ಜಮಖAಡಿ: ೨೦೨೬ರ ಮಾರ್ಚ್-ಏಪ್ರಿಲ್ನಲ್ಲಿ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆ-೧ಕ್ಕೆ ಬಸವಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಿಂದ ಪರೀಕ್ಷೆ ಬರೆದಿದ್ದ ಎಲ್ಲ ೪೦ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ ೧೦೦ ಫಲಿತಾಂಶ ನೀಡಿದ್ದಾರೆ ಎಂದು ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ತಿಳಿಸಿದ್ದಾರೆ.
ಉತ್ತೀರ್ಣರಾದವರಲ್ಲಿ ೧೨ ಡಿಸ್ಟಿಂಕ್ಷನ್, ೨೫ ಪ್ರಥಮ ಶ್ರೇಣಿ ಹಾಗೂ ೩ ದ್ವಿತೀಯ ಶ್ರೇಣಿಯಲ್ಲಿದ್ದಾರೆ. ಸರಸ್ವತಿ ರಾಜಪುರೋಹಿತ ಶೇ ೯೭.೬ ಅಂಕಗಳಿಸಿ ಪ್ರೌಢಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಿರಣ ಮರನೂರ ಶೇ ೯೨.೬೪, ನವ್ಯಾ ಅವಳೆ ಶೇ ೯೨.೪೮, ಗೌರಿ ಮೋರೆ ಶೇ ೯೧.೮೪, ರೋಹಿತ ಅರ್ಜುನವಾಡಿ ಶೇ ೯೧.೩೬ ಹಾಗೂ ಭಾಗ್ಯಶ್ರೀ ಶೇ ೮೯.೯೨ ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಸರಸ್ವತಿ ರಾಜಪುರೋಹಿತ ಹಿಂದಿಗೆ ೧೦೦ಕ್ಕೆ ೧೦೦, ರೋಹಿತ ಅರ್ಜುನವಾಡಿ, ಸಾನ್ವಿ ನರಸಗೊಂಡ ಇಬ್ಬರೂ ಕನ್ನಡಕ್ಕೆ ೧೦೦ಕ್ಕೆ ೧೦೦ ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ.ಗಿರೀಶ ಕಡ್ಡಿ, ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ, ಮುಖ್ಯಗುರುಗಳು ಪಿ.ಐ. ಹೊಸಮಠ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.