ಬಳ್ಳಾರಿ. ಜು. 08: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷದ ಅಣತಿಯಂತೆ ನಡೆಯುತ್ತಿದೆ ಮನೆಮನೆಗೆ ಭೇಟಿ ನೀಡಿ ವಿಷಯವನ್ನು ಸಂಗ್ರಹಿಸಿಕೊಳ್ಳಬೇಕಾದ ಬಿ ಎಲ್ ಓ ಗಳು ಮಸೀದಿ ದರ್ಗಾ ಮತ್ತು ಶಾದಿ ಮಾಲ್ ಗಳಲ್ಲಿ ಕುಳಿತು ಸರ್ಕಾರದ ಆದೇಶಕ್ಕೆ ತಲೆಬಾಗಿ ಕುರಿಗಳಂತೆ ಕೆಲಸ ಮಾಡುತ್ತಿದ್ದಾರೆ ಕೆಲಸ ಮಾಡುತ್ತಿದ್ದಾರೆ ಇಷ್ಟು ದಿನ ನಡೆದ ಎಸ್ಐಆರ್ ಅನ್ನು ರದ್ದುಪಡಿಸಿ ಅಕ್ರಮ ಎಸಿಗಿರುವ ಬಿ ಎಲ್ ಓ ಗಳನ್ನೂ ಬಂಧಿಸಬೇಕು ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಆಗ್ರಹಿಸಿದರು.
ಅವರು ಇಂದು ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಚುನಾವಣಾ ಆಯೋಗದ ಪ್ರಕಾರ ಅದರ ನಿಯಂಗಳ ಪ್ರಕಾರ ನಡೆಯಬೇಕಾದ ಎಸ್ಐಆರ್ ನಿಯಮಗಳನ್ನು ಗಾಳಿಗೆ ತೂರಿ ಬಿ ಎಲ್ ಓ ಗಳು ಒಂದೇ ಕಡೆ ಕುಳಿತು ದನ ಕುರಿಗಳಂತೆ ಜನರನ್ನು ಸೇರಿಸಿ ತಮಗೆ ಬೇಕಾದ ರೀತಿಯಲ್ಲಿ ಮಾಹಿತಿಯನ್ನು ಸಂಗ್ರಹಿಸಿಕೊಳ್ಳುತ್ತಿದ್ದಾರೆ ರಾಜ್ಯದಲ್ಲಿ ಎಸ್ಐಆರ್ ನಡೆಯುತ್ತಿದೆಯೋ ಅದನ್ನು ನಡೆಸುತ್ತಿರುವುದು ಆಯೋಗವ ಅಥವಾ ರಾಜ್ಯ ಸರ್ಕಾರವ ಎಂಬುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಇದು ಸಿಎಂ ಡಿಕೆ ಶಿವಕುಮಾರ್ ಅವರು ಮೂಗಿನ ನೇರಕ್ಕೆ ನಡೆಸಿ ಎಸ್ಐಆರ್ ಪ್ರಕ್ರಿಯೆಯನ್ನೇ ಕುಲಗೆಡಿಸಿದ್ದಾರೆ ಎಂದು ಆರೋಪಿಸಿದರು.
ಎಸ್ಐಆರ್ ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರ ವೋಟ್ ಬ್ಯಾಂಕ್ ರೀತಿಯಲ್ಲಿ ರಾಜಕೀಯ ಮಾಡುತ್ತಿದೆ ಪಶ್ಚಿಮ ಬಂಗಾಳ ಮತ್ತು ಬಿಹಾರದ ರೀತಿಯಲ್ಲಿ ಚುನಾವಣಾ ಆಯೋಗದ ನಿಗಾವಣೆಯಲ್ಲಿ ನಿವೃತ್ತ ಸುಪ್ರೀಂ ಕೋರ್ಟ್ ಅವರ ಮೇಲ್ವಿಚಾರಣೆಯಲ್ಲಿ ನಡೆಯಬೇಕು ಅದು ಬಿಟ್ಟು ವಿಳಾಸ, ಮನೆ. ಮತದಾರರ ಪಟ್ಟಿ, ಚುನಾವಣೆ ಗುರಿತಿನ ಚೀಟಿ ಇಲ್ಲದವರ ಹೆಸ್ರುಗಳನ್ನು ಸೇರಿಸಲಾಗುತ್ತಿದೆ ಈ ಮೂಲಕ ಚುನಾವಣಾ ಅಕ್ರಮಗಳನ್ನು ನಡೆಸಿ ವಾಮ ಮಾರ್ಗದಲ್ಲಿ ಅಧಿಕಾರ ಪಡೆಯಬೇಕೆಂದು ಹವಣಿಸುತ್ತಿದೆ ಇದು ಅತ್ಯಂತ ಖಂಡನೀಯ ವಿಷಯ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಮೋದ್ಕರ್ ಶ್ರೀನಿವಾಸ್ ಕೆ ಹನುಮಂತಪ್ಪ ಗುಡಿಗಂಟೆ ಹನುಮಂತಪ್ಪ ಅಶೋಕ್ ಬಿಜೆಪಿ ಮುಖಂಡರಾದ ಹೋಬಳೇಶ್ ಸಿದ್ದೇಶ್ ಪೆಟ್ರೋಲ್ ತಿಮ್ಮಪ್ಪ ಪಾಲಣ್ಣ ಸೇರಿದಂತೆ ಇತರರಿದ್ದರು.