ಬಳ್ಳಾರಿ, ಮೇ.02.:ತಾಲೂಕಿನ ಸಂಗನಕಲ್ಲು ಗ್ರಾಮದ ಐತಿಹಾಸಿಕ ಬೆಟ್ಟದಲ್ಲಿನ ಬಯಲು ಬುದ್ದ ವಿಹಾರದಲ್ಲಿ. ಬುದ್ಧನ 2570 ನೇ ಜಯಂತಿಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯ್ತು.
ದೇವನಾಂಪ್ರಿಯ ಬಯಲು ಬುದ್ದ ವಿಹಾರ ಟ್ರಸ್ಟ್ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಮೇಯರ್ ಪಿ.ಗಾದೆಪ್ಪ, ಹಿರಿಯ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ್, ಕಮಲಾಕರ ಬಂತೇಜಿ. ಎರ್ರೆಣ್ಣ, ಓಂಕಾರಪ್ಪ, ವಿಜಯಕುಮಾರ್ ಮೊದಕಾದವರು ಪಾಲ್ಗೊಂಡು ಬುದ್ದನ ಪ್ರತಿಮೆಗೆ ಪ್ರಾರ್ಥನೆ, ಪುಷ್ಪ ನಮನ ಸಲ್ಲಿಸಿದರು.