ಬೆಳಗಾವಿ 25- ಹಾಸ್ಯಕೂಟದವರು ಸಂಘಟನೆ ಹನ್ನೇರಡನೇ ವಾರ್ಷಿಕೋತ್ಸವದ ನಿಮಿತ್ತ ಇದೇ ದಿ.
27 ಸೋಮವಾರದಂದು ಸಾ. 5-30 ಕ್ಕೆ ಹಿಂದವಾಡಿಯಲ್ಲಿರುವ (ಗೋಮಟೇಶ ವಿದ್ಯಾಪೀಠ ಹತ್ತಿರ)
ಐ.ಎಂ.ಇ.ಆರ್. ಸಬಾಭವನದಲ್ಲಿ “ಹೆಂಡತಿ ಜೀವ ಹಿಂಡುತಿ” ಹರಟೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಹರಟೆ ಸೂತ್ರಧಾರರಾಗಿ ದೂರದರ್ಶನ ಹಾಸ್ಯ ಧಾರಾವಾಹಿಗಳಾದ ಪಾಪ ಪಾಂಡು, ಸಿಲ್ಲಿಲಲ್ಲಿ ಗಳ
ಖ್ಯಾತಿ, ಹಾಸ್ಯ ಬರೆಹಗಾರ ಬೆಂಗಳೂರಿನ ಎಂ.ಎಸ್. ನರಸಿಂಹಮೂರ್ತಿಯವರು ಆಗಮಿಸಲಿದ್ದಾರೆ.
ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ಎಲ್. ಎಸ್. ಶಾಸ್ತ್ರಿಯವರು ವಹಿಸಲಿದ್ದಾರೆ. ಹರಟೆಯಲ್ಲಿ ಹೆಂಡತಿ
ಜೀವ ಹಿಡುತ್ತಾಳೆಂದು ಪ್ರೊ. ಜಿ. ಕೆ. ಕುಲಕರ್ಣಿ, ಡಾ. ಅರವಿಂದ ಕುಲಕರ್ಣಿ, ಗುಂಡೇನಟ್ಟಿ ಮಧುಕರ ಮತ್ತು
ರಾಜೇಂದ್ರ ಭಂಡಾರಿ ಮಾತನಾಡಲಿದ್ದು ಜೀವ ಹಿಂಡುವುದಿಲ್ಲವೆಂದು ಅರವಿಂದ ಹುನಗುಂದ, ಜಿ.
ಎಸ್.ಸೋನಾರ, ಎಂ. ಬಿ. ಹೊಸಳ್ಳಿ ಮತ್ತು ತಾನಾಜಿ ಮಾತನಾಡಲಿದ್ದಾರೆ. ಪ್ರವೇಶ ಉಚಿತವಾಗಿದ್ದು
ಹೆಚ್ಚಿನ ಸಂಖ್ಯೆಯಲ್ಲಿ ಹಾಸ್ಯಾಸಕ್ತರು ಇದರ ಸದುಪಯೋಗ ಪಡಿಯುವಂತೆ ಸಂಘಟಕರು ಪ್ರಕಟನೆಯಲ್ಲಿ
ತಿಳಿಸಿದ್ದಾರೆ.
-0-0-0-
ಫೋಟೋ : ದೂರದರ್ಶನ ಹಾಸ್ಯ ಧಾರಾವಾಹಿಗಳಾದ ಪಾಪ ಪಾಂಡು, ಸಿಲ್ಲಿಲಲ್ಲಿ ಗಳ ಖ್ಯಾತಿ, ಜನಪ್ರಿಯ
ಹಾಸ್ಯ ಬರೆಹಗಾರ ಬೆಂಗಳೂರಿನ ಎಂ.ಎಸ್. ನರಸಿಂಹಮೂರ್ತಿ