Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯಿಂದ ಪ್ರತಿರೋಧ ಚಳುವಳಿ ಗಟ್ಟಿಗೊಳಿಸಲು ನಿರ್ಧಾರ

ಬಳ್ಳಾರಿ,ಮೇ.೦6.: ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಹೆಸರಿನ ಬದಲಿಗೆ ಕೆಪಿಎಸ್ ಶಾಲೆ ಸ್ಥಾಪನೆ ಹೆಸರಿನ ಮೇಲೆ ಶಾಲೆಗಳ ವಿಲನಕ್ಕೆ ಮುಂದಾಗಿರುವುದರ ವಿರುದ್ಧ ಬಲಿಷ್ಠ ಚಳುವಳಿ ಬೆಳಸಲು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ, ಇಂದು ನಗರದಲ್ಲಿನ ಸಂಘದ ಕಚೇರಿಯಲ್ಲಿ ಎಲ್ಲಾ ಹಳ್ಳಿ ಸಮಿತಿಗಳ ನಾಯಕರು ಸೇರಿ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿತು.  
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಗೌರವ ಸಲಹೆಗಾರರಾದ ನಿವೃತ್ತ ಶಿಕ್ಷಕ ನರಸಣ್ಣ ಮಾತನಾಡುತ್ತಾ, ಹೆತ್ತ ತಾಯಿಯಂತೆ ಶಾಲೆಯು ಸಹ ನಮ್ಮ ತಾಯಿ ಇದ್ದಹಾಗೆ, ತಾಯಿ ಇಲ್ಲದೆ ಜನ್ಮವಿಲ್ಲ, ಶಾಲೆ ಇಲ್ಲದೆ ಜ್ಞಾನವಿಲ್ಲ, ಇಂತಹ ಜ್ಞಾನ ನೀಡುವ  ತಾಯಿಯ ಉಳಿವಿಗಾಗಿ ಮತ್ತೊಂದು ಅಪ್ಪಿಕೋ ಚಳುವಳಿ ನಡೆಸುವ ಅಗತ್ಯವಿದೆ, ನಾವು ಪ್ರಾಣ ಬಿಡುತ್ತೇವೆ,  ಆದರೆ ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ ಎಂಬ ಘೋಷವಾಕ್ಯ ಮೊಳಗಬೇಕಿದೆ, ಈ ಸರ್ವಾಧಿಕಾರಿ ಮತ್ತು ಕಾರ್ಪೊರೇಟ್ ಕಂಪನಿಗಳ ಸೇವಕ ಸರ್ಕಾರಗಳಿಗೆ ಶಿಕ್ಷಣ ವ್ಯಾಪಾರದ ಸರಕಲ್ಲ ಎಂದು ತೋರಿಸಲು ಪ್ರತಿ ಹಳ್ಳಿಗಳಲ್ಲಿಯೂ ಬೃಹತ್ ಪ್ರತಿರೋಧ ಚಳುವಳಿ ಕಟ್ಟಲು ಜನಸಾಮಾನ್ಯರು, ಶಾಲೆಯ ಹಳೆ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿ ಜನತೆ ಮುಂದಾಗಬೇಕು ಎಂದು ಕರೆ ನೀಡಿದರು.
ಸಮಿತಿಯ  ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡುತ್ತಾ, ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್  ಶಾಲೆ ಸ್ಥಾಪನೆ ಹೆಸರಿನ ಮೇಲೆ  ಸಾವಿರಾರು ಶಾಲೆಗಳನ್ನು ಮುಚ್ಚಲು ಮುಂದಾಗಿರುವುದಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ, ತನ್ನ ವರೆಸೆಯನ್ನು ಬದಲಾಯಿಸುತ್ತಾ, ಜನರನ್ನು ಮರಳು ಮಾಡಲು ಮತ್ತು ವಿವಿಧ ಶಾಲೆಗಳ ವಿಲೀನ ಮಾಡುವ, ಕೆಪಿಎಸ್ ಶಾಲೆ  ಪ್ರಾರಂಭಿಸಲು ಶಿಕ್ಷಣಕ್ಕೆ ೮ ಗ್ಯಾರಂಟಿ ಎಂಬ ಹೆಸರಿನಿಂದ ಪ್ರಚಾರ ಮಾಡುತ್ತಿದ್ದಾರೆ, ಇದು ಸಹ ಶಾಲೆಗಳ ಮುಚ್ಚುವ ಹುನ್ನಾರವಲ್ಲದೆ, ಬೇರೇನೂ ಅಲ್ಲ. ನಮ್ಮೂರ ಶಾಲೆ ಉಳಿಸಿಕೊಳ್ಳುಲು ನಮ್ಮ ಹೋರಾಟವನ್ನು ತೀವ್ರಗೊಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಗ್ರಾಮ ಸಮಿತಿಗಳ ಸಭೆ ನಡೆಸುವುದು, ವಿದ್ಯಾರ್ಥಿ ಸಂಕಲ್ಪದ ಓದು, ಮಕ್ಕಳ ಶಿಬಿರ, ಬ್ಯಾನರ್ ಕಟ್ಟುವುದು, ಬಿಇಓ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ ಮುಂತಾದ ಚಟುವಟಿಕೆಗಳು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ನಾಗರತ್ನ, ಶಾಂತ, ಗುರಳ್ಳಿ ರಾಜ, ಸೌಮ್ಯ ಜೆ., ಎಐಡಿಎಸ್‌ಓ ವಿದ್ಯಾರ್ಥಿ ಸಂಘದ ಜಿಲ್ಲಾ ಅಧ್ಯಕ್ಷ ಈರಣ್ಣ, ಉಪಾಧ್ಯಕ್ಷೆ ಶಾಂತಿ ಸಮಿತಿ ಸದಸ್ಯರಾದ ತಿಕ್ಕಮ್ಮ, ಅಸುಂಡಿ ಹೊನ್ನೂರಪ್ಪ, ಯಾರಗುಡಿ ತಿರುಮಲ ಅಮರಾಪುರ ಲಕ್ಷಿö್ಮ, ಎರೇಪ್ಪ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ