Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹವಾಮಾನ ಪರಿಣಾಮ ತೋಟಗಾರಿಕೆ ಬೆಳೆಗಳ ಮೇಲೆ ಒತ್ತಡ ಹೆಚ್ಚುತ್ತಿದೆ : ಡಾ. ಹೀನಾ

ಇಂಡಿ : ಮಳೆಯ ಕೊರತೆ ಮತ್ತು ಅಸ್ಥಿರ ಹವಾಮಾನ ಪರಿಣಾಮ ತೋಟಗಾರಿಕೆ ಬೆಳೆಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ತೆಂಗು, ಮಾವು, ತರಕಾರಿ ಉಳ್ಳಾಗಡ್ಡೆ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳ ತುರ್ತು ನಿರ್ವಹಣಾ ಕ್ರಮ ಅನುಸರಿಸಿದರೆ ಬರದ ಪರಿಣಾಮವನ್ನು ತಗ್ಗಿಸಿ ಉತ್ತಮ ಬೆಳವಣೆಗೆ ಹಾಗೂ ಇಳುವರಿಯನ್ನು ಕಾಯ್ದು ಕೊಳ್ಳಬಹುದು ಎಂದು ಡಾ. ಹೀನಾ ಹೇಳಿದರು.
ನಗರದ  ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ ಬರ ಮಳೆಯ ಕೊರತೆ ನಿಮಿತ್ಯ ತೋಟಗಾರಿಗೆ ಬೆಳೆಗಳ ಸಂರಕ್ಷಣೆ ರೈತರಿಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
 ತೋಟಗಳಲ್ಲಿ ಮಣ್ಣಿನ ತೇವಾಂಶ ಸಂರಕ್ಷಣೆ ಹನಿ ನೀರಾವರಿ ಸಮತೋಲನ, ಗೊಬ್ಬರ ನಿರ್ವಹಣೆ ಹಾಗೂ ಸಮಗ್ರ ಕೀಟ ರೋಗ ನಿಯಂತ್ರಣಕ್ಕೆ ಆಧ್ಯತೆ ನೀಡುವದು ಅತ್ಯಗತ್ಯವಾಗಿದೆ. ಜೈವಿಕ ಗೊಬ್ಬರಗಳ ಬಳಕೆ ಹೆಚ್ಚಿಸುವುದರ ಜತೆಗೆ ಮಲ್ಚಿಂಗ ಅಂತರಬೆಳೆ ಮತ್ತು ಸೂಕ್ಷ್ಮ ಪೋಷಕಾಂಶಗಳ ಪೂರೈಕೆ ಮಾಡುವದರಿಂದ ಬರ ಎದುರಿಸುವ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತದೆ ಎಂದರು. 
ವಿಜ್ಞಾನಿ ಡಾ. ಪ್ರಸಾದ ಮಾತನಾಡಿ ತೆಂಗಿನ ಗಿಡದ ಒಣಗಿದ ಗರಿಗಳನ್ನು ತೆಗೆದು ಹಾಕಬೇಕು, ಕಬ್ಬಿನ ರವದಿ ಗಿಡದ ಬಡ್ಡೆಯಲ್ಲಿ ಹೊದಿಕೆ ಮಾಡುವದರಿಂದ ನೀರಿನ ಸಂರಕ್ಷಣೆ ಮಾಡಬಹುದು, ಹಣ್ಣಿನ ಬೆಳೆಗಳಿಗೆ ಶೇ ೫ ಕಯೋಲಿನ ದ್ರಾವಣವನ್ನು ಎಲೆಗಳ ಮೇಲೆ ಸಿಂಪಡಿಸಬೇಕು,ತರಕಾರಿ ಬೆಳೆಗಳಿಗೆ ಪೋಟ್ಯಾಸಿಯಂ ನೈಟ್ರೇಟ್ ಸಿಂಪಡಿಸಬೇಕು ಎಂದರು.
ವಿಜ್ಞಾನಿ ಡಾ. ಪ್ರಕಾಶ ಮಾತನಾಡಿ ಉಳ್ಳಾಗಡ್ಡೆಗೆ ಗಡ್ಡೆ ಪ್ರಾರಂಭ ಹಂತದಲ್ಲಿ ನೀರಿಗೆ ಆಧ್ಯತೆ ನೀಡಿ, ಬೇರೆ ಸಮಯದಲ್ಲಿ ಅವಶ್ಯಕತೆ ಇಲ್ಲ, ಡಾಳಿಂಬೆ ಮತ್ತು ಮೆಣಸಿನಕಾಯಿಗೆ ೧೦೦ ರಿಂದ ೧೫೦ ಪಿಪಿಎಂ ಸಲಿಶ್ಯಾಲಿಕ ಆಸಿಡ್ ದ್ರಾವಣ ಸಿಂಪಡಿಸಬೇಕು. ನಿಂಬೆ ಗಿಡಗಳಿದ್ದರೆ  ೫ ವರ್ಷಕ್ಕಿಂತ  ದೊಡ್ಡ ಗಿಡದ ಕಾಂಡಗಳಿಗೆ ಸುಣ್ಣ ಲೇಪನ ಮಾಡಬೇಕು.ಬೊಡೋಪೆಸ್ಟ ಒಂದು ಕೆಜಿ ಸುಣ್ಣ ಒಂದು ಕೆಜಿ ಕಾಪರ್ ಸಲ್ಪೇಟ್ ದಿಂದ ಅಂಟುರೋಗನಿಯಂತ್ರಿಸಬಹುದು ಎಂದರು.
ಡಾ. ಪ್ರೇಮಚಂದ್ರ , ಡಾ. ಸುನೀಲ,  ಜಕ್ಕಣ್ಣ ಬಿರಾದಾರ ವೇದಿಕೆಯ ಮೇಲಿದ್ದರು.
ಡಾ. ವೀಣಾ ಚಂದಾವರಿ ಸ್ವಾಗತಿಸಿದರು. ಮಂಜುಳಾ ನಿರೂಪಿಸಿದರು.

  

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ