Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಪತ್ತಿನ ಸಮಾನ ಹಂಚಿಕೆ ಬಸವಣ್ಣನವರ ಆದರ್ಶ : ಡಾ. ಯಲ್ಲಪ್ಪ ಹಿಮ್ಮಡಿ 

 

ಬೆಳಗಾವಿ - 20 : ಸಾಮಾಜಿಕ ತಾರತಮ್ಯದ ಬೇರುಗಳು ಆರ್ಥಿಕ ಅಸಮಾನತೆಯಲ್ಲಿರುವುದರಿಂದ ಸಾಮಾಜಿಕ ಸಮಾನತೆ ತರಲು ಸಂಪತ್ತಿನ ಸಮಾನ ಹಂಚಿಕೆಯಾಗಬೇಕೆಂಬುದು ಬಸವಣ್ಣನವರ ಆದರ್ಶವಾಗಿತ್ತು ಎಂದು ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು. ಅವರಿಂದು ನಗರದ ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಚೇರಿ ಸಭಾಂಗಣದಲ್ಲಿ ಸ್ಥಳೀಯ ಮಾನವ ಬಂಧುತ್ವ ವೇದಿಕೆಯು ಏರ್ಪಡಿಸಿದ್ದ ಮಾನವತಾವಾದಿ ಬಸವಣ್ಣನವರ ಜನ್ಮದಿನ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
    ಮೇಲು ಕೀಳು, ಬಡವ  ಬಲ್ಲಿದ, ಗಂಡು ಹೆಣ್ಣು ತಾರತಮ್ಯಕ್ಕೆ ಮೂಲ ಕಾರಣ ಆರ್ಥಿಕ ಅಸಮಾನತೆಯಾಗಿರುವುರಿಂದ ಅದನ್ನು ಪಲ್ಲಟಗೊಳಿಸುವುದು ಬಸವಣ್ಣನವರ ಉದ್ದೇಶವಾಗಿತ್ತು. ಬುದ್ಧನ ನಂತರ ಸಂಪತ್ತಿನ ಕ್ರೋಢೀಕರಣವನ್ನು ವೈಚಾರಿಕ ನೆಲೆಯಲ್ಲಿ ವಿರೋಧಿಸಿದ ಬಸವಣ್ಣನವರು ಕಾಯಕ ಮತ್ತು ತ್ರಿವಿಧ ದಾಸೋಹದ ಮೂಲಕ ಆರ್ಥಿಕ ಸಮಾನತೆಗೆ ಹೊಸ ದಾರಿ ತೋರಿದರು  ಎಂದು ಡಾ. ಹಿಮ್ಮಡಿ ವಿವರಿಸಿದರು.
      ಆರಂಭದಲ್ಲಿ ಶ್ರೀಮತಿ ಶಾಂತಾ ಕೋಲ್ಕಾರ್ ಮತ್ತು ಶ್ರೀಮತಿ ಕಾವೇರಿ ಗಾವಡೆ ಬಸವಣ್ಣನವರ ಭಾವಚಿತ್ರಕ್ಕೆ ಆರತಿ ಬೆಳಗಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬಸವರಾಜ ಕೋಲ್ಕಾರ್, ಸನ್ನಿ ಬನ್ಸ್, ಭಾಗ್ಯಶ್ರೀ ಗಾವಡೆ, ತೇಜಸ್ ಗಾವಡೆ, ಸ್ವಾನಂದಿ ಗಾವಡೆ, ಅಂಕುಶ ಗಾವಡೆ, ಮನೋಜ ನೇಸರಿಕರ ಇತರರು ಉಪಸ್ಥಿತರಿದ್ದರು. ಪ್ರಕಾಶ್ ಬೊಮ್ಮಣ್ಣವರ್ ಸ್ವಾಗತಿಸಿದರು, ಅಂಕುಶ್ ಪಾಟೀಲ ವಂದಿಸಿದರು, ಕಿರಣ ಕಾಂಬಳೆ ನಿರೂಪಿಸಿದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಪತ್ತಿನ ಸಮಾನ ಹಂಚಿಕೆ ಬಸವಣ್ಣನವರ ಆದರ್ಶ : ಡಾ. ಯಲ್ಲಪ್ಪ ಹಿಮ್ಮಡಿ ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆ