ಯರಗಟ್ಟಿ : ಬಿಸಿಲಿನ ತಾಪಮಾನಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತವಾಗಿ ಗ್ರಾಮದಲ್ಲಿ ೧೯ ಅನಧಿಕೃತ ನೀರಿನ ನಳಗಳ ಪಟ್ಟಿ ಮಾಡಲಾಗಿದೆ ಇವುಗಳನ್ನು ತೆರವುಗೊಳಿಸಲಾಗುತ್ತಿದೆ.
ಇತ್ತಿಚಿಗೆ ಬೆಳಗಾವಿಯಲ್ಲಿ ನಡೆದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಳಗಾವಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಕುಡಿಯುವ ನೀರಿನ ಪರಿಸ್ಥಿತಿ ಹಾಗೂ ಆಡಳಿತಾತ್ಮಕ ವಿ?ಯಗಳ ಬಗ್ಗೆ ಚರ್ಚಿಸಲಾಗಿದೆ.
ಮೇಲಾಧಿಕಾರಿಗಳ ಆದೇಶದ ಮೇರೆಗೆ ಅಧಿಕೃತ ನೀರಿನ ನಳಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯ ಬಗ್ಗೆ ನಿರ್ದಿ? ಮಾಹಿತಿ ಲಭ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ ಅಧಿಕೃತ ನೀರಿನ ನಳಗಳ ಪಟ್ಟಿ ಮಾಡಿ ತೆರವು ಕಾರ್ಯಾಚರಣೆ ಆರಂಭವಾಗಿದೆ ಸತ್ತಿಗೇರಿ ಗ್ರಾಮದಲ್ಲಿ ಸದ್ಯ ೮ ಅಧಿಕೃತ ನೀರಿನ ನಳಗಳನ್ನು ತೆರವು ಗೊಳಿಸಲಾಗಿದೆ ಎಂದು ಆರ್ ಡಬ್ಲ್ಯೂಎಸ್ ಎಇಇ ಪ್ರೇಮ ರಾಠೋಡ ತಿಳಿಸಿದ್ದಾರೆ.
ಈ ವೇಳೆ ಜೂನಿಯರ್ ಇಂಜಿನಿಯರ್ ಅಕ್ಷಯ ವಡವಟಗಿ, ಗುತ್ತಿಗೆದಾರ ಅಡಿವೆಪ್ಪ ಸುಣಗಾರ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಹೇಳಿಕೆ :
ಯರಗಟ್ಟಿ-ಸವದತ್ತಿ ತಾಲೂಕಿನಲ್ಲಿ ಸದ್ಯಕ್ಕೆ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇಲ್ಲವೆಂದು ಅಧಿಕಾರಿಗಳು ಮಾಹಿತಿ ನೀಡಿದರು. ಆದರೆ ಯಾವುದಾದರೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಕೊರತೆ ಉಂಟಾದಲ್ಲಿ, ತಕ್ಷಣ ಟ್ಯಾಂಕರ್ಗಳ ಮೂಲಕ ನೀರು ಪೂರೈಸುವಂತೆ ಸೂಚನೆ ನೀಡಲಾಯಿತು. ಟ್ಯಾಂಕರ್ಗಳಿಲ್ಲದ ಗ್ರಾಮ ಪಂಚಾಯಿತಿಗಳು ಅವುಗಳನ್ನು ಖರೀದಿಸುವಂತೆ ತಿಳಿಸಲಾಗಿದೆ. ಹಾಗೂ ಯರಗಟ್ಟಿ- ಸವದತ್ತಿ ತಾಲೂಕಿನಲ್ಲಿ ಅಧಿಕೃತ ನೀರಿನ ನಳಗಳು ಕಂಡು ಬಂದಲ್ಲಿ ತೆರವು ಗೊಳಿಸಲು ಸೂಚಿಸಲಾಗಿದೆ.
ವಿಶ್ವಾಸ ವೈದ್ಯ, ಶಾಸಕರು ಸವದತ್ತಿ ಮತ ಕ್ಷೇತ್ರ