ಜಮಖಂಡಿ; ಕಾಂಗ್ರೆಸ್ನ ಜನಪರ ಆಡಳಿತಕ್ಕೆ ಜನರು ಮನ್ನಣೆ ನೀಡಿದ್ದು, ಬಾಗಲಕೊಟೆ ಹಾಗೂ ದಾವಣಗೇರೆ ಎರಡೂ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ತಿಳಿಸಿದರು. ಸೋಮವಾರ ಸಂಜೆ ನಗರದ ಎ.ಜಿ.ದೇಸಾಯಿ ವೃತ್ತದಲ್ಲಿ ಕಾಂಗ್ರೆಸ್ನ ಕಾರ್ಯಕರ್ತರು ಹಮ್ಮಿ ಕೊಂಡಿದ್ದ ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಇಬ್ಬರೂ ನೂತನ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ.ದಿ. ಎಚ್.ವೈ, ಮೇಟಿ ಅವರ ಎಲ್ಲ ಕನಸುಗಳನ್ನು ಉಮೇಶ ಮೇಟಿ ಪೂರ್ಣ ಮಾಡಲಿದ್ದಾರೆ ಅದರಂತೆ ದಾವಣಗೇರೆಯ ದಿ.ಶಾಮನೂರು ಶಿವಶಂಕರಪ್ಪ ಅವರಂತೆ ಸಮರ್ಥ ಅವರು ಸಹ ಉತ್ತಮವಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು. ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಕಾಂಗ್ರೆಸ್ನ ಎಲ್ಲ ಸಚಿವರು, ಶಾಸಕರು, ಕಾರ್ಯಕರ್ತರು ಮುಖಂಡರು ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು. ಕಾಂಗ್ರಸ್ನ ಮುಖಂಡರಾದ ಮಹೇಶ ಕೋಳಿ, ಪರಮಾನಂದ ಗೌರೋಜಿ, ಅನ್ವರ ಮೋಮಿನ, ರವಿ ಯಡಳ್ಳಿ, ಈಶ್ವರವಾಳೆಣ್ಣವರ, ದಿಲಾವರ ಶಿರೋಳ, ಸುನೀಲ ಸಿಂಧೆ, ಯುವಕಾಂಗ್ರೆಸ್ನ ಕುಮಾರ ಆಲಗೂರ, ಬಿ.ಬಿ.ಪಾಟೀಲ, ಗುರುಲಿಂಗಪ್ಪ, ಶಶಿಧರ ನ್ಯಾಮಗೌಡ, ಬಸು ಹರಕಂಗಿ, ಸಾಧಿಕ ಬಂಟನೂರ, ಕಿರಣ ಪಿಸಾಳ, ಲಿಂಗರಾಜ ಪಾಟೀಲ, ನಾನಾ ಮೋರೆ, ಖಾಜಾ ಅವಟಿ ಸೇರಿದಂತೆ ಕಾಂಗ್ರೆಸ್ನ ಕಾರ್ಯಕರ್ತರು ಇದ್ದರು. ಪಠಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.