ಸಂಕೇಶ್ವರ: ಈ ವರ್ಷಬುಧವಾರ ದಿನಾಂಕ 28 ರಂದು ಬಕ್ರಿ ಈದ್ ಹಬ್ಬವನ್ನು ಶಾಂತಿ ಮತ್ತು ಸಹಕಾರದಿಂದ ಆಚರಿಸಲಾಗುವುದು ಎಂದು ಪೊಲೀಸ್ ಇನ್ಸ್ಪೆಕ್ಟರ್ ಗಣಪತಿ ಕೊಗನೋಳಿ ತಿಳಿಸಿದರು. ಅವರು ಸೋಮವಾರ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಂದು ಬೆಳಿಗ್ಗೆ ಎಲ್ಲಾ ಮುಸ್ಲಿಂ ಸಹೋದರರು ಒಟ್ಟಾಗಿ ಸೇರಿ ನಮಾಜ್ ಮಾಡಿ ಈದ್ ಆಚರಣೆ ಮಾಡುತ್ತಾರೆ. ಈದ್ ಮತ್ತು ಇತರ ಸಂದರ್ಭಗಳಲ್ಲಿ, ಎಲ್ಲಾ ಜಾತಿ ಮತ್ತು ಧರ್ಮದ ಜನರು ಒಟ್ಟಾಗಿ ಸೇರಿ ಆಚರಿಸುತ್ತಾರೆ ಮತ್ತು ಸಹೋದರತೆ ಮತ್ತು ಸರ್ವ ಧರ್ಮ ಸಮನ್ವಯತೆಯನ್ನು ಸಾರುತ್ತಾರೆ ಎಂದು ಹೇಳಿದರು. ಸಂಕೇಶ್ವರ ನಿವಾಸಿಗಳ ವಿಶೇಷತೆಯೆಂದರೆ ಅವರು ನಗರದಲ್ಲಿ ಸಹಕಾರ ಮತ್ತು ಏಕತೆಯನ್ನು ತೋರಿಸುತ್ತಾರೆ. ಈ ಸಂಪ್ರದಾಯವನ್ನು ಕಾಪಾಡಿಕೊಳ್ಳಲು ಎಲ್ಲರೂ ಮುಂದೆ ಬರಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ನ್ಯಾ. ಪ್ರಮೋದ ಹೊಸಮನಿ, ಸಚಿನ ಭೋಪಾಲೆ, ಉದಯ ಕರ್ನಿಂಗ್, ಪ್ರವೀಣ್ ನೇಸರಿ, ಗಜಾನನ ಕ್ವಳ್ಳಿ, ಹರುಣ್ ಮುಲ್ಲಾ, ಮುಕ್ತಾರ್ ನದಾಫ್, ಮಾಜಿ ಪುರಸಭೆ ಸದಸ್ಯ ಮಹೇಶ ಹಟ್ಟಿಹೊಳಿ, ಹಾಜಿ ಅಲ್ಲಾವುದ್ದೀನ್ ಕಲಾವಂತ, ಮುಸ್ಲಿಂ ಸಮಾಜದ ಅಧ್ಯಕ್ಷ ದಸ್ತಗೀರ ತೇರಣಿ, ರಿಯಾಜ್ ಫಣಿಬಂದ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿಠ್ಠಲ್ ನಾಯ್ಕ, ಹಾಗೂ ಶಯಣ್ಣನವರ್ ಸೇರಿದಂತೆ ಸಮುದಾಯಗಳ ಮುಖಂಡರು ಮತ್ತು ನಗರ ಪ್ರಮುಖರು ಉಪಸ್ಥಿತರಿದ್ದರು.
