ಮೂಡಲಗಿ: ವಾರಸುದಾರರು ತಮ್ಮ ಕಳೆದುಹೋದ ಮೊಬೈಲನ ಸರಿಯಾದ ಮಾಹಿತಿಯನ್ನು ಸಿಇಐಆರ್ ಪೋರ್ಟಲ್ ನಲ್ಲಿ ತುಂಬಿ ನೋಂದಾಯಿಸಿಕೊಂಡರೆ, ಪೊಲೀಸರು ಮೊಬೈಲನ್ನು ಸುಲಭವಾಗಿ ಪತ್ತೆಹಚ್ಚಿ ವಾರಸುದಾರರಿಗೆ ಮರಳಿಸಲು ಅನುಕೂಲವಾಗುತ್ತದೆ ಎಂದು ಸಿಪಿಐ ಶ್ರೀಶೈಲ ಬ್ಯಾಕೂಡ ಹೇಳಿದರು.
ಮಂಗಳವಾರದಂದು ಪಟ್ಟಣದ ಸಿಪಿಐ ಕಚೇರಿಯಲ್ಲಿ ವಿವಿಧ ಕಡೆಗಳಲ್ಲಿ ಕಳೆದುಹೋಗಿದ್ದ ಸುಮಾರು ೧೪ ಮೊಬೈಲ್ ಗಳನ್ನು ಸಿಇಐಆರ್ ಪೋರ್ಟಲ್ ಮುಖಾಂತರ ಪತ್ತೆಮಾಡಿ ಮೊಬೈಲ್ ವಾರಸುದಾರರಿಗೆ ಮರಳಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, ಮೊಬೈಲ್ ಖರೀದಿಸುವ ಸಂಧರ್ಭದಲ್ಲಿ ಕೊಡಮಾಡಿದ ರಶೀದಿ ಕಾಗದಪತ್ರಗಳನ್ನು ಭದ್ರವಾಗಿ ಕಾಯ್ದುಕೊಂಡಿದ್ದರೆ ಮೊಬೈಲ್ ಕಳೆದುಕೊಂಡಾಗ ಅದರ ಮಾಹಿತಿಯನ್ನು ಸಿಇಐಆರ್ ಪೋರ್ಟಲನಲ್ಲಿ ನೋಂದಾಯಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪಿ.ಎಸ್.ಐ ರಾಜು ಪೂಜೇರಿ, ಪ್ರೊಬೇಶನರಿ ಪಿ.ಎಸ್.ಐ ರಾಜೀವ ಪೂಜಾರ, ಸಿಬ್ಬಂದಿಗಳಾದ ಲಕ್ಷ್ಮಣ ಗುಡೇರ, ಎಸ್.ಜಿ.ಮನ್ನಾಪೂರ, ಎಲ್.ಎಸ್.ಜೊಕ್ಕಾನಟ್ಟಿ, ಕೆ.ಸಿ.ಬಗಲಿ ಉಪಸ್ಥಿತರಿದ್ದರು
