ಬಳ್ಳಾರಿ,ಜು.18 ತಾಳೂರು ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಸಾರ್ವಜನಿಕ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಮಾರ್ಗದಲ್ಲಿ ಚಲಿಸುವ ಬಸ್ಸುಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ, ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವAತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಆದೇಶ ಹೊರಡಿಸಿದ್ದಾರೆ.
*ಕಾಮಗಾರಿಯ ಹಿನ್ನೆಲೆ:*
ಲೋಕೋಪಯೋಗಿ ಇಲಾಖೆಯ ಕೆಎಂಇಆರ್ಸಿ ಯೋಜನೆ ಅಡಿಯಲ್ಲಿ ರಾಜ್ಯ ಹೆದ್ದಾರಿ-61 ಮತ್ತು ಹೆದ್ದಾರಿ-128 ಕ್ಕೆ ಸೇರುವ ದೇವದುರ್ಗ-ಅಮರಾಪುರ-ಭೋಗಾವತಿ-ಹಿರೇಕೋ
ಹಾಗಾಗಿ ಮೋಟಾರ್ ವಾಹನ ಕಾಯ್ದೆ 1988ರ ಅಧಿನಿಯಮ 115 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಗಳು 1989ರ ನಿಯಮ 221 ಎ (5) ರನ್ವಯ ಈ ಕ್ರಮ ಕೈಗೊಳ್ಳಲಾಗಿದೆ.
*ಪರ್ಯಾಯ ಮಾರ್ಗಗಳು:*
ಬಳ್ಳಾರಿಯಿಂದ ಹೊರಡುವ ಬಸ್ಸುಗಳು ಕೋಳೂರು ಕ್ರಾಸ್ – ದಮ್ಮೂರು – ಡಿ. ಕಗ್ಗಲ್ – ಚಾನಾಳು – ಚಾನಾಳು ಕ್ರಾಸ್ ಮಾರ್ಗವಾಗಿ ತಾಳೂರು ಗ್ರಾಮವನ್ನು ತಲುಪುವುದು.
ಪರ್ಯಾಯವಾಗಿ ಬಳ್ಳಾರಿಯಿಂದ ಮೋಕಾ – ಬಸರಕೋಡು – ಹಿರೇಹಡಗಲಿ ಮಾರ್ಗವಾಗಿ ತಾಳೂರು ಗ್ರಾಮಕ್ಕೆ ಸಂಚರಿಸಬಹುದಾಗಿದೆ.
ಈ ಆದೇಶವು ಆಗಸ್ಟ್ 06 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ರಸ್ತೆಯ ಪರ್ಯಾಯ ತಿರುವುಗಳಲ್ಲಿ ಸೂಕ್ತ ಸಂಕೇತ ಫಲಕಗಳನ್ನು ಅಳವಡಿಸಲು ಹಾಗೂ ಅಗತ್ಯ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ತಾತ್ಕಾಲಿಕ ಬದಲಾವಣೆಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರು ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.