವಾಡದ ಕಿಲ್ಲಾ ಭಾಗದಲ್ಲಿರುವ ಆಂಜನೇಯ ದೇವಸ್ಥಾನ ಇದೆ. ಅಮರಗೋಳದಲ್ಲಿ ಹಳೆಯ ಬನಶಂಕರಿ ದೇವಸ್ಥಾನ ಕೂಡ ಇದೆ ಅಲ್ಲಿಯೂ ರಸ್ತೆಗಳಾಗಿವೆ. ಇದರ ಬಗ್ಗೆ ಬೆಲ್ಲದ್ ಅವರು ಏಕೆ ಮಾತನಾಡುತ್ತಿಲ್ಲ. ಇವರು ಹುಬ್ಬಳ್ಳಿ, ಧಾರವಾಡ ಯುವಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಶೆಟ್ಟರ್ ಶಾಸಕರಿದ್ದಾಗ ಆ ಆಸಾರ ಓಣಿಯ ರಸ್ತೆ ಕಾಮಗಾರಿಗೆ 12.5 ಲಕ್ಷ ಅನುದಾನ ಬಿಡುಗಡೆ ಮಾಡಿದ್ದರು. ಪಾಂಡುರಂಗ ಪಾಟೀಲ ಅವರು ಮೇಯರ್ ಇದ್ದ ಸಂದರ್ಭದಲ್ಲೂ ಆ ರಸ್ತೆಗೆ 12.5 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದರು. ಇದರ ಬಗ್ಗೆ ಬೆಲ್ಲದ ಏಕೆ ಮಾತನಾಡುವುದಿಲ್ಲ. ಏನು ನೈತಿಕತೆ ಇಟ್ಟುಕೊಂಡು ಇವರು ಪುಷ್ಕರಣಿ ಮುಚ್ಚಲಾಗಿದೆ ಎಂದು ಹೋರಾಟ ಮಾಡುತ್ತಿದ್ದಾರೆ? ಅಲ್ಲದೇ ಧಾರವಾಡದ ತಮ್ಮ ಮನೆಯ ಹತ್ತಿರ ಇದ್ದ ಬಾವಿಯನ್ನೂ ಬೆಲ್ಲದ ಮುಚ್ಚಿದ್ದಾರೆ. ಆ ಬಾವಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀರು ಕುಡಿದಿದ್ದ ಇತಿಹಾಸ ಇದೆ. ಇದನ್ನು ಅವರು ಯಾಕೆ ಮುಚ್ಚಿದರು ಎಂಬುದನ್ನು ಮೊದಲು ಹೇಳಲಿ. ಬೆಲ್ಲದ ಮೊದಲು ತಾವು ಸುಧಾರಣೆಯಾಗಲಿ. ಜನರ ದಿಕ್ಕು ತಪ್ಪಿಸಿ ರಾಜಕಾರಣ ಮಾಡುವುದು ಬೇಡ ಎಂದು ಚಿಂಚೋರೆ ಹೇಳಿದರು.
ಆದರೆ, ಆಸಾರ ಓಣಿಯ ರಸ್ತೆ ಕಾಮಗಾರಿಗೆ ಜಗದೀಶ ಶೆಟ್ಟರ್ ಹುಬ್ಬಳ್ಳಿ, ಧಾರವಾಡ ಕೇಂದ್ರ ಶಾಸಕರಿದ್ದಾಗಲೇ ಅನುದಾನ ಬಿಡುಗಡೆ ಮಾಡಿಸಿದ್ದಾರೆ ಎಂಬುದನ್ನು ಶಾಸಕ ಅರವಿಂದ ಬೆಲ್ಲದ ಅರಿತುಕೊಳ್ಳಬೇಕು ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ದೀಪಕ್ ಚಿಂಚೋರೆ ಇದೀಗ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ದೀಪಕ ಚಿಂಚೋರೆ, 2013ರಲ್ಲಿ ಜಗದೀಶ ಶೆಟ್ಟರ್ ಅವರು ಶಾಸಕರಿದ್ದಾಗ ಬಿಡುಗಡೆಯಾದ ಅನುದಾನದ ಬಗೆಗಿನ ದಾಖಲೆಗಳನ್ನು ಬಿಡುಗಡೆಗೊಳಿಸಿದರು. ಅವರದ್ದೇ ಶಾಸಕರಿದ್ದ ಸಂದರ್ಭದಲ್ಲಿ ಆಸಾರ ಓಣಿ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಆಗ ಯಾಕೆ ಶಾಸಕರಾದ ಬೆಲ್ಲದ ಹಾಗೂ ಟೆಂಗಿನಕಾಯಿ ಅವರು ಈ ಬಗ್ಗೆ ಧ್ವನಿ ಎತ್ತಲಿಲ್ಲ. ಧಾರವಾಡದಲ್ಲೂ ಕೇಂದ್ರ ಅರ್ಕಾಲಜಿ ಇಲಾಖೆಗೆ ಸೇರಿದ ಅನೇಕ ದೇವಸ್ಥಾನಗಳಿವೆ. ಧಾರವಾಡದ ಕಿಲ್ಲಾ ಭಾಗದಲ್ಲಿರುವ ಆಂಜನೇಯ ದೇವಸ್ಥಾನ ಇದೆ. ಅಮರಗೋಳದಲ್ಲಿ ಹಳೆಯ ಬನಶಂಕರಿ ದೇವಸ್ಥಾನ ಕೂಡ ಇದೆ ಅಲ್ಲಿಯೂ ರಸ್ತೆಗಳಾಗಿವೆ. ಇದರ ಬಗ್ಗೆ ಬೆಲ್ಲದ್ ಅವರು ಏಕೆ ಮಾತನಾಡುತ್ತಿಲ್ಲ. ಇವರು ಹುಬ್ಬಳ್ಳಿ, ಧಾರವಾಡ ಯುವಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಶೆಟ್ಟರ್ ಶಾಸಕರಿದ್ದಾಗ ಆ ಆಸಾರ ಓಣಿಯ ರಸ್ತೆ ಕಾಮಗಾರಿಗೆ 12.5 ಲಕ್ಷ ಅನುದಾನ ಬಿಡುಗಡೆ ಮಾಡಿದ್ದರು. ಪಾಂಡುರಂಗ ಪಾಟೀಲ ಅವರು ಮೇಯರ್ ಇದ್ದ ಸಂದರ್ಭದಲ್ಲೂ ಆ ರಸ್ತೆಗೆ 12.5 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದರು. ಇದರ ಬಗ್ಗೆ ಬೆಲ್ಲದ ಏಕೆ ಮಾತನಾಡುವುದಿಲ್ಲ. ಏನು ನೈತಿಕತೆ ಇಟ್ಟುಕೊಂಡು ಇವರು ಪುಷ್ಕರಣಿ ಮುಚ್ಚಲಾಗಿದೆ ಎಂದು ಹೋರಾಟ ಮಾಡುತ್ತಿದ್ದಾರೆ? ಅಲ್ಲದೇ ಧಾರವಾಡದ ತಮ್ಮ ಮನೆಯ ಹತ್ತಿರ ಇದ್ದ ಬಾವಿಯನ್ನೂ ಬೆಲ್ಲದ ಮುಚ್ಚಿದ್ದಾರೆ. ಆ ಬಾವಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀರು ಕುಡಿದಿದ್ದ ಇತಿಹಾಸ ಇದೆ. ಇದನ್ನು ಅವರು ಯಾಕೆ ಮುಚ್ಚಿದರು ಎಂಬುದನ್ನು ಮೊದಲು ಹೇಳಲಿ. ಬೆಲ್ಲದ ಮೊದಲು ತಾವು ಸುಧಾರಣೆಯಾಗಲಿ. ಜನರ ದಿಕ್ಕು ತಪ್ಪಿಸಿ ರಾಜಕಾರಣ ಮಾಡುವುದು ಬೇಡ ಎಂದು ಚಿಂಚೋರೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ನ ಮುಖಂಡ ದೀಪಕ್ ಚಿಂಚೋರೆ.ನಾಗರಾಜ ಗುರಿಕಾರ .ಎಚ್ ಎಮ್ ರಾಜು. ಮೆಹಬೂಬ್ ಪಠಾಣ್.ಇತರರು ಉಪಸ್ಥಿತರಿದ್ದರು.