ಬಳ್ಳಾರಿ,ಮೇ.೦6.: ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಹೆಸರಿನ ಬದಲಿಗೆ ಕೆಪಿಎಸ್ ಶಾಲೆ ಸ್ಥಾಪನೆ ಹೆಸರಿನ ಮೇಲೆ ಶಾಲೆಗಳ ವಿಲನಕ್ಕೆ ಮುಂದಾಗಿರುವುದರ ವಿರುದ್ಧ ಬಲಿಷ್ಠ ಚಳುವಳಿ ಬೆಳಸಲು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ, ಇಂದು ನಗರದಲ್ಲಿನ ಸಂಘದ ಕಚೇರಿಯಲ್ಲಿ ಎಲ್ಲಾ ಹಳ್ಳಿ ಸಮಿತಿಗಳ ನಾಯಕರು ಸೇರಿ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿತು.
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಗೌರವ ಸಲಹೆಗಾರರಾದ ನಿವೃತ್ತ ಶಿಕ್ಷಕ ನರಸಣ್ಣ ಮಾತನಾಡುತ್ತಾ, ಹೆತ್ತ ತಾಯಿಯಂತೆ ಶಾಲೆಯು ಸಹ ನಮ್ಮ ತಾಯಿ ಇದ್ದಹಾಗೆ, ತಾಯಿ ಇಲ್ಲದೆ ಜನ್ಮವಿಲ್ಲ, ಶಾಲೆ ಇಲ್ಲದೆ ಜ್ಞಾನವಿಲ್ಲ, ಇಂತಹ ಜ್ಞಾನ ನೀಡುವ ತಾಯಿಯ ಉಳಿವಿಗಾಗಿ ಮತ್ತೊಂದು ಅಪ್ಪಿಕೋ ಚಳುವಳಿ ನಡೆಸುವ ಅಗತ್ಯವಿದೆ, ನಾವು ಪ್ರಾಣ ಬಿಡುತ್ತೇವೆ, ಆದರೆ ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ ಎಂಬ ಘೋಷವಾಕ್ಯ ಮೊಳಗಬೇಕಿದೆ, ಈ ಸರ್ವಾಧಿಕಾರಿ ಮತ್ತು ಕಾರ್ಪೊರೇಟ್ ಕಂಪನಿಗಳ ಸೇವಕ ಸರ್ಕಾರಗಳಿಗೆ ಶಿಕ್ಷಣ ವ್ಯಾಪಾರದ ಸರಕಲ್ಲ ಎಂದು ತೋರಿಸಲು ಪ್ರತಿ ಹಳ್ಳಿಗಳಲ್ಲಿಯೂ ಬೃಹತ್ ಪ್ರತಿರೋಧ ಚಳುವಳಿ ಕಟ್ಟಲು ಜನಸಾಮಾನ್ಯರು, ಶಾಲೆಯ ಹಳೆ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿ ಜನತೆ ಮುಂದಾಗಬೇಕು ಎಂದು ಕರೆ ನೀಡಿದರು.
ಸಮಿತಿಯ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡುತ್ತಾ, ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಸ್ಥಾಪನೆ ಹೆಸರಿನ ಮೇಲೆ ಸಾವಿರಾರು ಶಾಲೆಗಳನ್ನು ಮುಚ್ಚಲು ಮುಂದಾಗಿರುವುದಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ, ತನ್ನ ವರೆಸೆಯನ್ನು ಬದಲಾಯಿಸುತ್ತಾ, ಜನರನ್ನು ಮರಳು ಮಾಡಲು ಮತ್ತು ವಿವಿಧ ಶಾಲೆಗಳ ವಿಲೀನ ಮಾಡುವ, ಕೆಪಿಎಸ್ ಶಾಲೆ ಪ್ರಾರಂಭಿಸಲು ಶಿಕ್ಷಣಕ್ಕೆ ೮ ಗ್ಯಾರಂಟಿ ಎಂಬ ಹೆಸರಿನಿಂದ ಪ್ರಚಾರ ಮಾಡುತ್ತಿದ್ದಾರೆ, ಇದು ಸಹ ಶಾಲೆಗಳ ಮುಚ್ಚುವ ಹುನ್ನಾರವಲ್ಲದೆ, ಬೇರೇನೂ ಅಲ್ಲ. ನಮ್ಮೂರ ಶಾಲೆ ಉಳಿಸಿಕೊಳ್ಳುಲು ನಮ್ಮ ಹೋರಾಟವನ್ನು ತೀವ್ರಗೊಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಗ್ರಾಮ ಸಮಿತಿಗಳ ಸಭೆ ನಡೆಸುವುದು, ವಿದ್ಯಾರ್ಥಿ ಸಂಕಲ್ಪದ ಓದು, ಮಕ್ಕಳ ಶಿಬಿರ, ಬ್ಯಾನರ್ ಕಟ್ಟುವುದು, ಬಿಇಓ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ ಮುಂತಾದ ಚಟುವಟಿಕೆಗಳು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ನಾಗರತ್ನ, ಶಾಂತ, ಗುರಳ್ಳಿ ರಾಜ, ಸೌಮ್ಯ ಜೆ., ಎಐಡಿಎಸ್ಓ ವಿದ್ಯಾರ್ಥಿ ಸಂಘದ ಜಿಲ್ಲಾ ಅಧ್ಯಕ್ಷ ಈರಣ್ಣ, ಉಪಾಧ್ಯಕ್ಷೆ ಶಾಂತಿ ಸಮಿತಿ ಸದಸ್ಯರಾದ ತಿಕ್ಕಮ್ಮ, ಅಸುಂಡಿ ಹೊನ್ನೂರಪ್ಪ, ಯಾರಗುಡಿ ತಿರುಮಲ ಅಮರಾಪುರ ಲಕ್ಷಿö್ಮ, ಎರೇಪ್ಪ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
