LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಶಿಕ್ಷಕರ ದಿನಾಚರಣೆಯಂದು ರಕ್ತದಾನ ಶಿಬಿರ ಜನೋಪಕಾರಿ : ನಾನಾಸಾಹೇಬ ಪಾಟೀಲ 

 

ಚನ್ನಮ್ಮನ ಕಿತ್ತೂರು,. ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ ಎನ್ನುವ ಮಾತಿನಂತೆ ಶಿಷ್ಯರ ಬೆಳವಣಿಗೆಗೆ, ದೇಶ ಬೆಳವಣಿಗೆಗೆ ಸದಾ ದಾರಿ ತೋರಿಸುವವರು ಗುರುಗಳು, ಅವರ ದಿನಾಚರಣೆಯನ್ನು ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಕಿತ್ತೂರು ತಾಲೂಕಿನ ಎಲ್ಲ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ  ಅಧಿಕಾರಿಗಳು ಪ್ರಸಕ್ತ ವರ್ಷದಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಿರುವದು ಜನರ ಜೀವ ಉಳಿಸುವ ಕೆಲಸವಾಗಿದೆ ಎಂದು ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ನಾನಾಸಾಹೇಬ ಪಾಟೀಲ ಹೇಳಿದರು.
     ಅವರು ಗುರುವಾರದಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಪಟ್ಟಣದ ಚನ್ನಮ್ಮ ಸರ್ಕಲ್ ನ  ರಾಣಿ ಚನ್ನಮ್ಮ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ತಾಲೂಕ ಆಡಳಿತ, ತಾ ಪಂ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ, ಕ್ಷೇತ್ರ ಸಮನ್ವಯ ಅಧಿಕಾರಿಗಳ ಸಹಯೋಗದಲ್ಲಿ  ಶಿಕ್ಷಕರು ಹಾಗೂ ಅಧಿಕಾರಿಗಳು  ಸ್ವಯಂ ಪ್ರೇರಿತ ರಕ್ತದಾನ ಮಾಡಿದ ಸಂದರ್ಭದಲ್ಲಿ ಈ ತರಹ ಶಿಕ್ಷಕರು, ಅಧಿಕಾರಿಗಳು ರಕ್ತದಾನ ಮಾಡುತ್ತಿರುವದು ಖುಷಿ ತಂದಿದ್ದು, ಈ ಕೆಲಸದಿಂದ ಅನೇಕ ಜನರ ಜೀವ ರಕ್ಷಣೆ ಮಾಡುವ ಕೆಲಸ ಆಗುತ್ತದೆ ಎಂದರು.
    ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚನ್ನಬಸಪ್ಪ ತುಬಾಕಿ, ಡಾ. ಜಗದೀಶ ಹಲಸಗಿ,ಸಿ ಪಿ ಐ ಶಿವಾನಂದ  ಗುಡಗನಟ್ಟಿ, ವಿಜಯ ಪಾಟೀಲ ಸೇರಿದಂತೆ ತಾಲೂಕಿನ ಮುಖಂಡರು, ಅಧಿಕಾರಿಗಳು, ಶಿಕ್ಷಕರು, ಪಾಲ್ಗೊಂಡು ಶಿಕ್ಷಕರ ದಿನಾಚರಣೆ ದಿನ ರಕ್ತದಾನ ಮಾಡಿ ಜನೋಪಯೋಗಿ ಮಾದರಿ ಕೆಲಸ ಮಾಡಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉತ್ತರ ಕರ್ನಾಟಕದಿಂದಲೇ ಸರ್ಕಾರಕ್ಕೆ ತಕ್ಕ ಉತ್ತರ ಕೊಡುತ್ತೇವೆ : ಭೀಮಪ್ಪ ಗಡಾದ ಧರ್ಮಸ್ಥಳ ಗ್ರಾಮೀಣ ಸಂಘದಿಂದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮಇಂಡಿ ತಾಲೂಕನ್ನು ಬರಪೀಡಿತವೆಂದು ಘೋಷಿಸಲು ಆಗ್ರಹ: ಝಳಕಿ ಹೆದ್ದಾರಿಯಲ್ಲಿ ರೈತರ ಬೃಹತ್ ಪ್ರತಿಭಟನೆಸೆ.೬ರಂದು ಶ್ರೀ ಉಳವೇಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವಶ್ರೀ ಎಚ್.ಎಸ್. ಪಾಟೀಲ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಐನಾಪುರ: ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಕರ ಸಂಘದಿಂದ ಬೃಹತ್ ರಕ್ತದಾನ ಶಿಬಿರಶಾಸಕ ಬಾಬಾಸಾಹೇಬ ಪಾಟೀಲ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಸಭೆಹೂವು–ಬೊಕ್ಕೆ ಬದಲು ರಕ್ತದಾನ: ಕಿತ್ತೂರಿನಲ್ಲಿ ವಿಭಿನ್ನ ಶಿಕ್ಷಕರ ದಿನಾಚರಣೆರಾಮದುರ್ಗ: ಅಕ್ರಮ ಗೋಹತ್ಯೆ ತಡೆಗೆ ಆಗ್ರಹಿಸಿ ವಿಎಚ್‌ಪಿ, ಭಜರಂಗದಳದಿಂದ ಮನವಿ89 ಗ್ರಾಮಗಳ ದಾಖಲೆಗಳ ಇಂಡೆಕ್ಸ್, ಕ್ಯಾಟಲಾಗ್ ಸಿದ್ಧತೆ; 80 ಸರ್ವೇಯರ್‌ಗಳಿಂದ ಮೂರು ದಿನಗಳ ಕಾರ್ಯಾಚರಣೆ, ರೈತರಿಗೆ 24 ಗಂಟೆಯೊಳಗೆ ಭೂ ದಾಖಲೆ ಪೂರೈಸುವ ಗುರಿ